ರಾಮ ಈ ದೇಶದ ಮಹಾಪುರುಷರಾಗಿ, ಸಂಸ್ಕೃತಿಯ ಉತ್ತರಾಧಿಕಾರಿಯಾಗಿದ್ದವರು. ಅವರ ಜನ್ಮಸ್ಥಳದಲ್ಲಿ ಅವರ ಸ್ಮರಣೆಗಾಗಿ ನಡೆಯುವ ಕಾರ್ಯಕ್ರಮವು ದೇಶದ ಸಮಸ್ತ ಜನರ ಆಶಯವಾಗಿತ್ತು. ಸುಪ್ರೀಂಕೋರ್ಟ್ನ ಸರ್ವಸಮ್ಮತವಾದ ತೀರ್ಪಿನಿಂದ ಸಂತಸ, ಸಂಭ್ರಮಗಳು ಬಂದಿದೆ. ದೇಶದ ಜನರು ಮಾನಸಿಕವಾಗಿ ಸಡಗರದಲ್ಲಿ ತೊಡಗಿಸಿಕೊಂಡಿದ್ದಾರೆ.