<p><strong>ಮೈಸೂರು</strong>: ಯುಪಿಎಸ್ಸಿ ಪರೀಕ್ಷೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಕುಡಕೂರಿನ ಕೆ.ಟಿ.ಮೇಘನಾ 425ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಕಂದಾಯ ಭವನದಲ್ಲಿ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಅವರಿಗೆ ಶೇ 90 ಅಂಧತ್ವವಿದೆ.</p>.<p>ಕೆಂಗೇರಿಯಲ್ಲಿ ವಾಸವಾಗಿರುವ ಅವರು, ತಾಂಡವಮೂರ್ತಿ ಹಾಗೂ ನವನೀತಾ ದಂಪತಿ ಪುತ್ರಿ. ಬೆಂಗಳೂರಿನ ಜ್ಞಾನಬೋಧಿನಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ, ಜೈನ್ ಕಾಲೇಜಿನಲ್ಲಿ ಪಿಯು, ಪದವಿಯನ್ನು ಸುರಾನಾ ಕಾಲೇಜು, ದೂರಶಿಕ್ಷಣದಲ್ಲಿ ಎಂ.ಎ ಇಂಗ್ಲಿಷ್ ಪದವಿ ಪಡೆದಿದ್ದಾರೆ.</p>.<p>‘ಎಸ್ಸೆಸ್ಸೆಲ್ಸಿ ನಂತರ ದೃಷ್ಟಿ ಕಳೆದುಕೊಂಡ ಬಳಿಕ, ಎಚ್ಎಸ್ಆರ್ ಲೇಔಟ್ನ ಮಿತ್ರಜ್ಯೋತಿ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆದರು. ನಂತರ ಸಿಸ್ಕೋ ಕಂಪನಿ ಸೇರಿದರು. ಜೊತೆಯಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸಿದರು’ ಎಂದು ಮೇಘನಾ ತಂದೆ ಕೆ.ಎನ್.ತಾಂಡವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಡಾ.ರಾಜ್ಕುಮಾರ್ ಐಎಎಸ್ ಅಕಾಡೆಮಿಯಲ್ಲಿ ಗಂಗರಾವ್, ಯುವ ರಾಜ್ಕುಮಾರ್ ಪ್ರೋತ್ಸಾಹಿಸಿದ್ದರು. 2020ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲೂ 465ನೇ ರ್ಯಾಂಕ್ ಪಡೆದಿದ್ದರು’ ಎಂದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/india-news/upsc-civil-services-exam-2021-several-people-elected-from-the-state-940890.html" itemprop="url">UPSC ಮುಖ್ಯ ಪರೀಕ್ಷೆ ಫಲಿತಾಂಶ: ಶ್ರುತಿ ಶರ್ಮಾ ಟಾಪರ್, ರಾಜ್ಯದ 27 ಜನ ಆಯ್ಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಯುಪಿಎಸ್ಸಿ ಪರೀಕ್ಷೆಯಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಕುಡಕೂರಿನ ಕೆ.ಟಿ.ಮೇಘನಾ 425ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಸದ್ಯ ಬೆಂಗಳೂರಿನ ಕಂದಾಯ ಭವನದಲ್ಲಿ ಖಜಾನೆ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿದ್ದಾರೆ. ಅವರಿಗೆ ಶೇ 90 ಅಂಧತ್ವವಿದೆ.</p>.<p>ಕೆಂಗೇರಿಯಲ್ಲಿ ವಾಸವಾಗಿರುವ ಅವರು, ತಾಂಡವಮೂರ್ತಿ ಹಾಗೂ ನವನೀತಾ ದಂಪತಿ ಪುತ್ರಿ. ಬೆಂಗಳೂರಿನ ಜ್ಞಾನಬೋಧಿನಿ ಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ, ಜೈನ್ ಕಾಲೇಜಿನಲ್ಲಿ ಪಿಯು, ಪದವಿಯನ್ನು ಸುರಾನಾ ಕಾಲೇಜು, ದೂರಶಿಕ್ಷಣದಲ್ಲಿ ಎಂ.ಎ ಇಂಗ್ಲಿಷ್ ಪದವಿ ಪಡೆದಿದ್ದಾರೆ.</p>.<p>‘ಎಸ್ಸೆಸ್ಸೆಲ್ಸಿ ನಂತರ ದೃಷ್ಟಿ ಕಳೆದುಕೊಂಡ ಬಳಿಕ, ಎಚ್ಎಸ್ಆರ್ ಲೇಔಟ್ನ ಮಿತ್ರಜ್ಯೋತಿ ಸಂಸ್ಥೆಯಲ್ಲಿ ಕಂಪ್ಯೂಟರ್ ತರಬೇತಿ ಪಡೆದರು. ನಂತರ ಸಿಸ್ಕೋ ಕಂಪನಿ ಸೇರಿದರು. ಜೊತೆಯಲ್ಲಿಯೇ ಪರೀಕ್ಷೆಗೆ ತಯಾರಿ ನಡೆಸಿದರು’ ಎಂದು ಮೇಘನಾ ತಂದೆ ಕೆ.ಎನ್.ತಾಂಡವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಡಾ.ರಾಜ್ಕುಮಾರ್ ಐಎಎಸ್ ಅಕಾಡೆಮಿಯಲ್ಲಿ ಗಂಗರಾವ್, ಯುವ ರಾಜ್ಕುಮಾರ್ ಪ್ರೋತ್ಸಾಹಿಸಿದ್ದರು. 2020ನೇ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲೂ 465ನೇ ರ್ಯಾಂಕ್ ಪಡೆದಿದ್ದರು’ ಎಂದರು.</p>.<p><strong>ಇದನ್ನೂ ಓದಿ:</strong><a href="https://cms.prajavani.net/india-news/upsc-civil-services-exam-2021-several-people-elected-from-the-state-940890.html" itemprop="url">UPSC ಮುಖ್ಯ ಪರೀಕ್ಷೆ ಫಲಿತಾಂಶ: ಶ್ರುತಿ ಶರ್ಮಾ ಟಾಪರ್, ರಾಜ್ಯದ 27 ಜನ ಆಯ್ಕೆ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>