<p><strong>ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ):</strong> ಮಾದಪ್ಪನ ದರ್ಶನಕ್ಕೆಂದು ಮಹದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಹೊಸ ಆಕರ್ಷಣೆಯೊಂದು ತೆರೆದುಕೊಂಡಿದೆ. ಮಾಯಕಾರಸ್ವಾಮಿಯ ಲೀಲೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಈಗ ಕಲ್ಪಿಸಲಾಗಿದೆ. </p><p>ಇಲ್ಲಿನ ದೀಪದಗಿರಿಒಡ್ಡಿನ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆಯ ತಳಭಾಗದಲ್ಲಿ ನಿರ್ಮಾಣವಾಗಿರುವ ಮ್ಯೂಸಿಯಂನಲ್ಲಿ ಮಹದೇಶ್ವರದ ಲೀಲೆಗಳನ್ನು ಕಣ್ತುಂಬಿಕೊಳ್ಳಬೇಕು. ಚಿತ್ರ, ದೃಶ್ಯರೂಪಕದ ಮೂಲಕ ಸ್ವಾಮಿಯ ಚರಿತ್ರೆಯನ್ನು ತಿಳಿದುಕೊಳ್ಳಬಹುದಾಗಿದೆ. ಈ ಮ್ಯೂಸಿಯಂನ ಅಧಿಕೃತ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಏ.24)ರಂದು ನೆರವೇರಿಸಲಿದ್ದಾರೆ.</p><p>₹ 22 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಿದ್ಧವಾಗಿದ್ದು, ಮಹದೇಶ್ವರ ಸ್ವಾಮಿಯ ಭಕ್ತರ ಜೊತೆಗೆ ಇತಿಹಾಸಪ್ರಿಯರಿಗೂ ಇಷ್ಟವಾಗಲಿದೆ. </p><p>ಈ ಮ್ಯೂಸಿಯಂ ಇರುವ ಗಿರಿಯ ಪ್ರದೇಶಕ್ಕೆ ತೆರಳಲು ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.</p><p>ಗುಹೆಯ ರೀತಿಯ ಒಳಾವರಣದಲ್ಲಿ ಮ್ಯೂಸಿಯಂ ಮೈದಳೆದಿದೆ. ಒಂದೊಂದು ಲೀಲೆಗಳನ್ನೂ ಕ್ರಮವಾಗಿ ಪರಿಚಯಿಸುವ ಕೆಲಸವನ್ನು ಅಲ್ಲಿ ಮಾಡಲಾಗಿದೆ. ಒಂದೊಂದು ಚಿತ್ರವೂ(ರೂಪಕವೂ) ಒಂದೊಂದು ಲೀಲೆಯ ಕಥೆಯನ್ನು ಹೇಳುತ್ತದೆ. </p><p>ಶ್ರೀಶೈಲದ ಉತ್ತಮಪುರದಲ್ಲಿ ಮಲೆಮಹದೇಶ್ವರನ ಜನನ, ಮರಿದೇವರೆಂಬ ನಾಮಕರಣ ಸಂಭ್ರಮ, ಮಾತಾ-ಪಿತರಾದ ಚಂದ್ರಶೇಖರ ಮೂರ್ತಿ ಮತ್ತು ಉತ್ತರಾಜಮ್ಮ ಅವರು ಮರಿದೇವರನ್ನು ಧಾರ್ಮಿಕ ಶಿಕ್ಷಣಕ್ಕಾಗಿ ವ್ಯಾಘ್ರಾನಂದರ ಆಶ್ರಮಕ್ಕೆ ಸೇರಿಸುವುದು, ಸುತ್ತೂರು ಮಠದಲ್ಲಿ ರಾಗಿ ಬೀಸುವ ಕಾಯಕ, ಸಿದ್ದನಂಜ ದೇಶಿಕೇಂದ್ರರಿಂದ ಶಿವಯೋಗ ರಹಸ್ಯದ ಬೋಧನೆ ಮೊದಲಾದ ದೃಶ್ಯಕಾವ್ಯವನ್ನು ಅಲ್ಲಿ ಕಟ್ಟಿಕೊಡಲಾಗಿದೆ.</p>. <p>ಕಾವೇರಿ ನದಿಯನ್ನು ದಾಟಿಸಲು ಅಂಬಿಗರು ನಿರಾಕರಿಸುವುದು, ಪದ್ಮಾಸನಸ್ಥರಾಗಿ ಮಲೆಮಹದೇಶ್ವರರು ನದಿಯನ್ನು ದಾಟಿದ ದೃಶ್ಯವನ್ನು ಚಿತ್ರಿಸಲಾಗಿದೆ.</p><p>ಕುಂತೂರು ಮಠದಲ್ಲಿದ್ದಾಗ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಜೊತೆ ಇದ್ದದ್ದು, ಪ್ರಭುಸ್ವಾಮಿ ಪೂಜೆ ನೆರವೇರಿಸುವಾಗ ಗೊದ್ದ, ಗೋಸುಂಬೆಗಳಿಗೆ ತೀರ್ಥ ಚುಮುಕಿಸಿ,</p><p>ಹೂವು ಹಾಕಿದುದು, ಕೊಂಗಳ್ಳಿ ಮಲ್ಲಪ್ಪ, ಮಂಗಲದ ಶಂಕರಪ್ಪ, ಕುಂತೂರು ಸಿದ್ದಪ್ಪ, ಉಪ್ಪಿನಹಳ್ಳಿಯ ಬಸಪ್ಪ, ಮೂಕಳ್ಳಿ ಮಾಯಮ್ಮ ಮೊದಲಾದ ಶರಣರೊಂದಿಗೆ ಇದ್ದ ರೂಪಕಗಳಿವೆ.</p><p>ತಾಳುಬೆಟ್ಟದಿಂದ ನಡುಮಲೆಗೆ ಹುಲಿಯನೇರಿ ಪ್ರಯಾಣ ಮಾಡಿದ್ದು, ಸಹವರ್ತಿಗಳಾಗಿ ಬಸಬನು ಬಸವ ಮಾರ್ಗದಲ್ಲಿ ಹಾಗೂ ಸರ್ಪವು ಸರ್ಪಮಾರ್ಗದಲ್ಲಿ ಹಿಂಬಾಲಿಸುವ ಚಿತ್ರಣವಿದೆ.</p><p>ಮೊದಲ ಬಾರಿಗೆ ಬೇವಿನ ಹಟ್ಟಿ ಕಾಳಮ್ಮನ ಭೇಟಿ ಹಾಗೂ ಕಾಯಕ ಮಾಡುವಂತೆ ಮಹದೇಶ್ವರರಿಂದ ಬೋಧನೆ, ಸಾಲೂರು ಮಠದಲ್ಲಿ ಮುಪ್ಪಿನ ಸ್ವಾಮಿಯವರ ಭೇಟಿ, ಮಠದ ಜೀರ್ಣೋದ್ಧಾರಕ್ಕಾಗಿ ಮುಹೂರ್ತ ಕಂಬ ನೆಟ್ಟ ದೃಶ್ಯಗಳಿಗೆ ರೂಪ ಕೊಡಲಾಗಿದೆ.</p><p>ಮಲೆಮಹದೇಶ್ವರರು ನಡುಮಲೆಯಲ್ಲಿ ಧ್ಯಾನಾಸಕ್ತರಾದುದನ್ನು ಚಿತ್ರಿಸಲಾಗಿದೆ.</p><p>ವಾಮಾಚಾರದಿಂದ ಜನರಿಗೆ ತೊಂದರೆ ಕೊಡುತ್ತಿದ್ದ ಸೋಲಿಗರ ನೀಲೇಗೌಡ ಮತ್ತು ಸಂಕಮ್ಮನಿಗೆ ಸತ್ಯಶುದ್ಧ ಮಾರ್ಗದ ಬೋಧನೆ ಮಾಡಿದ್ದು ಮೊದಲಾದ ಲೀಲೆಗಳನ್ನು ಮ್ಯೂಸಿಯಂನಲ್ಲಿ ವೀಕ್ಷಿಸಬಹುದಾಗಿದೆ.</p><p>ಜಾತ್ರೆ ಸಂಭ್ರಮದ ನೋಟವೂ ಖುಷಿ ಕೊಡುತ್ತದೆ.</p><p>ಮಲೆಮಹದೇಶ್ವರರ ಹುಟ್ಟಿನಿಂದ ಹಿಡಿದು ಅಂತ್ಯದವರೆಗೂ ಜೀವನದ ಪ್ರಮುಖ ಘಟ್ಟಗಳನ್ನು ಲೀಲೆಗಳಲ್ಲಿ ಹಿಡಿದಿಡಲಾಗಿದೆ. 20 ಕಾರ್ಮಿಕರು 8 ತಿಂಗಳವರೆಗೆ ಶ್ರಮಿಸಿದ ಪರಿಣಾಮ ಈ ಮ್ಯೂಸಿಯಂ ಸಿದ್ಧಗೊಂಡಿದ್ದು, ದೀಪಗಿರಿಯಒಡ್ಡಿನ ಪ್ರತಿಮೆಯ ಆಕರ್ಷಣೆಯನ್ನು ಇಮ್ಮಡಿಗೊಳಿಸಿದೆ.</p>.<div><blockquote>ಮ್ಯೂಸಿಯಂ ಉದ್ಘಾಟನೆ ನಂತರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಬಿಜಿಎಸ್ ಭವನದ ಬಳಿ ಕೌಂಟರ್ ತೆರೆದು, ಅಲ್ಲಿಂದ ಬ್ಯಾಟರಿಚಾಲಿತ ವಾಹನದಲ್ಲಿ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುವುದು </blockquote><span class="attribution">- ಎ.ಇ. ರಘು, ಕಾರ್ಯದರ್ಶಿ, ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹದೇಶ್ವರ ಬೆಟ್ಟ (ಚಾಮರಾಜನಗರ ಜಿಲ್ಲೆ):</strong> ಮಾದಪ್ಪನ ದರ್ಶನಕ್ಕೆಂದು ಮಹದೇಶ್ವರ ಬೆಟ್ಟಕ್ಕೆ ಬರುವ ಪ್ರವಾಸಿಗರಿಗೆ ಹೊಸ ಆಕರ್ಷಣೆಯೊಂದು ತೆರೆದುಕೊಂಡಿದೆ. ಮಾಯಕಾರಸ್ವಾಮಿಯ ಲೀಲೆಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಈಗ ಕಲ್ಪಿಸಲಾಗಿದೆ. </p><p>ಇಲ್ಲಿನ ದೀಪದಗಿರಿಒಡ್ಡಿನ 108 ಅಡಿ ಎತ್ತರದ ಮಹದೇಶ್ವರ ಪ್ರತಿಮೆಯ ತಳಭಾಗದಲ್ಲಿ ನಿರ್ಮಾಣವಾಗಿರುವ ಮ್ಯೂಸಿಯಂನಲ್ಲಿ ಮಹದೇಶ್ವರದ ಲೀಲೆಗಳನ್ನು ಕಣ್ತುಂಬಿಕೊಳ್ಳಬೇಕು. ಚಿತ್ರ, ದೃಶ್ಯರೂಪಕದ ಮೂಲಕ ಸ್ವಾಮಿಯ ಚರಿತ್ರೆಯನ್ನು ತಿಳಿದುಕೊಳ್ಳಬಹುದಾಗಿದೆ. ಈ ಮ್ಯೂಸಿಯಂನ ಅಧಿಕೃತ ಅನಾವರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಏ.24)ರಂದು ನೆರವೇರಿಸಲಿದ್ದಾರೆ.</p><p>₹ 22 ಕೋಟಿ ವೆಚ್ಚದಲ್ಲಿ ಈ ಯೋಜನೆ ಸಿದ್ಧವಾಗಿದ್ದು, ಮಹದೇಶ್ವರ ಸ್ವಾಮಿಯ ಭಕ್ತರ ಜೊತೆಗೆ ಇತಿಹಾಸಪ್ರಿಯರಿಗೂ ಇಷ್ಟವಾಗಲಿದೆ. </p><p>ಈ ಮ್ಯೂಸಿಯಂ ಇರುವ ಗಿರಿಯ ಪ್ರದೇಶಕ್ಕೆ ತೆರಳಲು ಸುಸಜ್ಜಿತ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ.</p><p>ಗುಹೆಯ ರೀತಿಯ ಒಳಾವರಣದಲ್ಲಿ ಮ್ಯೂಸಿಯಂ ಮೈದಳೆದಿದೆ. ಒಂದೊಂದು ಲೀಲೆಗಳನ್ನೂ ಕ್ರಮವಾಗಿ ಪರಿಚಯಿಸುವ ಕೆಲಸವನ್ನು ಅಲ್ಲಿ ಮಾಡಲಾಗಿದೆ. ಒಂದೊಂದು ಚಿತ್ರವೂ(ರೂಪಕವೂ) ಒಂದೊಂದು ಲೀಲೆಯ ಕಥೆಯನ್ನು ಹೇಳುತ್ತದೆ. </p><p>ಶ್ರೀಶೈಲದ ಉತ್ತಮಪುರದಲ್ಲಿ ಮಲೆಮಹದೇಶ್ವರನ ಜನನ, ಮರಿದೇವರೆಂಬ ನಾಮಕರಣ ಸಂಭ್ರಮ, ಮಾತಾ-ಪಿತರಾದ ಚಂದ್ರಶೇಖರ ಮೂರ್ತಿ ಮತ್ತು ಉತ್ತರಾಜಮ್ಮ ಅವರು ಮರಿದೇವರನ್ನು ಧಾರ್ಮಿಕ ಶಿಕ್ಷಣಕ್ಕಾಗಿ ವ್ಯಾಘ್ರಾನಂದರ ಆಶ್ರಮಕ್ಕೆ ಸೇರಿಸುವುದು, ಸುತ್ತೂರು ಮಠದಲ್ಲಿ ರಾಗಿ ಬೀಸುವ ಕಾಯಕ, ಸಿದ್ದನಂಜ ದೇಶಿಕೇಂದ್ರರಿಂದ ಶಿವಯೋಗ ರಹಸ್ಯದ ಬೋಧನೆ ಮೊದಲಾದ ದೃಶ್ಯಕಾವ್ಯವನ್ನು ಅಲ್ಲಿ ಕಟ್ಟಿಕೊಡಲಾಗಿದೆ.</p>. <p>ಕಾವೇರಿ ನದಿಯನ್ನು ದಾಟಿಸಲು ಅಂಬಿಗರು ನಿರಾಕರಿಸುವುದು, ಪದ್ಮಾಸನಸ್ಥರಾಗಿ ಮಲೆಮಹದೇಶ್ವರರು ನದಿಯನ್ನು ದಾಟಿದ ದೃಶ್ಯವನ್ನು ಚಿತ್ರಿಸಲಾಗಿದೆ.</p><p>ಕುಂತೂರು ಮಠದಲ್ಲಿದ್ದಾಗ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಜೊತೆ ಇದ್ದದ್ದು, ಪ್ರಭುಸ್ವಾಮಿ ಪೂಜೆ ನೆರವೇರಿಸುವಾಗ ಗೊದ್ದ, ಗೋಸುಂಬೆಗಳಿಗೆ ತೀರ್ಥ ಚುಮುಕಿಸಿ,</p><p>ಹೂವು ಹಾಕಿದುದು, ಕೊಂಗಳ್ಳಿ ಮಲ್ಲಪ್ಪ, ಮಂಗಲದ ಶಂಕರಪ್ಪ, ಕುಂತೂರು ಸಿದ್ದಪ್ಪ, ಉಪ್ಪಿನಹಳ್ಳಿಯ ಬಸಪ್ಪ, ಮೂಕಳ್ಳಿ ಮಾಯಮ್ಮ ಮೊದಲಾದ ಶರಣರೊಂದಿಗೆ ಇದ್ದ ರೂಪಕಗಳಿವೆ.</p><p>ತಾಳುಬೆಟ್ಟದಿಂದ ನಡುಮಲೆಗೆ ಹುಲಿಯನೇರಿ ಪ್ರಯಾಣ ಮಾಡಿದ್ದು, ಸಹವರ್ತಿಗಳಾಗಿ ಬಸಬನು ಬಸವ ಮಾರ್ಗದಲ್ಲಿ ಹಾಗೂ ಸರ್ಪವು ಸರ್ಪಮಾರ್ಗದಲ್ಲಿ ಹಿಂಬಾಲಿಸುವ ಚಿತ್ರಣವಿದೆ.</p><p>ಮೊದಲ ಬಾರಿಗೆ ಬೇವಿನ ಹಟ್ಟಿ ಕಾಳಮ್ಮನ ಭೇಟಿ ಹಾಗೂ ಕಾಯಕ ಮಾಡುವಂತೆ ಮಹದೇಶ್ವರರಿಂದ ಬೋಧನೆ, ಸಾಲೂರು ಮಠದಲ್ಲಿ ಮುಪ್ಪಿನ ಸ್ವಾಮಿಯವರ ಭೇಟಿ, ಮಠದ ಜೀರ್ಣೋದ್ಧಾರಕ್ಕಾಗಿ ಮುಹೂರ್ತ ಕಂಬ ನೆಟ್ಟ ದೃಶ್ಯಗಳಿಗೆ ರೂಪ ಕೊಡಲಾಗಿದೆ.</p><p>ಮಲೆಮಹದೇಶ್ವರರು ನಡುಮಲೆಯಲ್ಲಿ ಧ್ಯಾನಾಸಕ್ತರಾದುದನ್ನು ಚಿತ್ರಿಸಲಾಗಿದೆ.</p><p>ವಾಮಾಚಾರದಿಂದ ಜನರಿಗೆ ತೊಂದರೆ ಕೊಡುತ್ತಿದ್ದ ಸೋಲಿಗರ ನೀಲೇಗೌಡ ಮತ್ತು ಸಂಕಮ್ಮನಿಗೆ ಸತ್ಯಶುದ್ಧ ಮಾರ್ಗದ ಬೋಧನೆ ಮಾಡಿದ್ದು ಮೊದಲಾದ ಲೀಲೆಗಳನ್ನು ಮ್ಯೂಸಿಯಂನಲ್ಲಿ ವೀಕ್ಷಿಸಬಹುದಾಗಿದೆ.</p><p>ಜಾತ್ರೆ ಸಂಭ್ರಮದ ನೋಟವೂ ಖುಷಿ ಕೊಡುತ್ತದೆ.</p><p>ಮಲೆಮಹದೇಶ್ವರರ ಹುಟ್ಟಿನಿಂದ ಹಿಡಿದು ಅಂತ್ಯದವರೆಗೂ ಜೀವನದ ಪ್ರಮುಖ ಘಟ್ಟಗಳನ್ನು ಲೀಲೆಗಳಲ್ಲಿ ಹಿಡಿದಿಡಲಾಗಿದೆ. 20 ಕಾರ್ಮಿಕರು 8 ತಿಂಗಳವರೆಗೆ ಶ್ರಮಿಸಿದ ಪರಿಣಾಮ ಈ ಮ್ಯೂಸಿಯಂ ಸಿದ್ಧಗೊಂಡಿದ್ದು, ದೀಪಗಿರಿಯಒಡ್ಡಿನ ಪ್ರತಿಮೆಯ ಆಕರ್ಷಣೆಯನ್ನು ಇಮ್ಮಡಿಗೊಳಿಸಿದೆ.</p>.<div><blockquote>ಮ್ಯೂಸಿಯಂ ಉದ್ಘಾಟನೆ ನಂತರ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುವುದು. ಬಿಜಿಎಸ್ ಭವನದ ಬಳಿ ಕೌಂಟರ್ ತೆರೆದು, ಅಲ್ಲಿಂದ ಬ್ಯಾಟರಿಚಾಲಿತ ವಾಹನದಲ್ಲಿ ಕರೆದೊಯ್ಯಲು ವ್ಯವಸ್ಥೆ ಮಾಡಲಾಗುವುದು </blockquote><span class="attribution">- ಎ.ಇ. ರಘು, ಕಾರ್ಯದರ್ಶಿ, ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>