ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿದ ಅವರು, ‘ಹಣ ಕೊಟ್ಟಿರುವುದು ಮಾಧ್ಯಮಕ್ಕೆ ಮಾಡಿದ ಅಪಮಾನವಾಗಿದೆ. ಪತ್ರಕರ್ತರೊಂದಿಗೆ 40 ವರ್ಷಗಳಿಂದ ಕೆ.ಆರ್.ನಗರ, ಮೈಸೂರು, ಬೆಂಗಳೂರಿನಿಂದ ಹಿಡಿದು ದೆಹಲಿಯವರೆಗೆ ಪತ್ರಕರ್ತರೊಂದಿಗೆ ಒಡನಾಟವಿದೆ. ಆದರೆ, ಯಾವತ್ತೂ ಅವರನ್ನು ಭ್ರಷ್ಟರನ್ನಾಗಿ ಮಾಡಿಲ್ಲ’ ಎಂದರು.