<p><strong>ಮೈಸೂರು: </strong>ಈ ವರ್ಷದ ದೀಪಾವಳಿಗೆ ಪಟಾಕಿ ಖರೀದಿಸಲು ನಾಗರಿಕರಲ್ಲಿ ನಿರಾಸಕ್ತಿ ಮೂಡಿದೆ. ಪಟಾಕಿ ಮಾರಾಟ ಮಳಿಗೆಗಳತ್ತ ಗ್ರಾಹಕರು ಸುಳಿಯದೇ ವ್ಯಾಪಾರಿಗಳು ಬೇಸರಗೊಂಡಿದ್ದಾರೆ.</p>.<p>ಸಾಮಾನ್ಯವಾಗಿ ದೀಪಾವಳಿಗೆ ಒಂದು ವಾರ ಇರುವಂತೆಯೇ ಪಟಾಕಿ ಮಾರಾಟ ಬಿರುಸಾಗಿರುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ಮಳೆಯಿದ್ದರೂ ಪಟಾಕಿ ಮಾರಾಟ ಜೋರಿತ್ತು. ಈ ವರ್ಷ ಮಳೆಯಿಲ್ಲದೇ, ಪಟಾಕಿ ಸಿಡಿಸಲು ಪೂರಕ ವಾತಾವರಣವಿದ್ದರೂ ಪಟಾಕಿ ಸದ್ದು ಕ್ಷೀಣವಾಗಿದೆ.</p>.<p><strong>ಬೆಲೆ ಹೆಚ್ಚಳವೇ ಮುಖ್ಯ ಕಾರಣ: </strong>ಪಟಾಕಿ ಬೆಲೆಗಳು ಗಗನಕ್ಕೆ ಏರಿರುವುದೇ ಮುಖ್ಯ ಕಾರಣ ಎಂದು ಪಟಾಕಿ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ನಗರದ ಜೆ.ಕೆ.ಮೈದಾನದಲ್ಲಿ ಕನಿಷ್ಠ 25 ಪಟಾಕಿ ಸ್ಟಾಲ್ಗಳನ್ನು ತೆರೆಯಲಾಗುತ್ತಿತ್ತು. ಅದಕ್ಕೆ ತಕ್ಕಂತೆಯೇ ಮಾರಾಟವೂ ಅಧಿಕವಾಗಿಯೇ ಇರುತ್ತಿತ್ತು. ಆದರೆ, ಈ ವರ್ಷ ಕೇವಲ 17 ಮಳಿಗೆಗಳನ್ನು ತೆರೆಯಲಾಗಿದೆ. ಏಕೆಂದರೆ, ಪಟಾಕಿ ಕೊಳ್ಳಲು ನಾಗರಿಕರು ಆಸಕ್ತಿ ತೋರಿಲ್ಲ. ಜತೆಗೆ, ಜೆ.ಕೆ.ಮೈದಾನದಲ್ಲಿ ಬಾಡಿಗೆಯೂ ಹೆಚ್ಚು. ಹಾಗಾಗಿ, ವ್ಯಾಪಾರಿಗಳು ಬಡಾವಣೆಗಳತ್ತ ಮುಖ ಮಾಡಿದ್ದಾರೆ.</p>.<p>ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ವಿಪರೀತ ಹೆಚ್ಚಾಗಿದೆ. ಸಣ್ಣಹೂ ಕುಂಡದ ಪೊಟ್ಟಣ ಕೊಳ್ಳಬೇಕಾದರೂ ಸುರುಸುರು ಬತ್ತಿ ಜತೆಗೆ ಕನಿಷ್ಠವೆಂದರೂ ₹ 250 ನೀಡಬೇಕಾಗುತ್ತದೆ. ಗಿಫ್ಟ್ ಬಾಕ್ಸ್ ಬೆಲೆ ಶುರುವಾಗುವುದೇ ₹ 1,500 ಮೇಲ್ಪಟ್ಟು. ಹಾಗಾಗಿ, ಪಟಾಕಿ ಸುಡುವುದಕ್ಕಿಂತ, ನೋಡುವುದೇ ಕ್ಷೇಮ ಎಂದು ನಾಗರಿಕರು ಭಾವಿಸಿದ್ದಾರೆ ಎಂದು ವ್ಯಾಪಾರಿ ರಘು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕಳೆದ ವರ್ಷದಿಂದಲೇ ಮಾರಾಟ ಕುಸಿತ ಶುರುವಾಗಿದೆ. ಸಾಕಷ್ಟು ಮಾರಾಟಗಾರರು ನಷ್ಟ ಅನುಭವಿಸಿದ್ದಾರೆ. ಈ ವರ್ಷವೂ ಮಾರಾಟ ಚುರುಕಾಗಿಲ್ಲ. ನಮಗೆ ಮಾರಾಟಕ್ಕೆ ಬೆಳಿಗ್ಗೆ 10ರಿಂದ ರಾತ್ರಿ 7ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದಲೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ’ ಎಂದರು.</p>.<p><strong>ನಿರ್ಬಂಧ ಕಾರಣವಲ್ಲ:</strong>‘ಪಟಾಕಿಯನ್ನು ದಿನಕ್ಕೆ ಎರಡು ಗಂಟೆ ಮಾತ್ರ ಸಿಡಿಸಬೇಕೆಂಬ ಸರ್ಕಾರದ ಆದೇಶ ಪಟಾಕಿ ಮಾರಾಟ ಕುಸಿಯಲು ಮುಖ್ಯ ಕಾರಣವಾಗಿಲ್ಲ. ಪರಿಸರ ಉಳಿಸಲು ಆದೇಶ ಪೂರಕವಾಗಿಯೇ ಇದೆ. ಬೆಲೆ ಹೆಚ್ಚಳದಿಂದಲೇ ಪಟಾಕಿ ಕೊಳ್ಳಲು ಹಿಂದೇಟು ಹಾಕುವಂತಾಗಿದೆ’ ಎಂದು ಗ್ರಾಹಕ ಬಿ.ಎಸ್.ಪಿನಾಕಿ ಹೇಳಿದರು.</p>.<p>ನಗರದಲ್ಲಿ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸುಡಬಹುದು. ಸರ್ಕಾರದ ಆದೇಶವೂ ಅಂತೆಯೇ ಇದೆ. ಅಲ್ಲದೇ, ಅಧಿಕ ಶಬ್ದ ಹೊಮ್ಮಿಸುವ ಪಟಾಕಿಗಳನ್ನು ಸಿಡಿಸಿದೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುವುದು ಎಂದು ಪೊಲೀಸ್ ಕಮಿಷನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ಈ ವರ್ಷದ ದೀಪಾವಳಿಗೆ ಪಟಾಕಿ ಖರೀದಿಸಲು ನಾಗರಿಕರಲ್ಲಿ ನಿರಾಸಕ್ತಿ ಮೂಡಿದೆ. ಪಟಾಕಿ ಮಾರಾಟ ಮಳಿಗೆಗಳತ್ತ ಗ್ರಾಹಕರು ಸುಳಿಯದೇ ವ್ಯಾಪಾರಿಗಳು ಬೇಸರಗೊಂಡಿದ್ದಾರೆ.</p>.<p>ಸಾಮಾನ್ಯವಾಗಿ ದೀಪಾವಳಿಗೆ ಒಂದು ವಾರ ಇರುವಂತೆಯೇ ಪಟಾಕಿ ಮಾರಾಟ ಬಿರುಸಾಗಿರುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ಮಳೆಯಿದ್ದರೂ ಪಟಾಕಿ ಮಾರಾಟ ಜೋರಿತ್ತು. ಈ ವರ್ಷ ಮಳೆಯಿಲ್ಲದೇ, ಪಟಾಕಿ ಸಿಡಿಸಲು ಪೂರಕ ವಾತಾವರಣವಿದ್ದರೂ ಪಟಾಕಿ ಸದ್ದು ಕ್ಷೀಣವಾಗಿದೆ.</p>.<p><strong>ಬೆಲೆ ಹೆಚ್ಚಳವೇ ಮುಖ್ಯ ಕಾರಣ: </strong>ಪಟಾಕಿ ಬೆಲೆಗಳು ಗಗನಕ್ಕೆ ಏರಿರುವುದೇ ಮುಖ್ಯ ಕಾರಣ ಎಂದು ಪಟಾಕಿ ವ್ಯಾಪಾರಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ಈ ಹಿಂದೆ ನಗರದ ಜೆ.ಕೆ.ಮೈದಾನದಲ್ಲಿ ಕನಿಷ್ಠ 25 ಪಟಾಕಿ ಸ್ಟಾಲ್ಗಳನ್ನು ತೆರೆಯಲಾಗುತ್ತಿತ್ತು. ಅದಕ್ಕೆ ತಕ್ಕಂತೆಯೇ ಮಾರಾಟವೂ ಅಧಿಕವಾಗಿಯೇ ಇರುತ್ತಿತ್ತು. ಆದರೆ, ಈ ವರ್ಷ ಕೇವಲ 17 ಮಳಿಗೆಗಳನ್ನು ತೆರೆಯಲಾಗಿದೆ. ಏಕೆಂದರೆ, ಪಟಾಕಿ ಕೊಳ್ಳಲು ನಾಗರಿಕರು ಆಸಕ್ತಿ ತೋರಿಲ್ಲ. ಜತೆಗೆ, ಜೆ.ಕೆ.ಮೈದಾನದಲ್ಲಿ ಬಾಡಿಗೆಯೂ ಹೆಚ್ಚು. ಹಾಗಾಗಿ, ವ್ಯಾಪಾರಿಗಳು ಬಡಾವಣೆಗಳತ್ತ ಮುಖ ಮಾಡಿದ್ದಾರೆ.</p>.<p>ಪಟಾಕಿಗಳ ಬೆಲೆ ಕಳೆದ ವರ್ಷಕ್ಕಿಂತ ಈ ವರ್ಷ ವಿಪರೀತ ಹೆಚ್ಚಾಗಿದೆ. ಸಣ್ಣಹೂ ಕುಂಡದ ಪೊಟ್ಟಣ ಕೊಳ್ಳಬೇಕಾದರೂ ಸುರುಸುರು ಬತ್ತಿ ಜತೆಗೆ ಕನಿಷ್ಠವೆಂದರೂ ₹ 250 ನೀಡಬೇಕಾಗುತ್ತದೆ. ಗಿಫ್ಟ್ ಬಾಕ್ಸ್ ಬೆಲೆ ಶುರುವಾಗುವುದೇ ₹ 1,500 ಮೇಲ್ಪಟ್ಟು. ಹಾಗಾಗಿ, ಪಟಾಕಿ ಸುಡುವುದಕ್ಕಿಂತ, ನೋಡುವುದೇ ಕ್ಷೇಮ ಎಂದು ನಾಗರಿಕರು ಭಾವಿಸಿದ್ದಾರೆ ಎಂದು ವ್ಯಾಪಾರಿ ರಘು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕಳೆದ ವರ್ಷದಿಂದಲೇ ಮಾರಾಟ ಕುಸಿತ ಶುರುವಾಗಿದೆ. ಸಾಕಷ್ಟು ಮಾರಾಟಗಾರರು ನಷ್ಟ ಅನುಭವಿಸಿದ್ದಾರೆ. ಈ ವರ್ಷವೂ ಮಾರಾಟ ಚುರುಕಾಗಿಲ್ಲ. ನಮಗೆ ಮಾರಾಟಕ್ಕೆ ಬೆಳಿಗ್ಗೆ 10ರಿಂದ ರಾತ್ರಿ 7ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದಲೂ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ’ ಎಂದರು.</p>.<p><strong>ನಿರ್ಬಂಧ ಕಾರಣವಲ್ಲ:</strong>‘ಪಟಾಕಿಯನ್ನು ದಿನಕ್ಕೆ ಎರಡು ಗಂಟೆ ಮಾತ್ರ ಸಿಡಿಸಬೇಕೆಂಬ ಸರ್ಕಾರದ ಆದೇಶ ಪಟಾಕಿ ಮಾರಾಟ ಕುಸಿಯಲು ಮುಖ್ಯ ಕಾರಣವಾಗಿಲ್ಲ. ಪರಿಸರ ಉಳಿಸಲು ಆದೇಶ ಪೂರಕವಾಗಿಯೇ ಇದೆ. ಬೆಲೆ ಹೆಚ್ಚಳದಿಂದಲೇ ಪಟಾಕಿ ಕೊಳ್ಳಲು ಹಿಂದೇಟು ಹಾಕುವಂತಾಗಿದೆ’ ಎಂದು ಗ್ರಾಹಕ ಬಿ.ಎಸ್.ಪಿನಾಕಿ ಹೇಳಿದರು.</p>.<p>ನಗರದಲ್ಲಿ ರಾತ್ರಿ 8ರಿಂದ 10ರವರೆಗೆ ಮಾತ್ರ ಪಟಾಕಿ ಸುಡಬಹುದು. ಸರ್ಕಾರದ ಆದೇಶವೂ ಅಂತೆಯೇ ಇದೆ. ಅಲ್ಲದೇ, ಅಧಿಕ ಶಬ್ದ ಹೊಮ್ಮಿಸುವ ಪಟಾಕಿಗಳನ್ನು ಸಿಡಿಸಿದೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುವುದು ಎಂದು ಪೊಲೀಸ್ ಕಮಿಷನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>