<p><strong>ಮೈಸೂರು: </strong>ಅರಮನೆಯ ಹೊರ ಆವರಣದಲ್ಲಿ ಮಂಗಳವಾರ ದಸರಾ ಗಜಪಡೆಯ ಕುಶಾಲತೋಪು ಸಿಡಿಸುವ 2ನೇ ಹಂತದ ತಾಲೀಮಿನಲ್ಲಿ ಹೆಣ್ಣಾನೆಗಳಿಗಿಂತ ಗಂಡಾನೆಗಳೇ ಬೆದರಿದವು.</p>.<p>ತಾಲೀಮಿನಲ್ಲಿ ಗೋಪಾಲಸ್ವಾಮಿ, ಧನಂಜಯ ಹಾಗೂ ಅಶ್ವತ್ಥಾಮ ಆನೆಗಳು ಶಬ್ದದ ತೀವ್ರತೆಗೆ ಬೆಚ್ಚಿ ಹಿಂದಡಿ ಇಟ್ಟವು. ಕಳೆದ ಬಾರಿಯೂ ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ಆನೆಗಳು ಬೆಚ್ಚಿದ್ದವು.</p>.<p>ಕಳೆದ ಬಾರಿ ಬೆದರಿದ್ದ ಲಕ್ಷ್ಮೀ ಆನೆ ಈ ಬಾರಿ ಜಗ್ಗದೆ ನಿಂತಿತ್ತು. ಅದರೊಂದಿಗೆ, ಇತರೆ ಹೆಣ್ಣಾನೆಗಳಾದ ಕಾವೇರಿ, ಚೈತ್ರಾ ಸಹ ಬೆದರದೇ ನಿಂತಿದ್ದವು. ಅಭಿಮನ್ಯು ಎಂದಿನಂತೆ ರಾಜಗಾಂಭೀರ್ಯವನ್ನು ಕಾಪಾಡಿಕೊಂಡು ಸೈ ಎನ್ನಿಸಿಕೊಂಡಿತು. ಮಸ್ತಿಯಲ್ಲಿದ್ದ ವಿಕ್ರಮ ಆನೆಯನ್ನು ಈ ಬಾರಿ ತಾಲೀಮಿನಿಂದ ದೂರ ಇರಿಸಲಾಗಿತ್ತು. ಕಳೆದ ಬಾರಿಗಿಂತ ಶಬ್ದದ ತೀವ್ರತೆ ಈ ಬಾರಿ ಹೆಚ್ಚಿತ್ತು.</p>.<p>ತಾಲೀಮು ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಕರಿಕಾಳನ್, ‘ಕಳೆದ ಬಾರಿ ಆನೆಗಳನ್ನು ಸರಪಣಿಯಿಂದ ಬಿಗಿಯಲಾಗಿತ್ತು. ಆದರೆ, ಈ ಬಾರಿ ಸರಪಣಿ ತೆಗೆಯಲಾಗಿತ್ತು. ಶಬ್ದದ ತೀವ್ರತೆಗೆ ಆನೆಗಳು ಸ್ಪಂದಿಸಿದ ರೀತಿ ತೃಪ್ತಿ ತಂದಿದೆ. ಅ. 8ರಂದು ನಡೆಯಲಿರುವ ಕೊನೆಯ ತಾಲೀಮಿನಲ್ಲಿಇನ್ನಷ್ಟು ಉತ್ತಮವಾಗಿ ಆನೆಗಳು ಸ್ಪಂದಿಸಲಿವೆ. ವಿಕ್ರಮ ಆನೆ ಮಸ್ತಿಯಲ್ಲಿರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಅರಮನೆಯ ಹೊರ ಆವರಣದಲ್ಲಿ ಮಂಗಳವಾರ ದಸರಾ ಗಜಪಡೆಯ ಕುಶಾಲತೋಪು ಸಿಡಿಸುವ 2ನೇ ಹಂತದ ತಾಲೀಮಿನಲ್ಲಿ ಹೆಣ್ಣಾನೆಗಳಿಗಿಂತ ಗಂಡಾನೆಗಳೇ ಬೆದರಿದವು.</p>.<p>ತಾಲೀಮಿನಲ್ಲಿ ಗೋಪಾಲಸ್ವಾಮಿ, ಧನಂಜಯ ಹಾಗೂ ಅಶ್ವತ್ಥಾಮ ಆನೆಗಳು ಶಬ್ದದ ತೀವ್ರತೆಗೆ ಬೆಚ್ಚಿ ಹಿಂದಡಿ ಇಟ್ಟವು. ಕಳೆದ ಬಾರಿಯೂ ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮ ಆನೆಗಳು ಬೆಚ್ಚಿದ್ದವು.</p>.<p>ಕಳೆದ ಬಾರಿ ಬೆದರಿದ್ದ ಲಕ್ಷ್ಮೀ ಆನೆ ಈ ಬಾರಿ ಜಗ್ಗದೆ ನಿಂತಿತ್ತು. ಅದರೊಂದಿಗೆ, ಇತರೆ ಹೆಣ್ಣಾನೆಗಳಾದ ಕಾವೇರಿ, ಚೈತ್ರಾ ಸಹ ಬೆದರದೇ ನಿಂತಿದ್ದವು. ಅಭಿಮನ್ಯು ಎಂದಿನಂತೆ ರಾಜಗಾಂಭೀರ್ಯವನ್ನು ಕಾಪಾಡಿಕೊಂಡು ಸೈ ಎನ್ನಿಸಿಕೊಂಡಿತು. ಮಸ್ತಿಯಲ್ಲಿದ್ದ ವಿಕ್ರಮ ಆನೆಯನ್ನು ಈ ಬಾರಿ ತಾಲೀಮಿನಿಂದ ದೂರ ಇರಿಸಲಾಗಿತ್ತು. ಕಳೆದ ಬಾರಿಗಿಂತ ಶಬ್ದದ ತೀವ್ರತೆ ಈ ಬಾರಿ ಹೆಚ್ಚಿತ್ತು.</p>.<p>ತಾಲೀಮು ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಸಿಎಫ್ ಕರಿಕಾಳನ್, ‘ಕಳೆದ ಬಾರಿ ಆನೆಗಳನ್ನು ಸರಪಣಿಯಿಂದ ಬಿಗಿಯಲಾಗಿತ್ತು. ಆದರೆ, ಈ ಬಾರಿ ಸರಪಣಿ ತೆಗೆಯಲಾಗಿತ್ತು. ಶಬ್ದದ ತೀವ್ರತೆಗೆ ಆನೆಗಳು ಸ್ಪಂದಿಸಿದ ರೀತಿ ತೃಪ್ತಿ ತಂದಿದೆ. ಅ. 8ರಂದು ನಡೆಯಲಿರುವ ಕೊನೆಯ ತಾಲೀಮಿನಲ್ಲಿಇನ್ನಷ್ಟು ಉತ್ತಮವಾಗಿ ಆನೆಗಳು ಸ್ಪಂದಿಸಲಿವೆ. ವಿಕ್ರಮ ಆನೆ ಮಸ್ತಿಯಲ್ಲಿರುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ’ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>