ಎರಡೂ ಕಡೆಯ ಘೋಷಣೆಗಳು ಹೆಚ್ಚಾಗುತ್ತಿದ್ದಂತೆ ಇಬ್ಬರ ಮಧ್ಯೆ ಬ್ಯಾರಿಕೇಡ್ಗಳನ್ನು ಪೊಲೀಸರು ಇರಿಸಿ, ಸ್ಥಳದಿಂದ ತೆರಳುವಂತೆ ಹಲವು ಬಾರಿ ಎಚ್ಚರಿಕೆ ನೀಡಿದರು. ಅಂತಿಮವಾಗಿ ಎಸಿಪಿ ಶಶಿಧರ್ ಬಂಧಿಸುವ ಎಚ್ಚರಿಕೆ ನೀಡಿ ಪೊಲೀಸ್ ವಾಹನವನ್ನು ಸ್ಥಳಕ್ಕೆ ಕರೆಸುತ್ತಿದ್ದಂತೆ ರಂಗಾಯಣ ಉಳಿಸಿ ಹೋರಾಟ ಸಮಿತಿಯ ಸದಸ್ಯರು ತಮ್ಮ ಪ್ರತಿಭಟನೆಯ ಅವಧಿ ಮುಗಿಯಿತೆಂದು ಹೊರಟರು.