<p><strong>ಮೈಸೂರು:</strong> ‘ದಲಿತರು, ಅಸ್ಪೃಶ್ಯರನ್ನು ಸಮಾಜವು ಇನ್ನೂ ರೌರವ ನರಕದಲ್ಲಿಟ್ಟಿದೆ. ಸಾಮಾಜಿಕ ಸಾಮರಸ್ಯದ ಕೊರತೆಯಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ. ದೇಶದಲ್ಲಿ ವಿಪುಲ ಸಂಪನ್ಮೂಲಗಳಿದ್ದರೂ ಬಡತನ, ಹಸಿವು, ಜಾತಿಯತೆ ಹಾಗೂ ಅನಕ್ಷರತೆ ತೊಡೆಯಲು ಇನ್ನೂ ಆಗಿಲ್ಲ’ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.</p>.<p>ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಸಾಮರಸ್ಯ ವೇದಿಕೆಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ ಕುದ್ಮುಲ್ ರಂಗರಾವ್ ಅವರ 163ನೇ ಜನ್ಮದಿನಾರಣೆಯಲ್ಲಿ ಅವರು ಮಾತನಾಡಿದರು.</p>.<p><a href="https://www.prajavani.net/karnataka-news/sny-one-can-become-chief-minister-says-mp-d-k-suresh-949846.html" itemprop="url">ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು: ಸಂಸದ ಡಿ.ಕೆ. ಸುರೇಶ್ </a></p>.<p>‘ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲ ಬೇರೆ ಯಾವುದೇ ದೇಶದಲ್ಲೂ ಈ ಪ್ರಮಾಣದಲ್ಲಿಲ್ಲ. ಶತಮಾನಗಳಿಂದ ಜಾತಿ ಪದ್ಧತಿ, ಅಸ್ಪೃಶ್ಯತೆ ಹೆಸರಿನಲ್ಲಿ ಸಾಮರಸ್ಯದ ಕೊರತೆಯು ಬಳುವಳಿಯಾಗಿ ಮುಂದುವರಿದಿದೆ. ಸಂವಿಧಾನ ಜಾರಿಯಾಗಿ 72 ವರ್ಷ ಕಳೆದರೂ ಪಿಡುಗುಗಳು ಅಳಿದಿಲ್ಲ. ದೇವರ ಹೆಸರಿನಲ್ಲಿ ಶೋಷಣೆ ಮುಂದುವರಿದಿದೆ’ ಎಂದರು. </p>.<p>‘ಗ್ರಾಮೀಣ ಪ್ರದೇಶಗಳ ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ದಲಿತರಿಗೆ ಇಂದಿಗೂ ಪ್ರವೇಶ ಸಿಕ್ಕಿಲ್ಲ. ಅಂತರ್ಜಾತಿ ವಿವಾಹಗಳು ನಡೆದರೆ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಜಾತೀಯತೆ ಹೆಚ್ಚಾಗುತ್ತಿರುವಂತೆಯೇ ಅಸ್ಮೃಶ್ಯತೆಯು ಜೀವಂತವಾಗುತ್ತದೆ. ಬಡತನವನ್ನು ಸಹಿಸಿಕೊಳ್ಳಬಹುದೇ ಹೊರತು ಅಸ್ಮೃಶ್ಯತೆಯನ್ನಲ್ಲ’ ಎಂದು ಹೇಳಿದರು.</p>.<p>‘ದಲಿತರನ್ನು ಶೂದ್ರರಿಗಿಂತಲೂ ಕಡೆಯಾಗಿ ಸಮಾಜವು ಇನ್ನೂ ನೋಡುತ್ತಿದೆ. ವ್ಯಕ್ತಿ ಗೌರವವನ್ನು ನೀಡದೆ ಪ್ರಾಣಿಗಳಿಂತಲೂ ಹೀನಾಯವಾಗಿ ನಡೆಸಿಕೊಳ್ಳುವುದು ಮುಂದುವರಿದಿದೆ. ಪಂಚಮರೆಂದು ವರ್ಣಗಳಿಂದಲೂ ಆಚೆಯಿಟ್ಟಿದೆ’ ಎಂದರು.</p>.<p><a href="https://www.prajavani.net/india-news/rajasthan-udaipur-tailor-murder-case-dinesh-gundurao-congress-bjp-949860.html" itemprop="url">ಟೈಲರ್ ಹತ್ಯೆಯನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ: ದಿನೇಶ್ ಗುಂಡೂರಾವ್ ಕಿಡಿ </a></p>.<p>‘ಯಾವುದೇ ವೃತ್ತಿಯಲ್ಲಿದ್ದರೂ ಮಾನವೀಯತೆ ಗುಣಗಳಿರಬೇಕು. ಆಗ ಮಾತ್ರ ಸಾಮಾಜಿಕ ಸಾಮರಸ್ಯದ ಬಗ್ಗೆ ಚಿಂತನೆ ಮಾಡಲು ಸಾಧ್ಯ. ಮಾನವೀಯತೆಯೇ ಇಲ್ಲದ ಸಮಾಜವನ್ನು ಸುಧಾರಿಸಲು ಕುದ್ಮಲ್ ರಂಗರಾಯರು ಶ್ರಮಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವವರು ರಂಗರಾವ್ ಅವರ ಪಾಠವನ್ನು ಪಠ್ಯಕ್ರಮಕ್ಕೆ ಸೇರಿಸಿಲ್ಲವೇಕೆ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ದಲಿತರು, ಅಸ್ಪೃಶ್ಯರನ್ನು ಸಮಾಜವು ಇನ್ನೂ ರೌರವ ನರಕದಲ್ಲಿಟ್ಟಿದೆ. ಸಾಮಾಜಿಕ ಸಾಮರಸ್ಯದ ಕೊರತೆಯಿಂದಾಗಿ ಹಿನ್ನಡೆ ಅನುಭವಿಸುವಂತಾಗಿದೆ. ದೇಶದಲ್ಲಿ ವಿಪುಲ ಸಂಪನ್ಮೂಲಗಳಿದ್ದರೂ ಬಡತನ, ಹಸಿವು, ಜಾತಿಯತೆ ಹಾಗೂ ಅನಕ್ಷರತೆ ತೊಡೆಯಲು ಇನ್ನೂ ಆಗಿಲ್ಲ’ ಎಂದು ಸಂಸದ ವಿ. ಶ್ರೀನಿವಾಸ ಪ್ರಸಾದ್ ಹೇಳಿದರು.</p>.<p>ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸಾಮಾಜಿಕ ನ್ಯಾಯ ವೇದಿಕೆ ಹಾಗೂ ಸಾಮರಸ್ಯ ವೇದಿಕೆಗಳ ವತಿಯಿಂದ ಬುಧವಾರ ಏರ್ಪಡಿಸಿದ್ದ ಕುದ್ಮುಲ್ ರಂಗರಾವ್ ಅವರ 163ನೇ ಜನ್ಮದಿನಾರಣೆಯಲ್ಲಿ ಅವರು ಮಾತನಾಡಿದರು.</p>.<p><a href="https://www.prajavani.net/karnataka-news/sny-one-can-become-chief-minister-says-mp-d-k-suresh-949846.html" itemprop="url">ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು: ಸಂಸದ ಡಿ.ಕೆ. ಸುರೇಶ್ </a></p>.<p>‘ಪ್ರಾಕೃತಿಕ ಹಾಗೂ ಮಾನವ ಸಂಪನ್ಮೂಲ ಬೇರೆ ಯಾವುದೇ ದೇಶದಲ್ಲೂ ಈ ಪ್ರಮಾಣದಲ್ಲಿಲ್ಲ. ಶತಮಾನಗಳಿಂದ ಜಾತಿ ಪದ್ಧತಿ, ಅಸ್ಪೃಶ್ಯತೆ ಹೆಸರಿನಲ್ಲಿ ಸಾಮರಸ್ಯದ ಕೊರತೆಯು ಬಳುವಳಿಯಾಗಿ ಮುಂದುವರಿದಿದೆ. ಸಂವಿಧಾನ ಜಾರಿಯಾಗಿ 72 ವರ್ಷ ಕಳೆದರೂ ಪಿಡುಗುಗಳು ಅಳಿದಿಲ್ಲ. ದೇವರ ಹೆಸರಿನಲ್ಲಿ ಶೋಷಣೆ ಮುಂದುವರಿದಿದೆ’ ಎಂದರು. </p>.<p>‘ಗ್ರಾಮೀಣ ಪ್ರದೇಶಗಳ ಮುಜರಾಯಿ ಇಲಾಖೆಗೆ ಸೇರಿದ ದೇಗುಲಗಳಲ್ಲಿ ದಲಿತರಿಗೆ ಇಂದಿಗೂ ಪ್ರವೇಶ ಸಿಕ್ಕಿಲ್ಲ. ಅಂತರ್ಜಾತಿ ವಿವಾಹಗಳು ನಡೆದರೆ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ. ಜಾತೀಯತೆ ಹೆಚ್ಚಾಗುತ್ತಿರುವಂತೆಯೇ ಅಸ್ಮೃಶ್ಯತೆಯು ಜೀವಂತವಾಗುತ್ತದೆ. ಬಡತನವನ್ನು ಸಹಿಸಿಕೊಳ್ಳಬಹುದೇ ಹೊರತು ಅಸ್ಮೃಶ್ಯತೆಯನ್ನಲ್ಲ’ ಎಂದು ಹೇಳಿದರು.</p>.<p>‘ದಲಿತರನ್ನು ಶೂದ್ರರಿಗಿಂತಲೂ ಕಡೆಯಾಗಿ ಸಮಾಜವು ಇನ್ನೂ ನೋಡುತ್ತಿದೆ. ವ್ಯಕ್ತಿ ಗೌರವವನ್ನು ನೀಡದೆ ಪ್ರಾಣಿಗಳಿಂತಲೂ ಹೀನಾಯವಾಗಿ ನಡೆಸಿಕೊಳ್ಳುವುದು ಮುಂದುವರಿದಿದೆ. ಪಂಚಮರೆಂದು ವರ್ಣಗಳಿಂದಲೂ ಆಚೆಯಿಟ್ಟಿದೆ’ ಎಂದರು.</p>.<p><a href="https://www.prajavani.net/india-news/rajasthan-udaipur-tailor-murder-case-dinesh-gundurao-congress-bjp-949860.html" itemprop="url">ಟೈಲರ್ ಹತ್ಯೆಯನ್ನು ರಾಜಕೀಯಗೊಳಿಸುತ್ತಿರುವ ಬಿಜೆಪಿ: ದಿನೇಶ್ ಗುಂಡೂರಾವ್ ಕಿಡಿ </a></p>.<p>‘ಯಾವುದೇ ವೃತ್ತಿಯಲ್ಲಿದ್ದರೂ ಮಾನವೀಯತೆ ಗುಣಗಳಿರಬೇಕು. ಆಗ ಮಾತ್ರ ಸಾಮಾಜಿಕ ಸಾಮರಸ್ಯದ ಬಗ್ಗೆ ಚಿಂತನೆ ಮಾಡಲು ಸಾಧ್ಯ. ಮಾನವೀಯತೆಯೇ ಇಲ್ಲದ ಸಮಾಜವನ್ನು ಸುಧಾರಿಸಲು ಕುದ್ಮಲ್ ರಂಗರಾಯರು ಶ್ರಮಿಸಿದರು. ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವವರು ರಂಗರಾವ್ ಅವರ ಪಾಠವನ್ನು ಪಠ್ಯಕ್ರಮಕ್ಕೆ ಸೇರಿಸಿಲ್ಲವೇಕೆ’ ಎಂದು ಪ್ರಶ್ನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>