<p><strong>ತಿ.ನರಸೀಪುರ:</strong> ಪಿಕಾರ್ಡ್ ಬ್ಯಾಂಕ್ ಪ್ರಗತಿಯ ದಿಕ್ಕಿನಲ್ಲಿ ಸಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಕೃಷಿ ಸೇರಿದಂತೆ ವಿವಿಧ ಉದ್ದೇಶಕ್ಕೆ ₹20 ಕೋಟಿ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದು ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಕೆಂಪಯ್ಯನಹುಂಡಿ ಎಂ.ಮಹದೇವಣ್ಣ ತಿಳಿಸಿದರು.</p><p>ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಬ್ಯಾಂಕಿನ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p><p>ಷೇರುದಾರರು ಅಗತ್ಯ ದಾಖಲಾತಿಯೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಿದಲ್ಲಿ ಎಲ್ಲ ರೈತರಿಗೂ ಸಾಲ ಸಿಗುತ್ತದೆ. ಸಕಾಲಕ್ಕೆ ಮರುಪಾವತಿಸಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.</p><p>ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ಎನ್.ಮಹೇಶ್ 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.</p><p>ಬ್ಯಾಂಕಿನಿಂದ ಸಾಲ ಪಡೆದು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ 15 ಮಂದಿ ರೈತರನ್ನು ಸನ್ಮಾನಿಸಲಾಯಿತು.</p><p>ಬ್ಯಾಂಕಿನ ಉಪಾಧ್ಯಕ್ಷ ಎನ್.ಎನ್.ಮಹದೇವಸ್ವಾಮಿ, ನಿರ್ದೇಶಕರಾದ ಕೆ.ವಜ್ರೇಗೌಡ, ಎಂ.ಎಸ್.ಶಿವಮೂರ್ತಿ, ಎನ್.ಲಿಂಗಪ್ಪಾಜಿ,ಎಂ.ನಾಗರತ್ನ,ರಾಜಮಣ್ಣಿ, ಎ.ಎಂ.ಮಹದೇವ(ಮಧು),ಎಸ್.ಮಹೇಶ್, ಟಿ.ಎಸ್.ಪ್ರಸನ್ನ, ಸಿ.ಸೋಮಣ್ಣ, ಆರ್.ಮಹೇಶ್, ಎನ್.ಅನಿಲ್ ಕುಮಾರ್, ಎಂ.ಕೆ.ಶಿವಕುಮಾರ್, ಬ್ಯಾಂಕಿನ ಪ್ರಭಾರ ಲೆಕ್ಕಿಗ ಪ್ರಭುಸ್ವಾಮಿ, ಟಿ.ಎಂ. ನಾಗರತ್ನ ಬಾಯಿ,ತನುಜ, ಬಿ.ಶಂಕರ ಸೇರಿದಂತೆ ಷೇರುದಾರರು, ರೈತ ಮುಖಂಡರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿ.ನರಸೀಪುರ:</strong> ಪಿಕಾರ್ಡ್ ಬ್ಯಾಂಕ್ ಪ್ರಗತಿಯ ದಿಕ್ಕಿನಲ್ಲಿ ಸಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಕೃಷಿ ಸೇರಿದಂತೆ ವಿವಿಧ ಉದ್ದೇಶಕ್ಕೆ ₹20 ಕೋಟಿ ಸಾಲ ಸೌಲಭ್ಯ ಒದಗಿಸಲು ಉದ್ದೇಶಿಸಲಾಗಿದೆ ಎಂದು ತಾಲ್ಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ ಕೆಂಪಯ್ಯನಹುಂಡಿ ಎಂ.ಮಹದೇವಣ್ಣ ತಿಳಿಸಿದರು.</p><p>ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಬ್ಯಾಂಕಿನ 2024-25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p><p>ಷೇರುದಾರರು ಅಗತ್ಯ ದಾಖಲಾತಿಯೊಂದಿಗೆ ಸಾಲಕ್ಕೆ ಅರ್ಜಿ ಸಲ್ಲಿಸಿದಲ್ಲಿ ಎಲ್ಲ ರೈತರಿಗೂ ಸಾಲ ಸಿಗುತ್ತದೆ. ಸಕಾಲಕ್ಕೆ ಮರುಪಾವತಿಸಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.</p><p>ಬ್ಯಾಂಕಿನ ಪ್ರಭಾರ ವ್ಯವಸ್ಥಾಪಕ ಎನ್.ಮಹೇಶ್ 2024-25ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು.</p><p>ಬ್ಯಾಂಕಿನಿಂದ ಸಾಲ ಪಡೆದು ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ 15 ಮಂದಿ ರೈತರನ್ನು ಸನ್ಮಾನಿಸಲಾಯಿತು.</p><p>ಬ್ಯಾಂಕಿನ ಉಪಾಧ್ಯಕ್ಷ ಎನ್.ಎನ್.ಮಹದೇವಸ್ವಾಮಿ, ನಿರ್ದೇಶಕರಾದ ಕೆ.ವಜ್ರೇಗೌಡ, ಎಂ.ಎಸ್.ಶಿವಮೂರ್ತಿ, ಎನ್.ಲಿಂಗಪ್ಪಾಜಿ,ಎಂ.ನಾಗರತ್ನ,ರಾಜಮಣ್ಣಿ, ಎ.ಎಂ.ಮಹದೇವ(ಮಧು),ಎಸ್.ಮಹೇಶ್, ಟಿ.ಎಸ್.ಪ್ರಸನ್ನ, ಸಿ.ಸೋಮಣ್ಣ, ಆರ್.ಮಹೇಶ್, ಎನ್.ಅನಿಲ್ ಕುಮಾರ್, ಎಂ.ಕೆ.ಶಿವಕುಮಾರ್, ಬ್ಯಾಂಕಿನ ಪ್ರಭಾರ ಲೆಕ್ಕಿಗ ಪ್ರಭುಸ್ವಾಮಿ, ಟಿ.ಎಂ. ನಾಗರತ್ನ ಬಾಯಿ,ತನುಜ, ಬಿ.ಶಂಕರ ಸೇರಿದಂತೆ ಷೇರುದಾರರು, ರೈತ ಮುಖಂಡರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>