ಮೈಸೂರು: ಚಾಮರಾಜನಗರದಲ್ಲಿ ಈಚೆಗೆ ನಡೆದ ಆಮ್ಲಜನಕ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಚಾಮರಾಜನಗರದ ಮುಖಂಡ ಮಲ್ಲೇಶ್; ತನಿಖೆ ನಡೆಸುತ್ತಿರುವ ಬಿ.ಎ.ಪಾಟೀಲ ಆಯೋಗಕ್ಕೆ ಸೋಮವಾರ ನಗರದಲ್ಲಿ ದೂರು ಸಲ್ಲಿಸಿದರು.