<p><strong>ಮೈಸೂರು: </strong>‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಜೂನಿಯರ್ ಭೈರಪ್ಪ ಹಾಗೂ ಜೂನಿಯರ್ ಚಿದಾನಂದಮೂರ್ತಿಅವರಂತೆ ಸಂಘ ಪರಿವಾರಕ್ಕೆ ನಿಷ್ಠರಾಗಿದ್ದಾರೆ.ಹೀಗಾಗಿಯೇ,ಕೆ.ಎಸ್.ಭಗವಾನ್ ಅವರ ‘ರಾಮಮಂದಿರ ಏಕೆ ಬೇಡ’ ಕೃತಿಯನ್ನು ಆಯ್ಕೆಪಟ್ಟಿಯಿಂದ ಹೊರಗಿಟ್ಟಿದ್ದಾರೆ’ ಎಂದುನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ತಿಳಿಸಿದರು.</p>.<p>‘ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆಗೆ ನಿಷ್ಠವಾಗಿರುವ ಕೇಂದ್ರ ಸರ್ಕಾರದಲ್ಲೇ ಇರುವವರು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳನ್ನು ದುರ್ಬಳಕೆ ಮಾಡಿಕೊಂಡು, ಪ್ರಜಾಸತ್ತಾತ್ಮಕವಾದ ರೈತ ಚಳವಳಿಯನ್ನು ಹತ್ತಿಕ್ಕುತ್ತಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.</p>.<p>ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ‘ದೊಡ್ಡರಂಗೇಗೌಡ ಅವರ ಈ ಕ್ರಮ ಸರಸ್ವತಿಯ ಮುಖಕ್ಕೆ ಮಸಿ ಬಳಿದಂತಾಗಿದೆ. ಗ್ರಂಥಾಲಯದಲ್ಲಿ ಮನುಸ್ಮೃತಿ, ಬ್ರಹ್ಮಸೂತ್ರ, ಭಗವದ್ಗೀತೆ ಸೇರಿದಂತೆ ಎಲ್ಲ ಪುಸ್ತಕಗಳೂ ಇವೆ. ಯಾವ ಜ್ಞಾನವೂ ಗ್ರಂಥಾಲಯಕ್ಕೆ ವರ್ಜ್ಯ ಅಲ್ಲ’ ಎಂದರು.</p>.<p>‘ಭಗವಾನ್ ಅವರ ಪುಸ್ತಕವನ್ನು ಸರ್ಕಾರ ನಿಷೇಧಿಸಿಲ್ಲ. ಇದು ಗ್ರಂಥಾಲಯದಲ್ಲಿಡಲು ಯೋಗ್ಯವಲ್ಲದ ಪುಸ್ತಕ ಎಂದು ಯಾರೂ ವಿಮರ್ಶೆ ಬರೆದಿಲ್ಲ. ಇನ್ನಾದರೂ ತಮ್ಮ ನಿರ್ಧಾರವನ್ನು ಪರಿಷ್ಕರಿಸಬೇಕು. ಆಯ್ಕೆಪಟ್ಟಿಗೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.</p>.<p>ಹಿಂದಿ ಕೇವಲ ಸಂವಹನ ಭಾಷೆಯೇ ಹೊರತು ರಾಷ್ಟ್ರಭಾಷೆ ಅಲ್ಲ. ಒಂದೇ ಭಾಷೆ, ಸಂಸ್ಕೃತಿ, ಧರ್ಮ ಎಂಬ ಪರಿಕಲ್ಪನೆಯ ಆಧಾರದ ಮೇಲೆ ಏಕತೆಯನ್ನು ಸಾಧಿಸಿದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಇಂತಹ ಸೂಕ್ಷ್ಮ ವಿಚಾರವನ್ನು ಪರಿಗಣಿಸಿ ದೊಡ್ಡರಂಗೇಗೌಡ ಹೇಳಿಕೆ ನೀಡಬೇಕಿತ್ತು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>‘ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಅಧ್ಯಕ್ಷ ದೊಡ್ಡರಂಗೇಗೌಡ ಅವರು ಜೂನಿಯರ್ ಭೈರಪ್ಪ ಹಾಗೂ ಜೂನಿಯರ್ ಚಿದಾನಂದಮೂರ್ತಿಅವರಂತೆ ಸಂಘ ಪರಿವಾರಕ್ಕೆ ನಿಷ್ಠರಾಗಿದ್ದಾರೆ.ಹೀಗಾಗಿಯೇ,ಕೆ.ಎಸ್.ಭಗವಾನ್ ಅವರ ‘ರಾಮಮಂದಿರ ಏಕೆ ಬೇಡ’ ಕೃತಿಯನ್ನು ಆಯ್ಕೆಪಟ್ಟಿಯಿಂದ ಹೊರಗಿಟ್ಟಿದ್ದಾರೆ’ ಎಂದುನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರಗುರು ತಿಳಿಸಿದರು.</p>.<p>‘ಪುರೋಹಿತಶಾಹಿ ಮತ್ತು ಬಂಡವಾಳಶಾಹಿ ವ್ಯವಸ್ಥೆಗೆ ನಿಷ್ಠವಾಗಿರುವ ಕೇಂದ್ರ ಸರ್ಕಾರದಲ್ಲೇ ಇರುವವರು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳನ್ನು ದುರ್ಬಳಕೆ ಮಾಡಿಕೊಂಡು, ಪ್ರಜಾಸತ್ತಾತ್ಮಕವಾದ ರೈತ ಚಳವಳಿಯನ್ನು ಹತ್ತಿಕ್ಕುತ್ತಿದ್ದಾರೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.</p>.<p>ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ‘ದೊಡ್ಡರಂಗೇಗೌಡ ಅವರ ಈ ಕ್ರಮ ಸರಸ್ವತಿಯ ಮುಖಕ್ಕೆ ಮಸಿ ಬಳಿದಂತಾಗಿದೆ. ಗ್ರಂಥಾಲಯದಲ್ಲಿ ಮನುಸ್ಮೃತಿ, ಬ್ರಹ್ಮಸೂತ್ರ, ಭಗವದ್ಗೀತೆ ಸೇರಿದಂತೆ ಎಲ್ಲ ಪುಸ್ತಕಗಳೂ ಇವೆ. ಯಾವ ಜ್ಞಾನವೂ ಗ್ರಂಥಾಲಯಕ್ಕೆ ವರ್ಜ್ಯ ಅಲ್ಲ’ ಎಂದರು.</p>.<p>‘ಭಗವಾನ್ ಅವರ ಪುಸ್ತಕವನ್ನು ಸರ್ಕಾರ ನಿಷೇಧಿಸಿಲ್ಲ. ಇದು ಗ್ರಂಥಾಲಯದಲ್ಲಿಡಲು ಯೋಗ್ಯವಲ್ಲದ ಪುಸ್ತಕ ಎಂದು ಯಾರೂ ವಿಮರ್ಶೆ ಬರೆದಿಲ್ಲ. ಇನ್ನಾದರೂ ತಮ್ಮ ನಿರ್ಧಾರವನ್ನು ಪರಿಷ್ಕರಿಸಬೇಕು. ಆಯ್ಕೆಪಟ್ಟಿಗೆ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.</p>.<p>ಹಿಂದಿ ಕೇವಲ ಸಂವಹನ ಭಾಷೆಯೇ ಹೊರತು ರಾಷ್ಟ್ರಭಾಷೆ ಅಲ್ಲ. ಒಂದೇ ಭಾಷೆ, ಸಂಸ್ಕೃತಿ, ಧರ್ಮ ಎಂಬ ಪರಿಕಲ್ಪನೆಯ ಆಧಾರದ ಮೇಲೆ ಏಕತೆಯನ್ನು ಸಾಧಿಸಿದರೆ ಭಾರತ ಭಾರತವಾಗಿ ಉಳಿಯುವುದಿಲ್ಲ. ಇಂತಹ ಸೂಕ್ಷ್ಮ ವಿಚಾರವನ್ನು ಪರಿಗಣಿಸಿ ದೊಡ್ಡರಂಗೇಗೌಡ ಹೇಳಿಕೆ ನೀಡಬೇಕಿತ್ತು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>