<p><strong>ಮೈಸೂರು</strong>: ಚಾಮುಂಡಿ ಬೆಟ್ಟದ ಪೂರ್ವ ಭಾಗದಲ್ಲಿನ ಸುಂದರ ಕೆರೆಯಾದ ‘ಯಾಂದಳ್ಳಿ ಕೆರೆ’ ಮಳೆಗಾಲದಲ್ಲೂ ತುಂಬದು. ಆದರೆ, ಜೀವವೈವಿಧ್ಯದ ಪಾತ್ರೆಯಾಗಿರುವ ಕೆರೆ ಒಡಲಿನ ಸುತ್ತ ಬಡಾವಣೆಗಳು ಚಾಚುತ್ತಿವೆ. </p>.<p>ನವಿಲು, ಬಣ್ಣದ ಕೊಕ್ಕರೆ, ಬೂದು ಸಿಪಿಲೆ, ಹಾವಕ್ಕಿ, ಕಪ್ಪು ತಲೆಯ ಕೆಂಬರಲು, ಮರಳು ಪೀಪಿ, ಗೌಜಲಕ್ಕಿ, ನೀಲಗಿರಿ ಕಾಡು ಪಾರಿವಾಳ, ನೀರು ನಡಿಗೆ ಹಕ್ಕಿಗಳು ಸೇರಿದಂತೆ ವಿವಿಧ ಹಕ್ಕಿಗಳು ಇಲ್ಲಿ ಕಾಣಸಿಗುತ್ತವೆ. ಅವುಗಳಿಗೆ ಸಾಕು ಬಾತುಕೋಳಿಗಳ ಹಾವಳಿಯೂ ತಟ್ಟಿದೆ. </p>.<p>ನೈದಿಲೆ, ತಾವರೆಗಳು ಕೆರೆಯನ್ನು ತುಂಬಿದ್ದು, ಚರಂಡಿ ನೀರು ಇನ್ನೂ ಸೇರುತ್ತಿಲ್ಲ. ಮೇಲಿನ ಕೆರೆಗಳಿಂದ ನೇರ ಸಂಪರ್ಕವೂ ಇಲ್ಲದ್ದರಿಂದ ಕೆರೆಯ ನೀರು ತಿಳಿಯಾಗಿದೆ. ಆದರೆ, ಪಶ್ಚಿಮ ಭಾಗದ ಕೆರೆಯಂಚಿನವರೆಗೂ ಬಡಾವಣೆ ಅಭಿವೃದ್ಧಿ ಮಾಡಲಾಗಿದೆ. ಅಲ್ಲಿಂದ ಸಣ್ಣ ಪ್ರಮಾಣದಲ್ಲಿ ಚರಂಡಿ ನೀರು ಸೇರುತ್ತಿದೆ. </p>.<p>ಉದ್ಯಾನ ನಿರ್ಮಿಸಲಾಗಿದ್ದರೂ, ಕೆರೆಯಂಚಿನಲ್ಲಿ ಬಡಾವಣೆ ಅಭಿವೃದ್ಧಿ ಮಾಡಿದವರು ಬಾತುಕೋಳಿ ಕೃಷಿ ಮಾಡುತ್ತಿದ್ದಾರೆ. ಬಾತುಕೋಳಿಗಳ ಪಂಜರಗಳನ್ನು ಕೆರೆಯಂಚಿನಲ್ಲಿಯೇ ಇಟ್ಟಿದ್ದಾರೆ. ಬಾತುಗಳು ಸ್ವಚ್ಛಂದವಾಗಿ ಕೆರೆಯೊಳಗೆ ವಿಹರಿಸುತ್ತಿರುವ ನೀರು ಹಕ್ಕಿಗಳಿಗೆ ತೊಂದರೆ ಉಂಟು ಮಾಡುತ್ತಿವೆ. ಕೆರೆಗೆ ಬಿಟ್ಟು ಮೇಯಿಸಲಾಗುತ್ತಿದೆ. </p>.<p><strong>ಶತಮಾನದ ಇತಿಹಾಸ:</strong></p>.<p>ಕೆರೆಯು ಯಾಂದಳ್ಳಿ ಗ್ರಾಮದ ಸರ್ವೆ ಸಂಖ್ಯೆ 63ರಲ್ಲಿದ್ದು, 11.36 ಎಕರೆ ವಿಸ್ತೀರ್ಣ ಹೊಂದಿದೆ. ಶತಮಾನದಷ್ಟೂ ಹಳೆಯದಾದ ಕೆರೆಯ ನೀರಿನ ಮಟ್ಟ ಅಳೆಯುವ ಕಲ್ಲುಕಂಬಗಳು ಇದ್ದು, ಸುಂದರವಾಗಿವೆ. ಕೆರೆಯ ಪೂರ್ವ ಭಾಗಕ್ಕೆ ಏರಿ ಇದೆ. </p>.<p>ಒಂದು ಕಾಲದಲ್ಲಿ ಜನ– ಜಾನುವಾರಿಗೆ ಕುಡಿಯಲು ಹಾಗೂ ಸ್ವಲ್ಪ ಪ್ರಮಾಣದಲ್ಲಿ ನೀರಾವರಿಗೆ ಬಳಕೆಯಾಗುತ್ತಿತ್ತು. ಕೆರೆಯ ಕೆಳಭಾಗದಲ್ಲೂ ಬಡಾವಣೆ ಎದ್ದಿದ್ದು, ಹಳ್ಳದ ಭಾಗದಲ್ಲಿಯೇ ರಸ್ತೆಗಳನ್ನು ಮಾಡಲಾಗಿದೆ. </p>.<p class="Subhead">ಬಾರದ ರಾಜಕಾಲುವೆ ನೀರು:</p>.<p>‘ಚಾಮುಂಡಿ ಬೆಟ್ಟದಲ್ಲಿ ಬಿದ್ದ ನೀರು ಸಾತಿ ಕೆರೆ ಮೂಲಕ ತಿಪ್ಪಯ್ಯನಕೆರೆ ಸೇರುತ್ತದೆ. ಅಲ್ಲಿಂದ ವರುಣ ಕೆರೆಗೆ ರಾಜಕಾಲುವೆ ಇದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ ನಿರ್ಮಾಣವಾದ ನಂತರ ರಾಜಕಾಲುವೆಯ ಒತ್ತುವರಿ ನಡೆದಿದೆ. ಈ ರಾಜಕಾಲುವೆ ಚಿಕ್ಕಹಳ್ಳಿ ಬಳಿಯಿಂದ ಯಾಂದಳ್ಳಿ ಕೆರೆಯತ್ತ ಹರಿದುಬರುತ್ತಿತ್ತು. ವರುಣ ಕಾಲುವೆ ನಿರ್ಮಾಣದ ನಂತರ ಕೆರೆಗೆ ನೀರ ಹರಿವು ಇಲ್ಲವಾಗಿದೆ’ ಎನ್ನುತ್ತಾರೆ ಗ್ರಾಮದ ಮಲ್ಲಪ್ಪ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಚಾಮುಂಡಿ ಬೆಟ್ಟದ ಪೂರ್ವ ಭಾಗದಲ್ಲಿನ ಸುಂದರ ಕೆರೆಯಾದ ‘ಯಾಂದಳ್ಳಿ ಕೆರೆ’ ಮಳೆಗಾಲದಲ್ಲೂ ತುಂಬದು. ಆದರೆ, ಜೀವವೈವಿಧ್ಯದ ಪಾತ್ರೆಯಾಗಿರುವ ಕೆರೆ ಒಡಲಿನ ಸುತ್ತ ಬಡಾವಣೆಗಳು ಚಾಚುತ್ತಿವೆ. </p>.<p>ನವಿಲು, ಬಣ್ಣದ ಕೊಕ್ಕರೆ, ಬೂದು ಸಿಪಿಲೆ, ಹಾವಕ್ಕಿ, ಕಪ್ಪು ತಲೆಯ ಕೆಂಬರಲು, ಮರಳು ಪೀಪಿ, ಗೌಜಲಕ್ಕಿ, ನೀಲಗಿರಿ ಕಾಡು ಪಾರಿವಾಳ, ನೀರು ನಡಿಗೆ ಹಕ್ಕಿಗಳು ಸೇರಿದಂತೆ ವಿವಿಧ ಹಕ್ಕಿಗಳು ಇಲ್ಲಿ ಕಾಣಸಿಗುತ್ತವೆ. ಅವುಗಳಿಗೆ ಸಾಕು ಬಾತುಕೋಳಿಗಳ ಹಾವಳಿಯೂ ತಟ್ಟಿದೆ. </p>.<p>ನೈದಿಲೆ, ತಾವರೆಗಳು ಕೆರೆಯನ್ನು ತುಂಬಿದ್ದು, ಚರಂಡಿ ನೀರು ಇನ್ನೂ ಸೇರುತ್ತಿಲ್ಲ. ಮೇಲಿನ ಕೆರೆಗಳಿಂದ ನೇರ ಸಂಪರ್ಕವೂ ಇಲ್ಲದ್ದರಿಂದ ಕೆರೆಯ ನೀರು ತಿಳಿಯಾಗಿದೆ. ಆದರೆ, ಪಶ್ಚಿಮ ಭಾಗದ ಕೆರೆಯಂಚಿನವರೆಗೂ ಬಡಾವಣೆ ಅಭಿವೃದ್ಧಿ ಮಾಡಲಾಗಿದೆ. ಅಲ್ಲಿಂದ ಸಣ್ಣ ಪ್ರಮಾಣದಲ್ಲಿ ಚರಂಡಿ ನೀರು ಸೇರುತ್ತಿದೆ. </p>.<p>ಉದ್ಯಾನ ನಿರ್ಮಿಸಲಾಗಿದ್ದರೂ, ಕೆರೆಯಂಚಿನಲ್ಲಿ ಬಡಾವಣೆ ಅಭಿವೃದ್ಧಿ ಮಾಡಿದವರು ಬಾತುಕೋಳಿ ಕೃಷಿ ಮಾಡುತ್ತಿದ್ದಾರೆ. ಬಾತುಕೋಳಿಗಳ ಪಂಜರಗಳನ್ನು ಕೆರೆಯಂಚಿನಲ್ಲಿಯೇ ಇಟ್ಟಿದ್ದಾರೆ. ಬಾತುಗಳು ಸ್ವಚ್ಛಂದವಾಗಿ ಕೆರೆಯೊಳಗೆ ವಿಹರಿಸುತ್ತಿರುವ ನೀರು ಹಕ್ಕಿಗಳಿಗೆ ತೊಂದರೆ ಉಂಟು ಮಾಡುತ್ತಿವೆ. ಕೆರೆಗೆ ಬಿಟ್ಟು ಮೇಯಿಸಲಾಗುತ್ತಿದೆ. </p>.<p><strong>ಶತಮಾನದ ಇತಿಹಾಸ:</strong></p>.<p>ಕೆರೆಯು ಯಾಂದಳ್ಳಿ ಗ್ರಾಮದ ಸರ್ವೆ ಸಂಖ್ಯೆ 63ರಲ್ಲಿದ್ದು, 11.36 ಎಕರೆ ವಿಸ್ತೀರ್ಣ ಹೊಂದಿದೆ. ಶತಮಾನದಷ್ಟೂ ಹಳೆಯದಾದ ಕೆರೆಯ ನೀರಿನ ಮಟ್ಟ ಅಳೆಯುವ ಕಲ್ಲುಕಂಬಗಳು ಇದ್ದು, ಸುಂದರವಾಗಿವೆ. ಕೆರೆಯ ಪೂರ್ವ ಭಾಗಕ್ಕೆ ಏರಿ ಇದೆ. </p>.<p>ಒಂದು ಕಾಲದಲ್ಲಿ ಜನ– ಜಾನುವಾರಿಗೆ ಕುಡಿಯಲು ಹಾಗೂ ಸ್ವಲ್ಪ ಪ್ರಮಾಣದಲ್ಲಿ ನೀರಾವರಿಗೆ ಬಳಕೆಯಾಗುತ್ತಿತ್ತು. ಕೆರೆಯ ಕೆಳಭಾಗದಲ್ಲೂ ಬಡಾವಣೆ ಎದ್ದಿದ್ದು, ಹಳ್ಳದ ಭಾಗದಲ್ಲಿಯೇ ರಸ್ತೆಗಳನ್ನು ಮಾಡಲಾಗಿದೆ. </p>.<p class="Subhead">ಬಾರದ ರಾಜಕಾಲುವೆ ನೀರು:</p>.<p>‘ಚಾಮುಂಡಿ ಬೆಟ್ಟದಲ್ಲಿ ಬಿದ್ದ ನೀರು ಸಾತಿ ಕೆರೆ ಮೂಲಕ ತಿಪ್ಪಯ್ಯನಕೆರೆ ಸೇರುತ್ತದೆ. ಅಲ್ಲಿಂದ ವರುಣ ಕೆರೆಗೆ ರಾಜಕಾಲುವೆ ಇದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ನಗರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರ ನಿರ್ಮಾಣವಾದ ನಂತರ ರಾಜಕಾಲುವೆಯ ಒತ್ತುವರಿ ನಡೆದಿದೆ. ಈ ರಾಜಕಾಲುವೆ ಚಿಕ್ಕಹಳ್ಳಿ ಬಳಿಯಿಂದ ಯಾಂದಳ್ಳಿ ಕೆರೆಯತ್ತ ಹರಿದುಬರುತ್ತಿತ್ತು. ವರುಣ ಕಾಲುವೆ ನಿರ್ಮಾಣದ ನಂತರ ಕೆರೆಗೆ ನೀರ ಹರಿವು ಇಲ್ಲವಾಗಿದೆ’ ಎನ್ನುತ್ತಾರೆ ಗ್ರಾಮದ ಮಲ್ಲಪ್ಪ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>