ಮೈಸೂರು ವಿಶ್ವವಿದ್ಯಾಲಯ ಸಂಶೋಧಕರ ಸಂಘ, ದಲಿತ ವಿದ್ಯಾರ್ಥಿ ಒಕ್ಕೂಟ, ಬಹುಜನ ವಿದ್ಯಾರ್ಥಿ ಸಂಘ, ಎಸ್ಎಫ್ಐ, ಎಐಡಿಎಸ್ಒ ವತಿಯಿಂದ ಈ ಪ್ರತಿಭಟನೆಯನ್ನು ಆಯೋಜಿಸಲಾಗಿತ್ತು. ಪಂಜಿನ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಕುವೆಂಪು ಪ್ರತಿಮೆ ಬಳಿ ಸಮಾವೇಶಗೊಂಡರು. ಈ ವೇಳೆ, ಒಬ್ಬರ ಕೈಯಲ್ಲಿ ತುಸು ಹೊತ್ತು ಈ ಫಲಕ ಕಾಣಿಸಿಕೊಂಡಿತು. ಬಳಿಕ ಅದನ್ನು ಮರೆಮಾಚಲಾಯಿತು.