<p><strong>ಮೈಸೂರು:</strong> ಪಾರಂಪರಿಕ ಮಹತ್ವವಿರುವ ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಶುರುವಾಗಿದ್ದು, ಇದರ ಅಂಗವಾಗಿ ಫೆ.10ರಿಂದ ಫ್ಲಾಟ್ಫಾರ್ಮ್ ನಂ.2 ಸ್ಥಗಿತಗೊಳ್ಳಲಿದೆ.</p>.<p>ಅಂತೆಯೇ, ಈ ಪ್ಲಾಟ್ಫಾರ್ಮ್ನಿಂದ ಸಂಚರಿಸುತ್ತಿದ್ದ ಐದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ರೈಲುಗಳು ಸನಿಹದ ರೈಲು ನಿಲ್ದಾಣಗಳಿಂದ ಪಯಣ ಬೆಳೆಸಲಿವೆ.</p>.<p>ಪ್ಲಾಟ್ಫಾರ್ಮ್ ನಂ.2ರಲ್ಲಿ ಆರಂಭದಿಂದಲೂ ಶುಚಿತ್ವಕ್ಕೆ ಬಳಸುವ ನೀರು ಸರಿಯಾಗಿ ಹರಿಯದೇ ತೊಂದರೆಯಾಗುತ್ತಿತ್ತು. ಈ ಕುರಿತು ಕ್ರಮ ತೆಗೆದುಕೊಂಡಿರುವ ನೈರುತ್ಯ ರೈಲ್ವೆ, ನೀರು ಸರಾಗವಾಗಿ ಹರಿಯಲು ಕಿರು ಕಾಲುವೆಯನ್ನು ನಿರ್ಮಿಸುತ್ತಿದೆ. ಪ್ಲಾಟ್ಫಾರ್ಮ್ ನಂ.2ರಿಂದ ಶುರುವಾಗುವ ಈ ಕಾಲುವೆಯು ಮೈಸೂರು ಯಾರ್ಡಿನಿಂದ, ರೈಲ್ವೆ ಮೈಸೂರು ವಿಭಾಗದ 2ನೇ ರಸ್ತೆಗೆ ಸೇರುತ್ತದೆ. ಹಾಗಾಗಿ, ಪ್ಲಾಟ್ಫಾರ್ಮ್ ಹಾಗೂ ರೈಲುಗಳನ್ನು ತೊಳೆಯಲು ಬಳಸುವ ನೀರು ಈ ಕಾಲುವೆಯ ಮೂಲಕ ಸರಾಗವಾಗಿ ಹರಿಯಲಿದೆ. ಇದರಿಂದ ರೈಲು ನಿಲ್ದಾಣದ ಒಳಾಂಗಣ ಶುಚಿಯಾಗಿರುತ್ತದೆ ಎಂದು ನೈರುತ್ಯ ರೈಲ್ವೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.</p>.<p><strong>ಕೊಂಚ ವ್ಯತ್ಯಯ:</strong> ಈಗ ನಡೆಯ ಲಿರುವ ಕಾಮಗಾರಿಗಳಿಂದಾಗಿ ಫೆ.10ರಿಂದ ಮಾರ್ಚ್ 10ರವರೆಗೆ ಒಟ್ಟು 29 ದಿನ 5 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.</p>.<p>ಶಿವಮೊಗ್ಗ – ಮೈಸೂರು ಪ್ಯಾಸೆಂಜರ್ ರೈಲು (56269) ಬೆಳಗೊಳ ನಿಲ್ದಾಣದಲ್ಲಿ ಅಂತ್ಯಗೊಳ್ಳಲಿದೆ. ಮೈಸೂರು – ಅರಸೀಕೆರೆ ಪ್ಯಾಸೆಂಜರ್ ರೈಲು (56268) ಬೆಳಗೊಳ ನಿಲ್ದಾಣ ದಿಂದ ಹೊರಡಲಿದೆ. ಚಾಮರಾಜ ನಗರ – ಮೈಸೂರು ಪ್ಯಾಸೆಂಜರ್ ರೈಲು (56207) ಅಶೋಕಪುರಂ ನಿಲ್ದಾಣದಲ್ಲಿ 45 ನಿಮಿಷ ಕಾಲ ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು (56263) ಬೆಳಗೊಳ ನಿಲ್ದಾಣದಲ್ಲಿ ನಿಲ್ಲಲಿದೆ. ಮೈಸೂರು - ಬೆಂಗಳೂರು ಪ್ಯಾಸೆಂಜರ್ ರೈಲು (56263) ಮೈಸೂರು ನಿಲ್ದಾಣಕ್ಕೆ ಮುಂಚೆಯೇ ನಿಲ್ಲಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p><strong>ನಿಲ್ದಾಣ ಮೇಲ್ದರ್ಜೆ ಪ್ರಗತಿಯಲ್ಲಿ</strong><br />ಬಹುನಿರೀಕ್ಷಿತ ರೈಲು ನಿಲ್ದಾಣ ಮೇಲ್ದರ್ಜೆ ಕಾರ್ಯಕ್ರಮ ಈಗಾಗಲೇ ಶುರುವಾಗಿದೆ. ಕೇಂದ್ರ ಸರ್ಕಾರವು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ₹ 16.5 ಕೋಟಿ ಅನುದಾನ ನೀಡಿದ್ದು, 10ಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿವೆ.</p>.<p>ನಿಲ್ದಾಣದಲ್ಲಿ ಈಗ ಮೇಲೆ ಸಾಗುವ ಎಸ್ಕಲೇಟರ್ ಇದೆ. ಇದೀಗ ಕೆಳಕ್ಕೆ ಸಾಗುವ ಎಸ್ಕಲೇಟರ್ ಸಹ ಸೇರ್ಪಡೆಯಾಗುತ್ತಿದೆ. ಮುಖ್ಯವಾಗಿ ಪರಿಪೂರ್ಣ ಹೊಸ ವಾಹನ ನಿಲುಗಡೆ ಕೇಂದ್ರ ಬರಲಿದೆ.</p>.<p>ಜತೆಗೆ, ಪ್ರವೇಶದ್ವಾರ ಹೊಸ ರೂಪ ಪಡೆಯಲಿವೆ. ಸುಮಾರು 1 ಕಿಲೋಮೀಟರ್ ದೂರಕ್ಕೆ ಕಾಣುವಂತೆ ರೈಲ್ವೆ ಧ್ವಜ ತಲೆ ಎತ್ತಲಿವೆ ಎಂದು ಸಂಸದ ಪ್ರತಾಪ ಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ನಿಲ್ದಾಣದ ಒಳಾಂಗಣದಲ್ಲಿ ಹಂತ ಹಂತವಾಗಿ ಒಂದೊಂದೇ ಫ್ಲಾಟ್ ಫಾರ್ಮ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರಿನಲ್ಲಿ 40ಕ್ಕೂ ಹೆಚ್ಚು ರೈಲುಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಏಕಕಾಲಕ್ಕೆ ಉನ್ನತೀಕರಣ ಅಸಾಧ್ಯ. ಹಾಗಾಗಿ, ಒಂದೊಂದೇ ಫ್ಲಾಟ್ಫಾರ್ಮ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಒಂದೂವರೆ ವರ್ಷದಲ್ಲಿ ಮೇಲ್ದರ್ಜೆ ಪೂರ್ಣಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಪಾರಂಪರಿಕ ಮಹತ್ವವಿರುವ ಮೈಸೂರು ರೈಲು ನಿಲ್ದಾಣದ ಮೇಲ್ದರ್ಜೆ ಕಾಮಗಾರಿ ಶುರುವಾಗಿದ್ದು, ಇದರ ಅಂಗವಾಗಿ ಫೆ.10ರಿಂದ ಫ್ಲಾಟ್ಫಾರ್ಮ್ ನಂ.2 ಸ್ಥಗಿತಗೊಳ್ಳಲಿದೆ.</p>.<p>ಅಂತೆಯೇ, ಈ ಪ್ಲಾಟ್ಫಾರ್ಮ್ನಿಂದ ಸಂಚರಿಸುತ್ತಿದ್ದ ಐದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ರೈಲುಗಳು ಸನಿಹದ ರೈಲು ನಿಲ್ದಾಣಗಳಿಂದ ಪಯಣ ಬೆಳೆಸಲಿವೆ.</p>.<p>ಪ್ಲಾಟ್ಫಾರ್ಮ್ ನಂ.2ರಲ್ಲಿ ಆರಂಭದಿಂದಲೂ ಶುಚಿತ್ವಕ್ಕೆ ಬಳಸುವ ನೀರು ಸರಿಯಾಗಿ ಹರಿಯದೇ ತೊಂದರೆಯಾಗುತ್ತಿತ್ತು. ಈ ಕುರಿತು ಕ್ರಮ ತೆಗೆದುಕೊಂಡಿರುವ ನೈರುತ್ಯ ರೈಲ್ವೆ, ನೀರು ಸರಾಗವಾಗಿ ಹರಿಯಲು ಕಿರು ಕಾಲುವೆಯನ್ನು ನಿರ್ಮಿಸುತ್ತಿದೆ. ಪ್ಲಾಟ್ಫಾರ್ಮ್ ನಂ.2ರಿಂದ ಶುರುವಾಗುವ ಈ ಕಾಲುವೆಯು ಮೈಸೂರು ಯಾರ್ಡಿನಿಂದ, ರೈಲ್ವೆ ಮೈಸೂರು ವಿಭಾಗದ 2ನೇ ರಸ್ತೆಗೆ ಸೇರುತ್ತದೆ. ಹಾಗಾಗಿ, ಪ್ಲಾಟ್ಫಾರ್ಮ್ ಹಾಗೂ ರೈಲುಗಳನ್ನು ತೊಳೆಯಲು ಬಳಸುವ ನೀರು ಈ ಕಾಲುವೆಯ ಮೂಲಕ ಸರಾಗವಾಗಿ ಹರಿಯಲಿದೆ. ಇದರಿಂದ ರೈಲು ನಿಲ್ದಾಣದ ಒಳಾಂಗಣ ಶುಚಿಯಾಗಿರುತ್ತದೆ ಎಂದು ನೈರುತ್ಯ ರೈಲ್ವೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.</p>.<p><strong>ಕೊಂಚ ವ್ಯತ್ಯಯ:</strong> ಈಗ ನಡೆಯ ಲಿರುವ ಕಾಮಗಾರಿಗಳಿಂದಾಗಿ ಫೆ.10ರಿಂದ ಮಾರ್ಚ್ 10ರವರೆಗೆ ಒಟ್ಟು 29 ದಿನ 5 ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ.</p>.<p>ಶಿವಮೊಗ್ಗ – ಮೈಸೂರು ಪ್ಯಾಸೆಂಜರ್ ರೈಲು (56269) ಬೆಳಗೊಳ ನಿಲ್ದಾಣದಲ್ಲಿ ಅಂತ್ಯಗೊಳ್ಳಲಿದೆ. ಮೈಸೂರು – ಅರಸೀಕೆರೆ ಪ್ಯಾಸೆಂಜರ್ ರೈಲು (56268) ಬೆಳಗೊಳ ನಿಲ್ದಾಣ ದಿಂದ ಹೊರಡಲಿದೆ. ಚಾಮರಾಜ ನಗರ – ಮೈಸೂರು ಪ್ಯಾಸೆಂಜರ್ ರೈಲು (56207) ಅಶೋಕಪುರಂ ನಿಲ್ದಾಣದಲ್ಲಿ 45 ನಿಮಿಷ ಕಾಲ ಅರಸೀಕೆರೆ – ಮೈಸೂರು ಪ್ಯಾಸೆಂಜರ್ ರೈಲು (56263) ಬೆಳಗೊಳ ನಿಲ್ದಾಣದಲ್ಲಿ ನಿಲ್ಲಲಿದೆ. ಮೈಸೂರು - ಬೆಂಗಳೂರು ಪ್ಯಾಸೆಂಜರ್ ರೈಲು (56263) ಮೈಸೂರು ನಿಲ್ದಾಣಕ್ಕೆ ಮುಂಚೆಯೇ ನಿಲ್ಲಲಿದೆ ಎಂದು ಪ್ರಕಟಣೆ ತಿಳಿಸಿದೆ.</p>.<p><strong>ನಿಲ್ದಾಣ ಮೇಲ್ದರ್ಜೆ ಪ್ರಗತಿಯಲ್ಲಿ</strong><br />ಬಹುನಿರೀಕ್ಷಿತ ರೈಲು ನಿಲ್ದಾಣ ಮೇಲ್ದರ್ಜೆ ಕಾರ್ಯಕ್ರಮ ಈಗಾಗಲೇ ಶುರುವಾಗಿದೆ. ಕೇಂದ್ರ ಸರ್ಕಾರವು ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ₹ 16.5 ಕೋಟಿ ಅನುದಾನ ನೀಡಿದ್ದು, 10ಕ್ಕೂ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮ ನಡೆಯುತ್ತಿವೆ.</p>.<p>ನಿಲ್ದಾಣದಲ್ಲಿ ಈಗ ಮೇಲೆ ಸಾಗುವ ಎಸ್ಕಲೇಟರ್ ಇದೆ. ಇದೀಗ ಕೆಳಕ್ಕೆ ಸಾಗುವ ಎಸ್ಕಲೇಟರ್ ಸಹ ಸೇರ್ಪಡೆಯಾಗುತ್ತಿದೆ. ಮುಖ್ಯವಾಗಿ ಪರಿಪೂರ್ಣ ಹೊಸ ವಾಹನ ನಿಲುಗಡೆ ಕೇಂದ್ರ ಬರಲಿದೆ.</p>.<p>ಜತೆಗೆ, ಪ್ರವೇಶದ್ವಾರ ಹೊಸ ರೂಪ ಪಡೆಯಲಿವೆ. ಸುಮಾರು 1 ಕಿಲೋಮೀಟರ್ ದೂರಕ್ಕೆ ಕಾಣುವಂತೆ ರೈಲ್ವೆ ಧ್ವಜ ತಲೆ ಎತ್ತಲಿವೆ ಎಂದು ಸಂಸದ ಪ್ರತಾಪ ಸಿಂಹ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ನಿಲ್ದಾಣದ ಒಳಾಂಗಣದಲ್ಲಿ ಹಂತ ಹಂತವಾಗಿ ಒಂದೊಂದೇ ಫ್ಲಾಟ್ ಫಾರ್ಮ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಮೈಸೂರಿನಲ್ಲಿ 40ಕ್ಕೂ ಹೆಚ್ಚು ರೈಲುಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಏಕಕಾಲಕ್ಕೆ ಉನ್ನತೀಕರಣ ಅಸಾಧ್ಯ. ಹಾಗಾಗಿ, ಒಂದೊಂದೇ ಫ್ಲಾಟ್ಫಾರ್ಮ್ಗಳನ್ನು ಅಭಿವೃದ್ಧಿಪಡಿಸಲಾಗುವುದು. ಒಂದೂವರೆ ವರ್ಷದಲ್ಲಿ ಮೇಲ್ದರ್ಜೆ ಪೂರ್ಣಗೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>