<p><strong>ಮೈಸೂರು: ‘</strong>ಸಮಾಜದಲ್ಲಿನ ಬಡವರ ಕಷ್ಟಗಳಿಗೆ ಸ್ಪಂದಿಸಿ, ಅವರ ಶಿಕ್ಷಣ ಮತ್ತು ಆರೋಗ್ಯಕ್ಕೆ ಪೂರಕವಾದ ಅನೇಕ ಶಿಬಿರಗಳನ್ನು ಏರ್ಪಡಿಸುವ ಮೂಲಕ ಲಯನ್ಸ್ ಕ್ಲಬ್ ಬಡವರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ವಿ.ರೇಣುಕುಮಾರ್ ಹೇಳಿದರು.</p>.<p>ಇಲ್ಲಿನ ತಿಲಕ್ ನಗರದ ಲಯನ್ಸ್ ಕ್ಲಬ್ ಆಫ್ ಮೈಸೂರಿನಲ್ಲಿ ಈಚೆಗೆ ನಡೆದ ಲಯನ್ಸ್ ಕ್ಲಬ್ನ ಸಂಚಿಕೆ ಬಿಡುಗಡೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾಜಕ್ಕೆ ಅರ್ಥಪೂರ್ಣವಾದಂತಹ ಕೆಲಸ ಮಾಡುವ ಮೂಲಕ, ಲಯನ್ಸ್ ಕ್ಲಬ್ ವಿಶ್ವದಲ್ಲೇ ವಿಶೇಷವಾಗಿ ಗುರುತಿಸಲ್ಪಟಿದೆ’ ಎಂದರು.</p>.<p>ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ 317ಎನ ಗವರ್ನರ್ ನಾಗರಾಜ್ ವಿ.ಬೇರಿ ನಮ್ಮ ಮೈಸೂರಿನವರೇ ಆಗಿದ್ದು, ಅವರ ಮಾರ್ಗದರ್ಶನದಲ್ಲಿ ಸದಸ್ಯರ ಸಲಹೆ, ಸಹಕಾರ ಪಡೆದು ಹೆಚ್ಚಿನ ಸೇವಾ ಕಾರ್ಯ ಕೈಗೊಳ್ಳುತ್ತೇನೆ ಎಂದು ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮರಿಶೆಟ್ಟಿ ತಿಳಿಸಿದರು.</p>.<p>ಡಾ.ಪ್ರಭಾಮಂಡಲ್ ಪ್ರಸಕ್ತ ಸಾಲಿನ ಕ್ಲಬ್ಬಿನ ಡೈರೆಕ್ಟರಿ (ಸಂಚಿಕೆ) ಬಿಡುಗಡೆ ಮಾಡಿದರು. ಕ್ಲಬ್ನ ಪದಾಧಿಕಾರಿಗಳಾದ ಪ್ರತಿಮಾ ರಮೇಶ್, ಎಸ್.ಸಿದ್ದರಾಜು, ಕೆ.ಎಸ್.ಕೃಷ್ಣಮೂರ್ತಿ, ಮೋಹನ್, ಪಿ.ಎಸ್.ಚಂದ್ರಶೇಖರ, ಚಾಮರಾಜ್, ಶಿವಕುಮಾರ್, ಉಮಾಪತಿ, ಕೃಷ್ಣೋಜಿರಾವ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಸಮಾಜದಲ್ಲಿನ ಬಡವರ ಕಷ್ಟಗಳಿಗೆ ಸ್ಪಂದಿಸಿ, ಅವರ ಶಿಕ್ಷಣ ಮತ್ತು ಆರೋಗ್ಯಕ್ಕೆ ಪೂರಕವಾದ ಅನೇಕ ಶಿಬಿರಗಳನ್ನು ಏರ್ಪಡಿಸುವ ಮೂಲಕ ಲಯನ್ಸ್ ಕ್ಲಬ್ ಬಡವರ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದೆ’ ಎಂದು ವಿ.ರೇಣುಕುಮಾರ್ ಹೇಳಿದರು.</p>.<p>ಇಲ್ಲಿನ ತಿಲಕ್ ನಗರದ ಲಯನ್ಸ್ ಕ್ಲಬ್ ಆಫ್ ಮೈಸೂರಿನಲ್ಲಿ ಈಚೆಗೆ ನಡೆದ ಲಯನ್ಸ್ ಕ್ಲಬ್ನ ಸಂಚಿಕೆ ಬಿಡುಗಡೆ ಮತ್ತು ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾಜಕ್ಕೆ ಅರ್ಥಪೂರ್ಣವಾದಂತಹ ಕೆಲಸ ಮಾಡುವ ಮೂಲಕ, ಲಯನ್ಸ್ ಕ್ಲಬ್ ವಿಶ್ವದಲ್ಲೇ ವಿಶೇಷವಾಗಿ ಗುರುತಿಸಲ್ಪಟಿದೆ’ ಎಂದರು.</p>.<p>ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆ 317ಎನ ಗವರ್ನರ್ ನಾಗರಾಜ್ ವಿ.ಬೇರಿ ನಮ್ಮ ಮೈಸೂರಿನವರೇ ಆಗಿದ್ದು, ಅವರ ಮಾರ್ಗದರ್ಶನದಲ್ಲಿ ಸದಸ್ಯರ ಸಲಹೆ, ಸಹಕಾರ ಪಡೆದು ಹೆಚ್ಚಿನ ಸೇವಾ ಕಾರ್ಯ ಕೈಗೊಳ್ಳುತ್ತೇನೆ ಎಂದು ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಮರಿಶೆಟ್ಟಿ ತಿಳಿಸಿದರು.</p>.<p>ಡಾ.ಪ್ರಭಾಮಂಡಲ್ ಪ್ರಸಕ್ತ ಸಾಲಿನ ಕ್ಲಬ್ಬಿನ ಡೈರೆಕ್ಟರಿ (ಸಂಚಿಕೆ) ಬಿಡುಗಡೆ ಮಾಡಿದರು. ಕ್ಲಬ್ನ ಪದಾಧಿಕಾರಿಗಳಾದ ಪ್ರತಿಮಾ ರಮೇಶ್, ಎಸ್.ಸಿದ್ದರಾಜು, ಕೆ.ಎಸ್.ಕೃಷ್ಣಮೂರ್ತಿ, ಮೋಹನ್, ಪಿ.ಎಸ್.ಚಂದ್ರಶೇಖರ, ಚಾಮರಾಜ್, ಶಿವಕುಮಾರ್, ಉಮಾಪತಿ, ಕೃಷ್ಣೋಜಿರಾವ್ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>