ಮೈಸೂರು: ಅತ್ತ ಮಂಗಳವಾದ್ಯಗಳ ಶಬ್ದ ಅನುರಣಿಸುತ್ತಿದ್ದರೆ, ಇತ್ತ ಭಕ್ತಾದಿಗಳು ತೇರನ್ನೆಳೆದು ಸಂಭ್ರಮಿಸಿದರು. ಹರಕೆ ಹೊತ್ತವರು ಗೋಪುರದಷ್ಟು ಎತ್ತರದ ರಥಕ್ಕೆ ಹಣ್ಣು, ಜವನ ಎಸೆದು ಕೈ ಮುಗಿಯುವ ಮೂಲಕ ಸುತ್ತೂರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರೆಯನ್ನು ಸಂಪನ್ನಗೊಳಿಸಿದರು. ‘ಹತ್ತೂರು ಜಾತ್ರೆಗಿಂತ ಸುತ್ತೂರು ಜಾತ್ರೆ ಚೆಂದ’ ಎಂಬ ನಾಣ್ಣುಡಿ ಸುಳ್ಳಾಗದಂತೆ ನೋಡಿಕೊಂಡರು.