<p><strong>ಮೈಸೂರು:</strong> ನಗರದ ಲಲಿತಾದ್ರಿಪುರ ರಸ್ತೆಯಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಆರಂಭವಾಗಿರುವ ‘ಆಯುರ್ವೇದ ಔಷಧಗಳ ಉತ್ಪಾದನಾ ಘಟಕ ಹಾಗೂ ಫಾರ್ಮಸಿ’ಯನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಗುರುವಾರ ಉದ್ಘಾಟಿಸಿದರು.</p>.<p>ಪಾರಂಪರಿಕ ವಿಧಾನದಲ್ಲಿ ಆಯು ರ್ವೇದ ಔಷಧಗಳನ್ನು ತಯಾರಿಸುವ ಘಟಕ ಇದಾಗಿದ್ದು, ಸುಮಾರು 20 ವಿಧದ ಲೇಹ್ಯ, ಚೂರ್ಣ, ಮಾತ್ರೆಗಳನ್ನು ತಯಾರಿಸಲಾಗುತ್ತದೆ.</p>.<p>ಇಲ್ಲಿ ತಯಾರಾಗುವ ಔಷಧಗಳನ್ನು ಮಾರಾಟ ಮಾಡಲು ಫಾರ್ಮಸಿಯನ್ನು ಕೂಡ ತೆರೆಯಲಾಗಿದೆ. ಆಯುರ್ವೇದ ಆಸ್ಪತ್ರೆಗೆ ಬರುವ ರೋಗಿಗಳು ಹೊರಗಿ ನಿಂದ ಔಷಧಿ ತರಬೇಕೆಂದಿಲ್ಲ. ಬಹು ತೇಕ ಔಷಧಿಗಳು ಇಲ್ಲಿ ಲಭ್ಯವಾಗಲಿದೆ.</p>.<p>ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೈಸೂರಿನಲ್ಲಿ ಆಯುರ್ವೇದ ಚಿಕಿತ್ಸೆಗಾಗಿ ಮೊದಲು ಇದ್ದದ್ದು ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ಮಾತ್ರ. ಆಯುರ್ವೇದ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡು 28 ವರ್ಷಗಳ ಹಿಂದೆ ಈ ಆಸ್ಪತ್ರೆ ಆರಂಭವಾಯಿತು. ಕಾಲೇಜು ಹಾಗೂ ಆಸ್ಪತ್ರೆಯನ್ನು ಆ ಬಳಿಕ ಇಲ್ಲಿನ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಎಂದು ಹೇಳಿದರು.</p>.<p>‘ರೋಗಿಗಳಿಗೆ ಬೇಕಾದ ಔಷಧ ಇಲ್ಲಿಯೇ ತಯಾರಿಸಬೇಕು ಎಂಬ ಯೋಚನೆ ಬಹಳ ಸಮಯದಿಂದ ಇತ್ತು. ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಔಷಧ ತಯಾರಿಸಲಾಗುತ್ತಿತ್ತು. ಈಗ ಇನ್ನಷ್ಟು ಔಷಧ ತಯಾರಿಸಲು ಅನುಮತಿ ಲಭಿಸಿರುವುದರಿಂದ ಘಟಕ ಆರಂಭಿಸಲಾಗಿದೆ’ ಎಂದರು.</p>.<p>‘ಗುಣಮಟ್ಟದಿಂದ ಕೂಡಿರುವ ಈ ಔಷಧಿ, ಜನರಿಗೆ ಕೈ ಗೆಟಕುವ ದರದಲ್ಲಿ ಒದಗಿಸುವ ಉದ್ದೇಶ ಹೊಂದಿದ್ದೇವೆ. ಈ ಘಟಕದಲ್ಲಿ ತಯಾರಿಸಲಾಗುವ ಔಷಧಿಗಳನ್ನು ಸದ್ಯಕ್ಕೆ ಇಲ್ಲಿಗೆ ಬರುವ ರೋಗಿಗಳಿಗೆ ಮಾತ್ರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಚಿಂತನೆಯೂ ಇದೆ’ ಎಂದರು.</p>.<p>ಈ ಘಟಕದಲ್ಲಿ ಲಾಕ್ಷಾ ಗುಗ್ಗುಲು, ತ್ರಿಫಲ ಗುಗ್ಗುಲು, ತ್ರಯೋದಶಾಂಗ ಗುಗ್ಗುಲು, ತ್ರಿಕಟು ಚೂರ್ಣ, ಬಲಾಶ್ವಗಂಧ ತೈಲ, ಅಶ್ವಗಂಧ ತೈಲ ಒಳಗೊಂಡಂತೆ ಹಲವು ವಿಧದ ಚೂರ್ಣಗಳು ಮತ್ತು ತೈಲ ತಯಾರಿಸಲಾಗುತ್ತದೆ.</p>.<p>ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರದ ಲಲಿತಾದ್ರಿಪುರ ರಸ್ತೆಯಲ್ಲಿರುವ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯ ಆವರಣದಲ್ಲಿ ಆರಂಭವಾಗಿರುವ ‘ಆಯುರ್ವೇದ ಔಷಧಗಳ ಉತ್ಪಾದನಾ ಘಟಕ ಹಾಗೂ ಫಾರ್ಮಸಿ’ಯನ್ನು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಗುರುವಾರ ಉದ್ಘಾಟಿಸಿದರು.</p>.<p>ಪಾರಂಪರಿಕ ವಿಧಾನದಲ್ಲಿ ಆಯು ರ್ವೇದ ಔಷಧಗಳನ್ನು ತಯಾರಿಸುವ ಘಟಕ ಇದಾಗಿದ್ದು, ಸುಮಾರು 20 ವಿಧದ ಲೇಹ್ಯ, ಚೂರ್ಣ, ಮಾತ್ರೆಗಳನ್ನು ತಯಾರಿಸಲಾಗುತ್ತದೆ.</p>.<p>ಇಲ್ಲಿ ತಯಾರಾಗುವ ಔಷಧಗಳನ್ನು ಮಾರಾಟ ಮಾಡಲು ಫಾರ್ಮಸಿಯನ್ನು ಕೂಡ ತೆರೆಯಲಾಗಿದೆ. ಆಯುರ್ವೇದ ಆಸ್ಪತ್ರೆಗೆ ಬರುವ ರೋಗಿಗಳು ಹೊರಗಿ ನಿಂದ ಔಷಧಿ ತರಬೇಕೆಂದಿಲ್ಲ. ಬಹು ತೇಕ ಔಷಧಿಗಳು ಇಲ್ಲಿ ಲಭ್ಯವಾಗಲಿದೆ.</p>.<p>ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮೈಸೂರಿನಲ್ಲಿ ಆಯುರ್ವೇದ ಚಿಕಿತ್ಸೆಗಾಗಿ ಮೊದಲು ಇದ್ದದ್ದು ಸರ್ಕಾರಿ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ಮಾತ್ರ. ಆಯುರ್ವೇದ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚುತ್ತಿರುವುದನ್ನು ಮನಗಂಡು 28 ವರ್ಷಗಳ ಹಿಂದೆ ಈ ಆಸ್ಪತ್ರೆ ಆರಂಭವಾಯಿತು. ಕಾಲೇಜು ಹಾಗೂ ಆಸ್ಪತ್ರೆಯನ್ನು ಆ ಬಳಿಕ ಇಲ್ಲಿನ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು ಎಂದು ಹೇಳಿದರು.</p>.<p>‘ರೋಗಿಗಳಿಗೆ ಬೇಕಾದ ಔಷಧ ಇಲ್ಲಿಯೇ ತಯಾರಿಸಬೇಕು ಎಂಬ ಯೋಚನೆ ಬಹಳ ಸಮಯದಿಂದ ಇತ್ತು. ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಔಷಧ ತಯಾರಿಸಲಾಗುತ್ತಿತ್ತು. ಈಗ ಇನ್ನಷ್ಟು ಔಷಧ ತಯಾರಿಸಲು ಅನುಮತಿ ಲಭಿಸಿರುವುದರಿಂದ ಘಟಕ ಆರಂಭಿಸಲಾಗಿದೆ’ ಎಂದರು.</p>.<p>‘ಗುಣಮಟ್ಟದಿಂದ ಕೂಡಿರುವ ಈ ಔಷಧಿ, ಜನರಿಗೆ ಕೈ ಗೆಟಕುವ ದರದಲ್ಲಿ ಒದಗಿಸುವ ಉದ್ದೇಶ ಹೊಂದಿದ್ದೇವೆ. ಈ ಘಟಕದಲ್ಲಿ ತಯಾರಿಸಲಾಗುವ ಔಷಧಿಗಳನ್ನು ಸದ್ಯಕ್ಕೆ ಇಲ್ಲಿಗೆ ಬರುವ ರೋಗಿಗಳಿಗೆ ಮಾತ್ರ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಚಿಂತನೆಯೂ ಇದೆ’ ಎಂದರು.</p>.<p>ಈ ಘಟಕದಲ್ಲಿ ಲಾಕ್ಷಾ ಗುಗ್ಗುಲು, ತ್ರಿಫಲ ಗುಗ್ಗುಲು, ತ್ರಯೋದಶಾಂಗ ಗುಗ್ಗುಲು, ತ್ರಿಕಟು ಚೂರ್ಣ, ಬಲಾಶ್ವಗಂಧ ತೈಲ, ಅಶ್ವಗಂಧ ತೈಲ ಒಳಗೊಂಡಂತೆ ಹಲವು ವಿಧದ ಚೂರ್ಣಗಳು ಮತ್ತು ತೈಲ ತಯಾರಿಸಲಾಗುತ್ತದೆ.</p>.<p>ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>