ಮೈಸೂರು: ಎನ್ಟಿಎಂ ಶಾಲೆ ಮುಂಭಾಗ ಮಂಗಳವಾರ ಜನಮನ ಸಾಂಸ್ಕೃತಿಕ ವೇದಿಕೆಯ ಕಾರ್ಯಕರ್ತರು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಪ್ರತಿಭಟನೆ ದಾಖಲಿಸಿದರು.
ಮೈಸೂರಿನ ಮಹಾರಾಣಿ (ಮಾದರಿ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಮುಖಂಡರೊಂದಿಗೆ ಸೇರಿದ ಕಾರ್ಯಕರ್ತರು ಬೀದಿ ನಾಟಕದ ರೂಪದಲ್ಲಿ ಶಾಲೆಯ ಮಹತ್ವ ಸಾರುವ ಮೂಲಕ ಶಾಲೆ ಉಳಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಜನಾರ್ದನ್, ಪುರುಷೋತ್ತಮ್, ಪ್ರೊ.ನಂಜರಾಜಅರಸ್, ಉಗ್ರನರಸಿಂಹೇಗೌಡ ಹಾಗೂ ಇತರರು ಇದ್ದರು.