<p><strong>ಮೈಸೂರು</strong>: ‘ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳಿಗಾಗಿ ನಿಗದಿಗೊಳಿಸಿರುವ ₹2 ಸಾವಿರ ಟಿಕೆಟ್ ವ್ಯವಸ್ಥೆ ರದ್ದುಗೊಳಿಸಬೇಕು’ ಎಂದು ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)ದ ರಾಜ್ಯಾಧ್ಯಕ್ಷ ಡಾ.ಬಿ. ಶಿವಣ್ಣ ಆಗ್ರಹಿಸಿದರು.</p>.<p>ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮುಂಡಿಬೆಟ್ಟಕ್ಕೆ ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವೇಳೆ ದರ್ಶನಕ್ಕೆ ತಾರತಮ್ಯ ಮಾಡುತ್ತಿರುವುದು ಖಂಡನೀಯ. ಬೆಟ್ಟಕ್ಕೆ ಬರುವವರಿಗೆ ಸರಿಯಾದ ಮೂಲ ಸೌಕರ್ಯ ಇಲ್ಲ. ಶೌಚಾಲಯ ವ್ಯವಸ್ಥೆಯೂ ಅಸಮರ್ಪಕವಾಗಿದೆ. ದರ್ಶನಕ್ಕೆ ₹2 ಸಾವಿರ ಶುಲ್ಕ ನಿಗದಿಗೊಳಿಸಿದ ಇತಿಹಾಸವೇ ಇಲ್ಲ. ವಿಐಪಿಗಳಿರಲೀ, ಜನಸಾಮಾನ್ಯರಿರಲೀ ಎಲ್ಲರಿಗೂ ದರ್ಶನಾವಕಾಶ ಒದಗಿಸಬೇಕಾದುದು ದೇವಸ್ಥಾನದ ಆಡಳಿತ ಮಂಡಳಿ ಕರ್ತವ್ಯ’ ಎಂದರು.</p>.<p>ಸಂಘಟನೆ ಪದಾಧಿಕಾರಿಗಳಾದ ನಾಗಸುಂದರ್, ಕುಮಾರ್, ಮಂಜುನಾಥ್, ಭಾಗ್ಯಮ್ಮ ಹಾಗೂ ಸ್ವಾಮಿ ನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದಂದು ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತಾದಿಗಳಿಗಾಗಿ ನಿಗದಿಗೊಳಿಸಿರುವ ₹2 ಸಾವಿರ ಟಿಕೆಟ್ ವ್ಯವಸ್ಥೆ ರದ್ದುಗೊಳಿಸಬೇಕು’ ಎಂದು ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ)ದ ರಾಜ್ಯಾಧ್ಯಕ್ಷ ಡಾ.ಬಿ. ಶಿವಣ್ಣ ಆಗ್ರಹಿಸಿದರು.</p>.<p>ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮುಂಡಿಬೆಟ್ಟಕ್ಕೆ ಆಷಾಢ ಮಾಸದಲ್ಲಿ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಈ ವೇಳೆ ದರ್ಶನಕ್ಕೆ ತಾರತಮ್ಯ ಮಾಡುತ್ತಿರುವುದು ಖಂಡನೀಯ. ಬೆಟ್ಟಕ್ಕೆ ಬರುವವರಿಗೆ ಸರಿಯಾದ ಮೂಲ ಸೌಕರ್ಯ ಇಲ್ಲ. ಶೌಚಾಲಯ ವ್ಯವಸ್ಥೆಯೂ ಅಸಮರ್ಪಕವಾಗಿದೆ. ದರ್ಶನಕ್ಕೆ ₹2 ಸಾವಿರ ಶುಲ್ಕ ನಿಗದಿಗೊಳಿಸಿದ ಇತಿಹಾಸವೇ ಇಲ್ಲ. ವಿಐಪಿಗಳಿರಲೀ, ಜನಸಾಮಾನ್ಯರಿರಲೀ ಎಲ್ಲರಿಗೂ ದರ್ಶನಾವಕಾಶ ಒದಗಿಸಬೇಕಾದುದು ದೇವಸ್ಥಾನದ ಆಡಳಿತ ಮಂಡಳಿ ಕರ್ತವ್ಯ’ ಎಂದರು.</p>.<p>ಸಂಘಟನೆ ಪದಾಧಿಕಾರಿಗಳಾದ ನಾಗಸುಂದರ್, ಕುಮಾರ್, ಮಂಜುನಾಥ್, ಭಾಗ್ಯಮ್ಮ ಹಾಗೂ ಸ್ವಾಮಿ ನಾಯಕ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>