<p><strong>ಮೈಸೂರು:</strong> ‘ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಬೇಕು’ ಎಂದು ರಂಗಕರ್ಮಿ ಮೈಮ್ ರಮೇಶ್ ಹೇಳಿದರು.</p>.<p>ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆ, ಮನರಂಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಂಸ್ಕಾರ-ಸಂಸ್ಕೃತಿ ನಮ್ಮ ಜೀವನದ ಮೌಲ್ಯಗಳು. ಉತ್ತಮ ಜೀವನ ನಡೆಸಲು ಇವು ಮುಖ್ಯ. ಆದರೆ, ಈಗಿನ ಮಕ್ಕಳು ಇವೆರಡನ್ನೂ ಕಳೆದುಕೊಂಡಿದ್ದಾರೆ. ಇದಕ್ಕೆ ಪೋಷಕರು ಮತ್ತು ಶಿಕ್ಷಕರು ಹೊಣೆ’ ಎಂದು ತಿಳಿಸಿದರು.</p>.<p>‘ಮುಂದಿನ ದೇಶದ ಭವಿಷ್ಯಕ್ಕೆ ಇಂದಿನ ಮಕ್ಕಳೆ ಆಸ್ತಿ. ಅವರನ್ನು ಉತ್ತಮ ಪ್ರಜೆಯಾಗಿ ರೂಪುಗೊಳಿಸಬೇಕು. ರಂಗಕರ್ಮಿಯಾಗಿ ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ ಬೆರೆತು ಜೀವನ ಕಳೆದಿದ್ದೇನೆ. ಮುಂದೆಯೂ ರಂಗಭೂಮಿ ಕಾಯಕ ನಿರಂತರವಾಗಿ ಮುಂದುವರಿಸುವೆ’ ಎಂದರು.</p>.<p><strong>ಗಮನ ಕೊಡಬೇಕು:</strong> </p>.<p>ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ‘ಮಕ್ಕಳ ಮನಸು ತುಂಬಾ ಸೂಕ್ಷ್ಮವಾದುದು. ಪರಿಸರ ಮತ್ತು ಅವರ ಸುತ್ತಲಿನ ಪ್ರಚೋದಕಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ. ಕುತೂಹಲಕಾರಿ ಮನೋಭಾವ ಹೊಂದಿರುತ್ತಾರೆ. ಪೋಷಕರು ಮಕ್ಕಳ ಕಡೆಗೆ ಸಾಕಷ್ಟು ಗಮನ ನೀಡಬೇಕು’ ಎಂದು ಸಲಹೆ ನೀಡಿದರು.</p>.<p>‘ಇಂದು ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚುತ್ತಿದ್ದು, ಕಳವಳಕಾರಿ ಸಂಗತಿ ಇದಾಗಿದೆ. ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮ ಅರಿತು ಪೋಷಕರು ಮಕ್ಕಳ ಎದುರು ಮೊಬೈಲ್ ಫೋನ್ ಬಳಸುವುದು ಮತ್ತು ನೋಡುವುದನ್ನು ಕಡಿಮೆ ಮಾಡಬೇಕು. ಅವರಲ್ಲಿ ಪುಸ್ತಕ ಓದುವ ಉತ್ತಮ ಹವ್ಯಾಸ ರೂಢಿಸಬೇಕು’ ಎಂದರು.</p>.<p><strong>ಶಿಕ್ಷಣ ಕೊಡಿಸಬೇಕು:</strong></p>.<p>ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ‘ದೇಶದ ಮೊದಲ ಪ್ರಧಾನಿ ನೆಹರೂ ಅವರಿಗಿದ್ದ ಮಕ್ಕಳ ಮೇಲಿನ ಅಳವಾದ ಪ್ರೀತಿ ಮನಗಂಡು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.</p>.<p>‘ಮಕ್ಕಳ ದಿನಾಚರಣೆಯಂದು ಅವರನ್ನು ಹೊರಗಡೆಗೆ ಕರೆದುಕೊಂಡು ಬಂದು ಸುತ್ತಾಡಿಸಿ ಕರೆದುಕೊಂಡು ಹೋಗುವ ಉದ್ದೇಶ ಆಗಬಾರದು. ಬದಲಿಗೆ ಅರ್ಥಪೂರ್ಣ ಆಚರಣೆಗೆ ಸಂಕಲ್ಪ ಮಾಡಿ ಈ ದಿನ ವಿಭಿನ್ನವಾಗಿ ವೇದಿಕೆ ಒದಗಿಸಲಾಗಿದೆ. ಮಕ್ಕಳಿಗೆ ವಿವಿಧ ಸ್ಪರ್ಧೆ, ಮನರಂಜನೆ ಆಯೋಜಿಸಿದೆ. ಮಕ್ಕಳು ದೇಶದ ಭವಿಷ್ಯ ರೂಪಿಸುವ ರೂವಾರಿಗಳು. ಅವರನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕು. ವಿದ್ಯೆ, ಬುದ್ಧಿಯೊಂದಿಗೆ ಶಕ್ತಿವಂತರನ್ನಾಗಿಸಿದರೆ ದೇಶವೂ ಬಲಿಷ್ಠವಾಗುತ್ತದೆ’ ಎಂದು ತಿಳಿಸಿದರು.</p>.<p>ಶಿಕ್ಷಣ ಇಲಾಖೆ ಉಪನಿರ್ದೇಶಕ ಲಿಂಗರಾಜು, ಮಹಾರಾಣಿ ಕಾಲೇಜು ವಿಜ್ಞಾನ ವಿಭಾಗದ ಪ್ರೊ.ಕಾವೇರಿ, ಡಾ.ರೇಖಾ ಅರುಣ್, ಎನ್.ಆರ್.ನಾಗೇಶ್ ಭಾಗವಹಿಸಿದ್ದರು.</p>.<p>ಇದಕ್ಕೂ ಮುನ್ನ, ಮಕ್ಕಳೊಂದಿಗೆ ಗಣ್ಯರು ನೃತ್ಯ ಮಾಡಿದರು. ಮಕ್ಕಳೂ ಕುಣಿದು ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಮಕ್ಕಳಲ್ಲಿ ಸಂಸ್ಕಾರ ಬೆಳೆಸಬೇಕು ಹಾಗೂ ನಮ್ಮ ಸಂಸ್ಕೃತಿಯ ಬಗ್ಗೆ ತಿಳಿಸಬೇಕು’ ಎಂದು ರಂಗಕರ್ಮಿ ಮೈಮ್ ರಮೇಶ್ ಹೇಳಿದರು.</p>.<p>ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಶುಕ್ರವಾರ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ವಿವಿಧ ಸ್ಪರ್ಧೆ, ಮನರಂಜನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಸಂಸ್ಕಾರ-ಸಂಸ್ಕೃತಿ ನಮ್ಮ ಜೀವನದ ಮೌಲ್ಯಗಳು. ಉತ್ತಮ ಜೀವನ ನಡೆಸಲು ಇವು ಮುಖ್ಯ. ಆದರೆ, ಈಗಿನ ಮಕ್ಕಳು ಇವೆರಡನ್ನೂ ಕಳೆದುಕೊಂಡಿದ್ದಾರೆ. ಇದಕ್ಕೆ ಪೋಷಕರು ಮತ್ತು ಶಿಕ್ಷಕರು ಹೊಣೆ’ ಎಂದು ತಿಳಿಸಿದರು.</p>.<p>‘ಮುಂದಿನ ದೇಶದ ಭವಿಷ್ಯಕ್ಕೆ ಇಂದಿನ ಮಕ್ಕಳೆ ಆಸ್ತಿ. ಅವರನ್ನು ಉತ್ತಮ ಪ್ರಜೆಯಾಗಿ ರೂಪುಗೊಳಿಸಬೇಕು. ರಂಗಕರ್ಮಿಯಾಗಿ ಮಕ್ಕಳ ಜೊತೆಯಲ್ಲಿ ಮಕ್ಕಳಾಗಿ ಬೆರೆತು ಜೀವನ ಕಳೆದಿದ್ದೇನೆ. ಮುಂದೆಯೂ ರಂಗಭೂಮಿ ಕಾಯಕ ನಿರಂತರವಾಗಿ ಮುಂದುವರಿಸುವೆ’ ಎಂದರು.</p>.<p><strong>ಗಮನ ಕೊಡಬೇಕು:</strong> </p>.<p>ರಂಗಕರ್ಮಿ ಪ್ರಸನ್ನ ಹೆಗ್ಗೋಡು ಮಾತನಾಡಿ, ‘ಮಕ್ಕಳ ಮನಸು ತುಂಬಾ ಸೂಕ್ಷ್ಮವಾದುದು. ಪರಿಸರ ಮತ್ತು ಅವರ ಸುತ್ತಲಿನ ಪ್ರಚೋದಕಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುತ್ತಾರೆ. ಕುತೂಹಲಕಾರಿ ಮನೋಭಾವ ಹೊಂದಿರುತ್ತಾರೆ. ಪೋಷಕರು ಮಕ್ಕಳ ಕಡೆಗೆ ಸಾಕಷ್ಟು ಗಮನ ನೀಡಬೇಕು’ ಎಂದು ಸಲಹೆ ನೀಡಿದರು.</p>.<p>‘ಇಂದು ಮಕ್ಕಳಲ್ಲಿ ಮೊಬೈಲ್ ಫೋನ್ ಗೀಳು ಹೆಚ್ಚುತ್ತಿದ್ದು, ಕಳವಳಕಾರಿ ಸಂಗತಿ ಇದಾಗಿದೆ. ಮಕ್ಕಳ ಮೇಲಾಗುತ್ತಿರುವ ದುಷ್ಪರಿಣಾಮ ಅರಿತು ಪೋಷಕರು ಮಕ್ಕಳ ಎದುರು ಮೊಬೈಲ್ ಫೋನ್ ಬಳಸುವುದು ಮತ್ತು ನೋಡುವುದನ್ನು ಕಡಿಮೆ ಮಾಡಬೇಕು. ಅವರಲ್ಲಿ ಪುಸ್ತಕ ಓದುವ ಉತ್ತಮ ಹವ್ಯಾಸ ರೂಢಿಸಬೇಕು’ ಎಂದರು.</p>.<p><strong>ಶಿಕ್ಷಣ ಕೊಡಿಸಬೇಕು:</strong></p>.<p>ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ‘ದೇಶದ ಮೊದಲ ಪ್ರಧಾನಿ ನೆಹರೂ ಅವರಿಗಿದ್ದ ಮಕ್ಕಳ ಮೇಲಿನ ಅಳವಾದ ಪ್ರೀತಿ ಮನಗಂಡು ಅವರ ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ’ ಎಂದು ತಿಳಿಸಿದರು.</p>.<p>‘ಮಕ್ಕಳ ದಿನಾಚರಣೆಯಂದು ಅವರನ್ನು ಹೊರಗಡೆಗೆ ಕರೆದುಕೊಂಡು ಬಂದು ಸುತ್ತಾಡಿಸಿ ಕರೆದುಕೊಂಡು ಹೋಗುವ ಉದ್ದೇಶ ಆಗಬಾರದು. ಬದಲಿಗೆ ಅರ್ಥಪೂರ್ಣ ಆಚರಣೆಗೆ ಸಂಕಲ್ಪ ಮಾಡಿ ಈ ದಿನ ವಿಭಿನ್ನವಾಗಿ ವೇದಿಕೆ ಒದಗಿಸಲಾಗಿದೆ. ಮಕ್ಕಳಿಗೆ ವಿವಿಧ ಸ್ಪರ್ಧೆ, ಮನರಂಜನೆ ಆಯೋಜಿಸಿದೆ. ಮಕ್ಕಳು ದೇಶದ ಭವಿಷ್ಯ ರೂಪಿಸುವ ರೂವಾರಿಗಳು. ಅವರನ್ನು ಉತ್ತಮ ವಾತಾವರಣದಲ್ಲಿ ಬೆಳೆಸಬೇಕು. ವಿದ್ಯೆ, ಬುದ್ಧಿಯೊಂದಿಗೆ ಶಕ್ತಿವಂತರನ್ನಾಗಿಸಿದರೆ ದೇಶವೂ ಬಲಿಷ್ಠವಾಗುತ್ತದೆ’ ಎಂದು ತಿಳಿಸಿದರು.</p>.<p>ಶಿಕ್ಷಣ ಇಲಾಖೆ ಉಪನಿರ್ದೇಶಕ ಲಿಂಗರಾಜು, ಮಹಾರಾಣಿ ಕಾಲೇಜು ವಿಜ್ಞಾನ ವಿಭಾಗದ ಪ್ರೊ.ಕಾವೇರಿ, ಡಾ.ರೇಖಾ ಅರುಣ್, ಎನ್.ಆರ್.ನಾಗೇಶ್ ಭಾಗವಹಿಸಿದ್ದರು.</p>.<p>ಇದಕ್ಕೂ ಮುನ್ನ, ಮಕ್ಕಳೊಂದಿಗೆ ಗಣ್ಯರು ನೃತ್ಯ ಮಾಡಿದರು. ಮಕ್ಕಳೂ ಕುಣಿದು ಸಂಭ್ರಮಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>