<p><strong>ಮೈಸೂರು:</strong> ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ 1,030 ಟನ್ನ್ನಷ್ಟು ಟೊಮೆಟೊ ಆವಕವಾಗಿತ್ತು. ಕನಿಷ್ಠ ಧಾರಣೆ ಕೆ.ಜಿಗೆ ₹ 4 ಇದ್ದರೆ, ಗರಿಷ್ಠ ₹ 6 ಇತ್ತು. ಇದರಿಂದ ಬೆಲೆ ಚೇತರಿಕೆ ಪಡೆಯಲು ಸಾಧ್ಯವಾಗಲಿಲ್ಲ.</p>.<p>ಇದಕ್ಕೆ ವ್ಯತಿರಿಕ್ತವಾಗಿ ದಪ್ಪಮೆಣಸಿನಕಾಯಿ ಬೆಲೆಯು ಕೆ.ಜಿಗೆ ₹ 23ಕ್ಕೆ ಏರಿಕೆ ಕಂಡು ಬೆಳೆಗಾರರಲ್ಲಿ ಹರ್ಷ ತರಿಸಿತು. 'ಇದುವರೆಗೂ ಇದು ಕೆ.ಜಿಗೆ ₹ 19ಕ್ಕೆ ಮಾರಾಟವಾಗುತ್ತಿತ್ತು. 65 ಕ್ವಿಂಟಲ್ನಿಂದ 43 ಕ್ವಿಂಟಲ್ಗೆ ಆವಕ ಕುಸಿದಿರುವುದರಿಂದ ಬೇಡಿಕೆಗೆ ತಕ್ಕಷ್ಟು ದಪ್ಪಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ, ದರ ಏರಿಕೆ ಕಂಡಿದೆ’ ಎಂದು ವ್ಯಾಪಾರಿ ರಾಜು ತಿಳಿಸಿದರು.</p>.<p>ಬೀನ್ಸ್ಗೂ ಕೇರಳ ವ್ಯಾಪಾರಸ್ಥರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಕೆ.ಜಿಗೆ ಬೀನ್ಸ್ ದರ ₹ 45ಕ್ಕೆ ಏರಿಕೆ ಕಂಡಿದ್ದು, ಬೆಳೆಗಾರರು ಸಮಾಧಾನಪಡುವಂತೆ ಮಾಡಿದೆ. ತಿಂಗಳ ಆರಂಭದಿಂದಲೂ ಇದೇ ದರವನ್ನು ಬೀನ್ಸ್ ಕಾಯ್ದುಕೊಂಡಿದೆ.</p>.<p>ತಮಿಳುನಾಡಿನಿಂದ ಹೆಚ್ಚಾಗಿ ಕ್ಯಾರೆಟ್ ಬರುತ್ತಿದ್ದು, ಬೇಡಿಕೆ ಸೃಷ್ಟಿಯಾಗದೇ ಇರುವುದರಿಂದ ದರ ಈ ವಾರವೂ ಚೇತರಿಕೆ ಪಡೆಯಲು ಸಾಧ್ಯವಾಗಿಲ್ಲ. ಕೆ.ಜಿಗೆ ₹ 18ಕ್ಕೆ ಕಡಿಮೆಯಾಗಿದ್ದು, ತಮಿಳುನಾಡಿನ ವ್ಯಾಪಾರಸ್ಥರಿಗೆ ನಷ್ಟವಾಗುತ್ತಿದೆ.</p>.<p>ಇನ್ನುಳಿದಂತೆ, ಸಿಹಿಗುಂಬಳ 650 ಕ್ವಿಂಟಲ್ನಷ್ಟು ಮಾರುಕಟ್ಟೆಗೆ ಬಂದಿದ್ದು, ಕನಿಷ್ಠ ಧಾರಣೆ ಕೆ.ಜಿಗೆ ₹ 1 ಹಾಗೂ ಗರಿಷ್ಠ ಧಾರಣೆ ₹ 2 ಇತ್ತು. ಎಲೆಕೋಸು ₹ 2ರಿಂದ ₹ 4ಕ್ಕೆ ಮಾರಾಟವಾಗಿತ್ತು. ಬದನೆಕಾಯಿ ₹ 3ರಿಂದ ₹ 5ಕ್ಕೆ ಮಾರಾಟವಾಗಿತ್ತು. ಮಂಗಳೂರು ಸೌತೆ ₹ 1ರಿಂದ ₹ 2ಕ್ಕೆ ಮಾರಾಟವಾಗಿ ಬೆಳೆಗಾರರಿಗೆ ಅತೀವ ನಷ್ಟ ತರಿಸಿತು.</p>.<p>ಈರುಳ್ಳಿಯ ದರವೂ ಕುಸಿತದ ಹಾದಿಯಲ್ಲಿದೆ. ಎಪಿಎಂಸಿಯಲ್ಲಿ ಕೆ.ಜಿಗೆ ಈರುಳ್ಳಿ ₹ 10ಕ್ಕೆ ಮಾರಾಟವಾಗಿದೆ. ಇನ್ನುಳಿದ ಚಿಲ್ಲರೆ ಮಾರುಕಟ್ಟೆಗಳಲ್ಲೂ ದರ ₹ 15ರ ಆಸುಪಾಸಿನಲ್ಲಿದೆ.</p>.<p>ಮಾವಿನ ಆವಕ ಈ ವಾರವೂ ಉತ್ತಮಗೊಂಡಿಲ್ಲ. ಹಾಪ್ಕಾಮ್ಸ್ನಲ್ಲಿ ಕೆ.ಜಿಗೆ ರಸಪೂರಿ ₹ 55, ಬಾದಾಮಿ ₹ 68, ತೋತಾಪುರ ₹ 32ಕ್ಕೆ ಮಾರಾಟವಾಗುತ್ತಿದೆ. ಇನ್ನುಳಿದ ಮಾರುಕಟ್ಟೆಗಳಲ್ಲೂ ಇದರ ಆಸುಪಾಸಿನಲ್ಲೇ ದರ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ 1,030 ಟನ್ನ್ನಷ್ಟು ಟೊಮೆಟೊ ಆವಕವಾಗಿತ್ತು. ಕನಿಷ್ಠ ಧಾರಣೆ ಕೆ.ಜಿಗೆ ₹ 4 ಇದ್ದರೆ, ಗರಿಷ್ಠ ₹ 6 ಇತ್ತು. ಇದರಿಂದ ಬೆಲೆ ಚೇತರಿಕೆ ಪಡೆಯಲು ಸಾಧ್ಯವಾಗಲಿಲ್ಲ.</p>.<p>ಇದಕ್ಕೆ ವ್ಯತಿರಿಕ್ತವಾಗಿ ದಪ್ಪಮೆಣಸಿನಕಾಯಿ ಬೆಲೆಯು ಕೆ.ಜಿಗೆ ₹ 23ಕ್ಕೆ ಏರಿಕೆ ಕಂಡು ಬೆಳೆಗಾರರಲ್ಲಿ ಹರ್ಷ ತರಿಸಿತು. 'ಇದುವರೆಗೂ ಇದು ಕೆ.ಜಿಗೆ ₹ 19ಕ್ಕೆ ಮಾರಾಟವಾಗುತ್ತಿತ್ತು. 65 ಕ್ವಿಂಟಲ್ನಿಂದ 43 ಕ್ವಿಂಟಲ್ಗೆ ಆವಕ ಕುಸಿದಿರುವುದರಿಂದ ಬೇಡಿಕೆಗೆ ತಕ್ಕಷ್ಟು ದಪ್ಪಮೆಣಸಿನಕಾಯಿ ಮಾರುಕಟ್ಟೆಗೆ ಬರುತ್ತಿಲ್ಲ. ಹೀಗಾಗಿ, ದರ ಏರಿಕೆ ಕಂಡಿದೆ’ ಎಂದು ವ್ಯಾಪಾರಿ ರಾಜು ತಿಳಿಸಿದರು.</p>.<p>ಬೀನ್ಸ್ಗೂ ಕೇರಳ ವ್ಯಾಪಾರಸ್ಥರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಕೆ.ಜಿಗೆ ಬೀನ್ಸ್ ದರ ₹ 45ಕ್ಕೆ ಏರಿಕೆ ಕಂಡಿದ್ದು, ಬೆಳೆಗಾರರು ಸಮಾಧಾನಪಡುವಂತೆ ಮಾಡಿದೆ. ತಿಂಗಳ ಆರಂಭದಿಂದಲೂ ಇದೇ ದರವನ್ನು ಬೀನ್ಸ್ ಕಾಯ್ದುಕೊಂಡಿದೆ.</p>.<p>ತಮಿಳುನಾಡಿನಿಂದ ಹೆಚ್ಚಾಗಿ ಕ್ಯಾರೆಟ್ ಬರುತ್ತಿದ್ದು, ಬೇಡಿಕೆ ಸೃಷ್ಟಿಯಾಗದೇ ಇರುವುದರಿಂದ ದರ ಈ ವಾರವೂ ಚೇತರಿಕೆ ಪಡೆಯಲು ಸಾಧ್ಯವಾಗಿಲ್ಲ. ಕೆ.ಜಿಗೆ ₹ 18ಕ್ಕೆ ಕಡಿಮೆಯಾಗಿದ್ದು, ತಮಿಳುನಾಡಿನ ವ್ಯಾಪಾರಸ್ಥರಿಗೆ ನಷ್ಟವಾಗುತ್ತಿದೆ.</p>.<p>ಇನ್ನುಳಿದಂತೆ, ಸಿಹಿಗುಂಬಳ 650 ಕ್ವಿಂಟಲ್ನಷ್ಟು ಮಾರುಕಟ್ಟೆಗೆ ಬಂದಿದ್ದು, ಕನಿಷ್ಠ ಧಾರಣೆ ಕೆ.ಜಿಗೆ ₹ 1 ಹಾಗೂ ಗರಿಷ್ಠ ಧಾರಣೆ ₹ 2 ಇತ್ತು. ಎಲೆಕೋಸು ₹ 2ರಿಂದ ₹ 4ಕ್ಕೆ ಮಾರಾಟವಾಗಿತ್ತು. ಬದನೆಕಾಯಿ ₹ 3ರಿಂದ ₹ 5ಕ್ಕೆ ಮಾರಾಟವಾಗಿತ್ತು. ಮಂಗಳೂರು ಸೌತೆ ₹ 1ರಿಂದ ₹ 2ಕ್ಕೆ ಮಾರಾಟವಾಗಿ ಬೆಳೆಗಾರರಿಗೆ ಅತೀವ ನಷ್ಟ ತರಿಸಿತು.</p>.<p>ಈರುಳ್ಳಿಯ ದರವೂ ಕುಸಿತದ ಹಾದಿಯಲ್ಲಿದೆ. ಎಪಿಎಂಸಿಯಲ್ಲಿ ಕೆ.ಜಿಗೆ ಈರುಳ್ಳಿ ₹ 10ಕ್ಕೆ ಮಾರಾಟವಾಗಿದೆ. ಇನ್ನುಳಿದ ಚಿಲ್ಲರೆ ಮಾರುಕಟ್ಟೆಗಳಲ್ಲೂ ದರ ₹ 15ರ ಆಸುಪಾಸಿನಲ್ಲಿದೆ.</p>.<p>ಮಾವಿನ ಆವಕ ಈ ವಾರವೂ ಉತ್ತಮಗೊಂಡಿಲ್ಲ. ಹಾಪ್ಕಾಮ್ಸ್ನಲ್ಲಿ ಕೆ.ಜಿಗೆ ರಸಪೂರಿ ₹ 55, ಬಾದಾಮಿ ₹ 68, ತೋತಾಪುರ ₹ 32ಕ್ಕೆ ಮಾರಾಟವಾಗುತ್ತಿದೆ. ಇನ್ನುಳಿದ ಮಾರುಕಟ್ಟೆಗಳಲ್ಲೂ ಇದರ ಆಸುಪಾಸಿನಲ್ಲೇ ದರ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>