<p><strong>ಮೈಸೂರು:</strong> ಜಿಲ್ಲೆಯಲ್ಲಿ ಭತ್ತದ ಬೆಳೆ ಸಮೃದ್ಧವಾಗಿದೆ. ಹೂವು ಬರುವ ಕಾಲವಿದು. ಇಂತಹ ಹೊತ್ತಲ್ಲೇ ಫಸಲಿಗೆ ವಿವಿಧ ಬಾಧೆ ಗೋಚರಿಸುತ್ತಿದೆ. ಇದು ಭತ್ತದ ಬೆಳೆಗಾರರನ್ನು ಕಂಗಾಲಾಗಿಸಿದೆ.</p>.<p>ತಿ.ನರಸೀಪುರ, ನಂಜನಗೂಡು, ಕೆ.ಆರ್.ನಗರ ಹಾಗೂ ಮೈಸೂರು ತಾಲ್ಲೂಕಿನ ಕೆಲವು ಭಾಗದಲ್ಲಿನ ಭತ್ತದ ಬೆಳೆಯಲ್ಲಿ ಹಳದಿ ಕಾಂಡ ಕೊರಕ, ಗರಿ ಸುತ್ತುವ ಹುಳು, ಬೆಂಕಿ ರೋಗ, ದುಂಡಾಣು ಅಂಗಮಾರಿ ರೋಗ,ಕೊಳವೆ ಹುಳು, ಎಲೆ ಕವಚ ರೋಗ ಮತ್ತು ಊದುಬತ್ತಿ ರೋಗವೂ ಕಾಣಿಸಿಕೊಂಡಿದ್ದು, ಕೃಷಿಕರ ಆತಂಕ ಹೆಚ್ಚಿಸಿದೆ.</p>.<p>‘ಗದ್ದೆಗಳಲ್ಲಿ ಇದೀಗ ಕೆಪಟೆ ಮಾರಿ (ಬೆಂಕಿ ರೋಗ) ಕಾಣಿಸಿಕೊಳ್ಳುತ್ತಿದೆ. ಪೈರಿನ ಗರಿಗಳು ಕೆಂಪಾಗಲಾರಂಭಿಸಿವೆ. ಸುರುಳಿ ಸುತ್ತಿಕೊಂಡು ಒಣಗುತ್ತಿವೆ. ಒಂದೆರಡು ದಿನಗಳಲ್ಲೇ ಸಸಿ ಸಾಯುತ್ತಿದೆ. ಹೂವಿನ ಹಂತದಲ್ಲೇ ಬೆಳೆ ರೋಗಕ್ಕೀಡಾಗುವುದರಿಂದ ನಿರೀಕ್ಷಿತ ಇಳುವರಿ ಸಿಗಲ್ಲ. ಇದರಿಂದ ಈ ಬಾರಿ ಹಾಕಿದ ಬಂಡವಾಳವೂ ಕೈಗೆ ಮರಳದ ಪರಿಸ್ಥಿತಿಯಿದೆ’ ಎಂದು ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಭತ್ತದ ಬೆಳೆಗಾರ ರಘು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.</p>.<p>‘ಮೋಡದ ವಾತಾವರಣ ಹೆಚ್ಚಿದ್ದುದರಿಂದ, ಮಳೆಯೂ ಹೆಚ್ಚಿಗೆ ಸುರಿದಿದ್ದರಿಂದ ರೋಗ ತುಸು ಜಾಸ್ತಿಯಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳು ಆಗಿರುವುದರಿಂದ, ಗದ್ದೆಗಳಿಗೆ ಭೇಟಿ ನೀಡುತ್ತಿಲ್ಲ. ಯಾವೊಂದು ಸಲಹೆಯನ್ನು ನೀಡುತ್ತಿಲ್ಲ. ಯೂರಿಯಾ ಕೊರತೆಯೂ ಕಾಡಿತು. ಇವೆಲ್ಲವೂ ಇಳುವರಿಗೆ ಹೊಡೆತ ನೀಡಲಿವೆ’ ಎಂದರು.</p>.<p>‘ಜ್ಯೋತಿ ತಳಿಯ ಭತ್ತಕ್ಕೆ ಕೆಪಟೆ ಮಾರಿ ಬಾಧಿಸುತ್ತಿದೆ. ಪ್ರತಿ ವರ್ಷವೂ ಈ ತಳಿ ರೋಗಕ್ಕೆ ತುತ್ತಾಗುತ್ತಿದ್ದರೂ, ಕೃಷಿ ಇಲಾಖೆಯ ಅಧಿಕಾರಿಗಳು ಮಾತ್ರ ಭತ್ತ ಕೃಷಿಕರಲ್ಲಿ ಪರ್ಯಾಯದ ಜಾಗೃತಿ ಮೂಡಿಸುವಲ್ಲಿ ವಿಫಲರಾಗುತ್ತಿದ್ದಾರೆ’ ಎನ್ನುತ್ತಾರೆ ತಿ.ನರಸೀಪುರ ತಾಲ್ಲೂಕಿನ ನೀಲಸೋಗೆಯ ಭತ್ತದ ಬೆಳೆಗಾರ ಕೆ.ಎನ್.ಸುಬ್ರಹ್ಮಣ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಜಿಲ್ಲೆಯಲ್ಲಿ ಭತ್ತದ ಬೆಳೆ ಸಮೃದ್ಧವಾಗಿದೆ. ಹೂವು ಬರುವ ಕಾಲವಿದು. ಇಂತಹ ಹೊತ್ತಲ್ಲೇ ಫಸಲಿಗೆ ವಿವಿಧ ಬಾಧೆ ಗೋಚರಿಸುತ್ತಿದೆ. ಇದು ಭತ್ತದ ಬೆಳೆಗಾರರನ್ನು ಕಂಗಾಲಾಗಿಸಿದೆ.</p>.<p>ತಿ.ನರಸೀಪುರ, ನಂಜನಗೂಡು, ಕೆ.ಆರ್.ನಗರ ಹಾಗೂ ಮೈಸೂರು ತಾಲ್ಲೂಕಿನ ಕೆಲವು ಭಾಗದಲ್ಲಿನ ಭತ್ತದ ಬೆಳೆಯಲ್ಲಿ ಹಳದಿ ಕಾಂಡ ಕೊರಕ, ಗರಿ ಸುತ್ತುವ ಹುಳು, ಬೆಂಕಿ ರೋಗ, ದುಂಡಾಣು ಅಂಗಮಾರಿ ರೋಗ,ಕೊಳವೆ ಹುಳು, ಎಲೆ ಕವಚ ರೋಗ ಮತ್ತು ಊದುಬತ್ತಿ ರೋಗವೂ ಕಾಣಿಸಿಕೊಂಡಿದ್ದು, ಕೃಷಿಕರ ಆತಂಕ ಹೆಚ್ಚಿಸಿದೆ.</p>.<p>‘ಗದ್ದೆಗಳಲ್ಲಿ ಇದೀಗ ಕೆಪಟೆ ಮಾರಿ (ಬೆಂಕಿ ರೋಗ) ಕಾಣಿಸಿಕೊಳ್ಳುತ್ತಿದೆ. ಪೈರಿನ ಗರಿಗಳು ಕೆಂಪಾಗಲಾರಂಭಿಸಿವೆ. ಸುರುಳಿ ಸುತ್ತಿಕೊಂಡು ಒಣಗುತ್ತಿವೆ. ಒಂದೆರಡು ದಿನಗಳಲ್ಲೇ ಸಸಿ ಸಾಯುತ್ತಿದೆ. ಹೂವಿನ ಹಂತದಲ್ಲೇ ಬೆಳೆ ರೋಗಕ್ಕೀಡಾಗುವುದರಿಂದ ನಿರೀಕ್ಷಿತ ಇಳುವರಿ ಸಿಗಲ್ಲ. ಇದರಿಂದ ಈ ಬಾರಿ ಹಾಕಿದ ಬಂಡವಾಳವೂ ಕೈಗೆ ಮರಳದ ಪರಿಸ್ಥಿತಿಯಿದೆ’ ಎಂದು ನಂಜನಗೂಡು ತಾಲ್ಲೂಕಿನ ಹಿಮ್ಮಾವು ಗ್ರಾಮದ ಭತ್ತದ ಬೆಳೆಗಾರ ರಘು ‘ಪ್ರಜಾವಾಣಿ’ ಬಳಿ ಅಳಲು ತೋಡಿಕೊಂಡರು.</p>.<p>‘ಮೋಡದ ವಾತಾವರಣ ಹೆಚ್ಚಿದ್ದುದರಿಂದ, ಮಳೆಯೂ ಹೆಚ್ಚಿಗೆ ಸುರಿದಿದ್ದರಿಂದ ರೋಗ ತುಸು ಜಾಸ್ತಿಯಿದೆ. ಕೃಷಿ ಇಲಾಖೆಯ ಅಧಿಕಾರಿಗಳು ಗ್ರಾಮ ಪಂಚಾಯಿತಿಯ ಆಡಳಿತಾಧಿಕಾರಿಗಳು ಆಗಿರುವುದರಿಂದ, ಗದ್ದೆಗಳಿಗೆ ಭೇಟಿ ನೀಡುತ್ತಿಲ್ಲ. ಯಾವೊಂದು ಸಲಹೆಯನ್ನು ನೀಡುತ್ತಿಲ್ಲ. ಯೂರಿಯಾ ಕೊರತೆಯೂ ಕಾಡಿತು. ಇವೆಲ್ಲವೂ ಇಳುವರಿಗೆ ಹೊಡೆತ ನೀಡಲಿವೆ’ ಎಂದರು.</p>.<p>‘ಜ್ಯೋತಿ ತಳಿಯ ಭತ್ತಕ್ಕೆ ಕೆಪಟೆ ಮಾರಿ ಬಾಧಿಸುತ್ತಿದೆ. ಪ್ರತಿ ವರ್ಷವೂ ಈ ತಳಿ ರೋಗಕ್ಕೆ ತುತ್ತಾಗುತ್ತಿದ್ದರೂ, ಕೃಷಿ ಇಲಾಖೆಯ ಅಧಿಕಾರಿಗಳು ಮಾತ್ರ ಭತ್ತ ಕೃಷಿಕರಲ್ಲಿ ಪರ್ಯಾಯದ ಜಾಗೃತಿ ಮೂಡಿಸುವಲ್ಲಿ ವಿಫಲರಾಗುತ್ತಿದ್ದಾರೆ’ ಎನ್ನುತ್ತಾರೆ ತಿ.ನರಸೀಪುರ ತಾಲ್ಲೂಕಿನ ನೀಲಸೋಗೆಯ ಭತ್ತದ ಬೆಳೆಗಾರ ಕೆ.ಎನ್.ಸುಬ್ರಹ್ಮಣ್ಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>