ಡಾ.ಅಂಬೇಡ್ಕರ್ ಭೀಮಸೇನಾ ಫೇಸ್ಬುಕ್ ಗ್ರೂಪ್ವೊಂದರಲ್ಲಿ ಸುನಾಮಿ ನಂದನ್ ಹಾಗೂ ಅರುಣ್ ಗೌಡ ಎಂಬುವವರು ದ್ವೇಷ ಬಿತ್ತುವ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಐಪಿಸಿ ಸೆಕ್ಷನ್ 153ಎ (ಧರ್ಮ, ಜನಾಂಗದ ಆಧಾರದ ಮೇಲೆ ದ್ವೇಷ ಬಿತ್ತುವುದು), 505 (ಸಾರ್ವಜನಿಕರಲ್ಲಿ ಭೀತಿ ಅಥವಾ ಆತಂಕಕ್ಕೆ ಕಾರಣವಾಗಬಲ್ಲ ವಿಷಯಗಳು/ಗಾಳಿ ಸುದ್ದಿ ಹಬ್ಬುವುದು), 509 (ಅವಹೇಳನಕಾರಿ ಮಾತು, ವರ್ತನೆ) ಅನ್ವಯ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಹುಡುಕಾಟ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.