ದೇವಸ್ಥಾನ ಪ್ರವೇಶ ನಿರಾಕರಣೆ:ಗ್ರಾಮದ ಮಾರಮ್ಮನ ದೇವಸ್ಥಾನದ ಪ್ರವೇಶ ವಿಚಾರವಾಗಿ, ಕಳೆದ ಒಂದು ವರ್ಷದಿಂದ ಎರಡೂ ಸಮುದಾಯದವರ ನಡುವೆ ವೈಷಮ್ಯ ಇತ್ತು. ಇದೀಗ, ಗ್ರಾಮದಲ್ಲಿ ಮಾರಮ್ಮನ ಹಬ್ಬಕ್ಕಾಗಿ ತಯಾರಿ ನಡೆದಿತ್ತು. ಈ ಸಂದರ್ಭದಲ್ಲಿ, ದೇವಸ್ಥಾನಕ್ಕೆ ತಮಗೂ ಮುಕ್ತ ಪ್ರವೇಶ ಕಲ್ಪಿಸಬೇಕು ಎಂದು ಪರಿಶಿಷ್ಟ ಸಮುದಾಯದವರು ಆಗ್ರಹಿಸಿದ್ದರು. ಆದರೆ, ಗ್ರಾಮದಲ್ಲಿ ಅದಕ್ಕೆ ವಿರೋಧ ವ್ಯಕ್ತವಾಗಿತ್ತು. ನಂತರ, ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕಳೆದ ವಾರ ಸಭೆ ನಡೆದು, ‘ಎರಡೂ ಸಮುದಾಯದವರು ಒಮ್ಮತವಾಗಿ ಬಂದರೆ ಮಾತ್ರ ಹಬ್ಬ ಮಾಡಬೇಕು ಇಲ್ಲದಿದ್ದರೆ ಬೇಡ’ ಎಂದು ತೀರ್ಮಾನ ಮಾಡಿ ಕಳುಹಿಸಲಾಗಿತ್ತು.