‘ಸಚಿವ ಸಂಪುಟ ವಿಸ್ತರಣೆಗೆ ಯಡಿಯೂರಪ್ಪ ಮತ್ತೊಮ್ಮೆ ಮುಂದಾಗಿದ್ದಾರೆ. ಮೊದಲು ಈ ನಾಟಕ ನಿಲ್ಲಿಸಿ. ನಿಮ್ಮ ಸರ್ಕಾರಕ್ಕೆ ಕೋವಿಡ್ ತಗುಲಿದೆಯಾ?’ ಎಂದು ಕಿಡಿಕಾರಿದ ವಾಟಾಳ್, ‘ಕೊರೊನಾ ವೈರಸ್ ಸೋಂಕಿತರಿಗೆ ಇಂದಿಗೂ ಸಮರ್ಪಕ ಚಿಕಿತ್ಸೆ ಸಿಗ್ತಿಲ್ಲ. ಗಂಭೀರ ಪರಿಸ್ಥಿತಿಯಲ್ಲಿ ಇರೋರಿಗೆ ವೆಂಟಿಲೇಟರ್ ಲಭ್ಯವಿಲ್ಲ. ಇನ್ನಾದರೂ ಹುಷಾರಾಗಿ, ಗಂಭೀರರಾಗಿ ಆಡಳಿತ ನಡೆಸಿ. ನಿಮ್ಮ ಸಲಹೆಗಾರರು ಯಾರು? ಕೊರೊನಾಗೆ ಸಂಬಂಧಿಸಿದಂತೆ ಶ್ವೇತಪತ್ರ ಪ್ರಕಟಿಸಿ’ ಎಂದು ಆಗ್ರಹಿಸಿದರು.