ಮೈಸೂರು: ಅತ್ಯಾಚಾರ ಕುರಿತು ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಖಂಡಿಸಿ ಮೈಸೂರು ಸ್ತ್ರೀ ಶಕ್ತಿ ಮಹಿಳಾ ವೇದಿಕೆ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಮಹಿಳೆಯರ ಮೇಲೆ ನಡೆಯುವ ಅತಿ ದೊಡ್ಡ ಅನ್ಯಾಯದ ಕುರಿತು ಈ ರೀತಿ ಅಸಡ್ಡೆ ಹೇಳಿಕೆ ನೀಡುತ್ತಾರೆ ಎಂದರೆ ಅದು ಈ ಸಮಾಜ ಇನ್ನೂ ಯಾವ ಸ್ಥಿತಿಯಲ್ಲಿದೆ ಎಂಬುದರ ದ್ಯೋತಕ ಎಂದು ಬೇಸರ ವ್ಯಕ್ತಪಡಿಸಿದರು.
ಮಹಿಳೆಯರನ್ನು ಕುರಿತ ದೃಷ್ಟಿಕೋನ ಇನ್ನಾದರೂ ಬದಲಾಗಬೇಕು. ಸಮಾಜದಲ್ಲಿ ಇನ್ನಷ್ಟು ಸಂವೇದನಾ ಪ್ರಜ್ಞೆ ಮೂಡಬೇಕಿದೆ ಎಂದು ಅಭಿಪ್ರಾಯಪಟ್ಟರು.