<p><strong>ಮೈಸೂರು</strong>: ಅಖಾಡದಲ್ಲಿ ಮದಗಜಗಳಂತೆ ಹೋರಾಡಿ, ಆಕ್ರಮಣಕಾರಿ ಪಟ್ಟುಗಳಿಂದ ಪ್ರಾಬಲ್ಯ ಮೆರೆದ ಬೆಳಗಾವಿಯ ಪೈಲ್ವಾನ್ ಕಾಮೇಶ್ ಪಾಟೀಲ ಹಾಗೂ ಉತ್ತರ ಕನ್ನಡದ ಪೈಲ್ವಾನ್ ಮಂಜುನಾಥ ಕ್ರಮವಾಗಿ ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿ ಗೆದ್ದರು. </p>.<p>ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಭಾನುವಾರ ನಡೆದ ದಸರಾ ಕುಸ್ತಿ ಸ್ಪರ್ಧೆಯ 86 ಕೆ.ಜಿ ವಿಭಾಗದ ಹಣಾಹಣಿಯಲ್ಲಿ ಕಾಮೇಶ್ ಅವರು ಭದ್ರಾವತಿಯ ಪೈಲ್ವಾನ್ ಕಿರಣ್ ಅವರನ್ನು 2–1ರಿಂದ ಮಣಿಸಿದರು. </p>.<p>ಮೊದಲ 20 ನಿಮಿಷಗಳ ಹೋರಾಟದಲ್ಲಿ ಇಬ್ಬರೂ ಸಮಬಲ ಪ್ರದರ್ಶಿಸಿದರು. ಹೆಚ್ಚುವರಿಯಾಗಿ ನೀಡಿದ 5 ನಿಮಿಷದಲ್ಲಿ ಪಾರಮ್ಯ ಮೆರೆದ ಕಾಮೇಶ್ ರೋಚಕ ಜಯ ಸಾಧಿಸಿದರು. </p>.<p>ದಸರಾ ಕೇಸರಿ: 74–86 ಕೆ.ಜಿ ವಿಭಾಗದಲ್ಲಿ ಉತ್ತರ ಕನ್ನಡದ ಮಂಜುನಾಥ ಅವರು ಬೆಳಗಾವಿಯ ಪರಮಾನಂದ ಅವರನ್ನು 10 ನಿಮಿಷದಲ್ಲಿ 4–2 ಅಂಕಗಳ ಅಂತರದಲ್ಲಿ ಸೋಲಿಸಿದರು.</p>.<p>‘ಮೈಸೂರು ದಸರಾ ಕುಮಾರ’ ಪ್ರಶಸ್ತಿಗೆ (86 ಕೆ.ಜಿ) ನಡೆದ 30 ನಿಮಿಷಗಳ ಹೋರಾಟದಲ್ಲಿ ಮೈಸೂರು ವಿಶ್ವವಿದ್ಯಾಲಯದ ಚೇತನ್ ಅವರು ನಗರದ ನಜರ್ಬಾದ್ನ ಚೇತನ್ ಅವರನ್ನು 22–3ರಿಂದ ಮಣಿಸಿದರು. </p>.<p>‘ದಸರಾ ಕಿಶೋರ’ ಪ್ರಶಸ್ತಿಯ 57–65 ಕೆ.ಜಿ ವಿಭಾಗದಲ್ಲಿ ದಾವಣಗೆರೆಯ ಕೊರವರ ಸಂಜೀವ ಅವರು ಬಾಗಲಕೋಟೆಯ ಕುಮಾರ ನಾಗಲೂರು ವಿರುದ್ಧ 12–0 ಪಾಯಿಂಟ್ಗಳಿಂದ ಗೆದ್ದರು.</p>.<p>ಮಹಿಳೆಯರ 57– 76 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬೆಳಗಾವಿ ಸ್ವಾತಿ ಪಾಟೀಲ ಅವರು ಹಳಿಯಾಳದ ಪ್ರತೀಕ್ಷಾ ಅವರನ್ನು 6–2 ಪಾಯಿಂಟ್ಗಳಿಂದ ಸೋಲಿಸಿ ‘ದಸರಾ ಕಿಶೋರಿ’ ಆದರು.</p>.<p>ದಾವಣಗೆರೆಯ ಆರ್.ಪ್ರಜ್ವಲ್– ದಸರಾ ಬಾಲ ಕಿಶೋರ, ಅರ್ಜುನ್ ಕೊರವರ– ಬಾಲ ಕೇಸರಿ, ಧಾರವಾಡದ ಚೇತನ್– ಬಾಲ ಕುಮಾರ್, ದಾವಣಗೆರೆಯ ಬನ್ನೂರಿನ ಜಾನ್ಹವಿ– ಬಾಲ ಕಿಶೋರಿ ಪ್ರಶಸ್ತಿ ಗೆದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಅಖಾಡದಲ್ಲಿ ಮದಗಜಗಳಂತೆ ಹೋರಾಡಿ, ಆಕ್ರಮಣಕಾರಿ ಪಟ್ಟುಗಳಿಂದ ಪ್ರಾಬಲ್ಯ ಮೆರೆದ ಬೆಳಗಾವಿಯ ಪೈಲ್ವಾನ್ ಕಾಮೇಶ್ ಪಾಟೀಲ ಹಾಗೂ ಉತ್ತರ ಕನ್ನಡದ ಪೈಲ್ವಾನ್ ಮಂಜುನಾಥ ಕ್ರಮವಾಗಿ ‘ದಸರಾ ಕಂಠೀರವ’ ಹಾಗೂ ‘ದಸರಾ ಕೇಸರಿ’ ಪ್ರಶಸ್ತಿ ಗೆದ್ದರು. </p>.<p>ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದ ಅಖಾಡದಲ್ಲಿ ಭಾನುವಾರ ನಡೆದ ದಸರಾ ಕುಸ್ತಿ ಸ್ಪರ್ಧೆಯ 86 ಕೆ.ಜಿ ವಿಭಾಗದ ಹಣಾಹಣಿಯಲ್ಲಿ ಕಾಮೇಶ್ ಅವರು ಭದ್ರಾವತಿಯ ಪೈಲ್ವಾನ್ ಕಿರಣ್ ಅವರನ್ನು 2–1ರಿಂದ ಮಣಿಸಿದರು. </p>.<p>ಮೊದಲ 20 ನಿಮಿಷಗಳ ಹೋರಾಟದಲ್ಲಿ ಇಬ್ಬರೂ ಸಮಬಲ ಪ್ರದರ್ಶಿಸಿದರು. ಹೆಚ್ಚುವರಿಯಾಗಿ ನೀಡಿದ 5 ನಿಮಿಷದಲ್ಲಿ ಪಾರಮ್ಯ ಮೆರೆದ ಕಾಮೇಶ್ ರೋಚಕ ಜಯ ಸಾಧಿಸಿದರು. </p>.<p>ದಸರಾ ಕೇಸರಿ: 74–86 ಕೆ.ಜಿ ವಿಭಾಗದಲ್ಲಿ ಉತ್ತರ ಕನ್ನಡದ ಮಂಜುನಾಥ ಅವರು ಬೆಳಗಾವಿಯ ಪರಮಾನಂದ ಅವರನ್ನು 10 ನಿಮಿಷದಲ್ಲಿ 4–2 ಅಂಕಗಳ ಅಂತರದಲ್ಲಿ ಸೋಲಿಸಿದರು.</p>.<p>‘ಮೈಸೂರು ದಸರಾ ಕುಮಾರ’ ಪ್ರಶಸ್ತಿಗೆ (86 ಕೆ.ಜಿ) ನಡೆದ 30 ನಿಮಿಷಗಳ ಹೋರಾಟದಲ್ಲಿ ಮೈಸೂರು ವಿಶ್ವವಿದ್ಯಾಲಯದ ಚೇತನ್ ಅವರು ನಗರದ ನಜರ್ಬಾದ್ನ ಚೇತನ್ ಅವರನ್ನು 22–3ರಿಂದ ಮಣಿಸಿದರು. </p>.<p>‘ದಸರಾ ಕಿಶೋರ’ ಪ್ರಶಸ್ತಿಯ 57–65 ಕೆ.ಜಿ ವಿಭಾಗದಲ್ಲಿ ದಾವಣಗೆರೆಯ ಕೊರವರ ಸಂಜೀವ ಅವರು ಬಾಗಲಕೋಟೆಯ ಕುಮಾರ ನಾಗಲೂರು ವಿರುದ್ಧ 12–0 ಪಾಯಿಂಟ್ಗಳಿಂದ ಗೆದ್ದರು.</p>.<p>ಮಹಿಳೆಯರ 57– 76 ಕೆ.ಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಬೆಳಗಾವಿ ಸ್ವಾತಿ ಪಾಟೀಲ ಅವರು ಹಳಿಯಾಳದ ಪ್ರತೀಕ್ಷಾ ಅವರನ್ನು 6–2 ಪಾಯಿಂಟ್ಗಳಿಂದ ಸೋಲಿಸಿ ‘ದಸರಾ ಕಿಶೋರಿ’ ಆದರು.</p>.<p>ದಾವಣಗೆರೆಯ ಆರ್.ಪ್ರಜ್ವಲ್– ದಸರಾ ಬಾಲ ಕಿಶೋರ, ಅರ್ಜುನ್ ಕೊರವರ– ಬಾಲ ಕೇಸರಿ, ಧಾರವಾಡದ ಚೇತನ್– ಬಾಲ ಕುಮಾರ್, ದಾವಣಗೆರೆಯ ಬನ್ನೂರಿನ ಜಾನ್ಹವಿ– ಬಾಲ ಕಿಶೋರಿ ಪ್ರಶಸ್ತಿ ಗೆದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>