<p><strong>ಹುಣಸೂರು:</strong> ಸೌದೆ ಬಳಸಿ ತಂಬಾಕು ಹದಗೊಳಿಸುವ ಸಾಂಪ್ರದಾಯಿಕ ಪದ್ಧತಿಗೆ ಪರ್ಯಾಯವಾಗಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರವು ವಿದ್ಯುತ್ಚಾಲಿತ ಬ್ಯಾರನ್ ಸಿದ್ಧಪಡಿಸಿದೆ.</p>.<p>ಬೆಳೆಗಾರರು ತಂಬಾಕು ಹದಗೊಳಿಸಲು ಸೌದೆ ಅವಲಂಬಿಸಿದ್ದರು. ವೈಜ್ಞಾನಿಕವಾಗಿ ಪ್ರತಿ ಕೆ.ಜಿ ತಂಬಾಕು ಹದಗೊಳಿಸಲು 6ರಿಂದ 7 ಕೆ.ಜಿ ಸೌದೆ ಬಳಸುತ್ತಿದ್ದು, ಒಂದು ಸಿಂಗಲ್ ಬ್ಯಾರನ್ ತಂಬಾಕು ಹದಗೊಳಿಸಲು ಕನಿಷ್ಠ 1.5 ರಿಂದ 2 ಟನ್ ಉರುವಲು ಅಗತ್ಯವಿದೆ.</p>.<p>ಸಂಶೋಧನೆ: ಆಂಧ್ರಪ್ರದೇಶದ ರಾಜಮಹೇಂದ್ರಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ 2 ವರ್ಷದಿಂದ ವಿದ್ಯುತ್ ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್ ಪರೀಕ್ಷೆ ನಡೆದಿದ್ದು, ಸಾಂಪ್ರದಾಯಿಕ ಬ್ಯಾರನ್ನಲ್ಲಿ ಹದಗೊಳಿಸಿದ ಮಾದರಿಯಲ್ಲೇ ಗುಣಮಟ್ಟದ ಇಳುವರಿ ಸಿಕ್ಕಿದೆ.</p>.<p>‘ಹುಣಸೂರಿನ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ 3 ತಿಂಗಳಿಂದ ಪರೀಕ್ಷೆ ನಡೆಸಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಸೌದೆ ಬದಲಿಗೆ ರೈತರು ವಿದ್ಯುತ್ ಚಾಲಿತ ಬ್ಯಾರನ್ ಬಳಸಬಹುದಾಗಿದೆ’ ಎಂದು ಕೇಂದ್ರದ ಹಿರಿಯ ವಿಜ್ಞಾನಿ ರಾಮಕೃಷ್ಣನ್ ತಿಳಿಸಿದರು.</p>.<p>ಅವಿಷ್ಕಾರ: ‘ಆಂಧ್ರಪ್ರದೇಶದ ತಂಬಾಕು ಬೇಸಾಯ ಕುಟುಂಬದ ಎಂಜಿನಿಯರ್ ನಾರಾಯಣ ರೆಡ್ಡಿ ಮತ್ತು ಇಬ್ಬರು ಸ್ನೇಹಿತರು ಆರಂಭಿಸಿದ ‘ಔಲ್ ಟೆಕ್ನೋ’ ವಿದ್ಯುತ್ ಚಾಲಿತ ಬ್ಯಾರನ್ ಅವಿಷ್ಕಾರಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.</p>.<p>‘ಅಗ್ನಿ ಅವಘಡದಲ್ಲಿ ಬ್ಯಾರನ್ ಸುಟ್ಟು ಭಸ್ಮವಾದ ಕಹಿ ಘಟನೆಯಿಂದ ಸಮಸ್ಯೆ ಪರಿಹಾರಕ್ಕೆ ಮತ್ತು ಪರಿಸರ ಪೂರಕ ಬ್ಯಾರನ್ನ ಹೊಸ ತಂತ್ರಜ್ಞಾನದ ಅವಿಷ್ಕಾರಕ್ಕೆ ಕಾರಣವಾಯಿತು’ ಎಂದು ನಾರಾಯಣ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತಂಬಾಕು ಸಂಶೋಧನಾ ಕೇಂದ್ರ ರಾಜಮಹೇಂದ್ರಿಯೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯುತ್ ಬ್ಯಾರನ್ನಲ್ಲಿ 2 ವರ್ಷ ನಿರಂತರ ಪ್ರಯತ್ನಿಸಿ ಗುಣಮಟ್ಟದ ತಂಬಾಕು ಹದಗೊಳಿಸಿದ ಫಲಿತಾಂಶ ಸಿಕ್ಕಿದೆ. ಕರ್ನಾಟಕದ ವಾತಾವರಣದಲ್ಲಿ ಬೆಳೆದ ತಂಬಾಕು ಹೊಸ ತಂತ್ರಜ್ಞಾನದಲ್ಲಿ ಹದಗೊಳಿಸುವ ಕಾರ್ಯ ಕಳೆದ 3 ತಿಂಗಳಿಂದ ಹುಣಸೂರು ಸಿಟಿಆರ್ಐ ಕೇಂದ್ರದಲ್ಲಿ ನಡೆದಿದ್ದು, ಇಲ್ಲಿಯೂ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ’ ಎನ್ನುತ್ತಾರೆ ಅವರು.</p>.<p class="Subhead">ವಿದ್ಯುತ್ ಬಳಕೆ: ಹೊಸ ವಿನ್ಯಾಸದಲ್ಲಿ ಹೊರ ಬಂದಿರುವ ವಿದ್ಯುತ್ ಬ್ಯಾರನ್ನಲ್ಲಿ ತಂಬಾಕು ಹದಗೊಳಿಸಲು ಪ್ರತಿ ಬ್ಯಾರನ್ಗೆ 400ರಿಂದ 500 ಯುನಿಟ್ ವಿದ್ಯುತ್ ಬೇಕು. ಇದಕ್ಕೆ ತಗಲುವ ವೆಚ್ಚ ₹3ರಿಂದ 4ಸಾವಿರ. ಸೌದೆ ಬಳಸಿದಲ್ಲಿ ₹8 ರಿಂದ 9 ಸಾವಿರ ಬೇಕಾಗುತ್ತದೆ. ಇದಲ್ಲದೆ ಕೂಲಿ ಕಾರ್ಮಿಕರು ಹಗಲು ರಾತ್ರಿ ಪಾಳೆಯಲ್ಲಿ ಉರುವಲು ನೀಡಬೇಕು. ಈ ತಂತ್ರಜ್ಞಾನದಲ್ಲಿ ಎಲ್ಲವೂ ಆಟೋಮೆಟಿಕ್ ವ್ಯವಸ್ಥೆ ಅಳವಡಿಸಿದೆ. ಮೊಬೈಲ್ ಮೂಲಕ ಶಾಖ ನಿರ್ವಹಣೆ ಮಾಡುವ ಸೌಲಭ್ಯ ಕಲ್ಪಿಸಿದೆ.</p>.<p>ವಿದ್ಯುತ್ ಅಡಚಣೆ ಆದಲ್ಲಿ ಸೌರಶಕ್ತಿ ಚಾಲಿತ ವಿದ್ಯುತ್ ಪರ್ಯಾಯವಾಗಿ ಬಳಸುವ ವ್ಯವಸ್ಥೆ ಈ ತಂತ್ರಜ್ಞಾನದಲ್ಲಿ ಅಳವಡಿಸಿದ್ದು, ಗ್ರಾಮೀಣ ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸಲಾಗಿದೆ.</p>.<p>Highlights - ಪ್ರತಿ ಬ್ಯಾರನ್ಗೆ 400ರಿಂದ 500 ಯುನಿಟ್ ತಗಲುವ ವೆಚ್ಚ ₹3ರಿಂದ 4ಸಾವಿರ ಮೊಬೈಲ್ ಫೋನ್ ಮೂಲಕ ಶಾಖ ನಿರ್ವಹಣೆ </p>.<p>Quote - ವಿದ್ಯುತ್ ಬ್ಯಾರನ್ ಮೂರು ಫೇಸ್ನಲ್ಲಿ ಬಳಸುವಂತೆ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಬಳಸಿ ಹದಗೊಳಿಸುವ ತಂತ್ರಜ್ಞಾನ ಅಳವಡಿಸುವ ಚಿಂತನೆ ಇದೆ ನಾರಾಯಣ ರೆಡ್ಡಿ ಯುವ ವಿಜ್ಞಾನಿ</p>.<p>Cut-off box - ‘ಆರ್ಥಿಕ ಹೊರೆ ತಗ್ಗಲಿದೆ’ ವಿದ್ಯುತ್ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್ ಪರಿಸರ ಪೂರಕವಾಗಿದ್ದು ಆರ್ಥಿಕ ಹೊರೆ ತಗ್ಗಲಿದೆ. ಆರಂಭದ ಬಂಡವಾಳ ₹ 18ರಿಂದ 20 ಲಕ್ಷ ಹೂಡಬೇಕಾಗಿದ್ದು ರೈತರಿಗೆ ಕಷ್ಟ ಸಾಧ್ಯ. ಬ್ಯಾಂಕ್ ಸಾಲ ಸೌಲಭ್ಯ ಮತ್ತು ತಂಬಾಕು ಮಂಡಳಿ ರಿಯಾಯಿತಿ ದರದಲ್ಲಿ ನೀಡಬೇಕು ಎಂದು ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ ಹೇಳಿದರು.</p>.<p>Cut-off box - ‘ರಾಸಾಯನಿಕ ಬದಲಾವಣೆ ಕಂಡು ಬಂದಿಲ್ಲ’ ಹದಗೊಳಿಸಿದ ತಂಬಾಕು ಪ್ರಯೋಗಾಲಯಕ್ಕೆ ಕಳುಹಿಸಿ ವೈಜ್ಞಾನಿಕ ಪರೀಕ್ಷೆ ನಡೆಸಿದ್ದು ಸಾಂಪ್ರದಾಯಕ ಪದ್ಧತಿ ಮತ್ತು ವಿದ್ಯುತ್ ಪದ್ಧತಿಯಲ್ಲಿ ಹದಗೊಳಿಸಿದ ತಂಬಾಕಿನಲ್ಲಿ ಯಾವುದೇ ರಾಸಾಯನಿಕ ಬದಲಾವಣೆ ಕಂಡು ಬಂದಿಲ್ಲ ಎಂಬ ವರದಿ ಬಂದಿದೆ. ರೈತರು ಈ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದಾಗಿದೆ ಎಂದು ಸಿಟಿಆರ್ಐ ವಿಜ್ಞಾನಿ ರಾಮಕೃಷ್ಣನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು:</strong> ಸೌದೆ ಬಳಸಿ ತಂಬಾಕು ಹದಗೊಳಿಸುವ ಸಾಂಪ್ರದಾಯಿಕ ಪದ್ಧತಿಗೆ ಪರ್ಯಾಯವಾಗಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರವು ವಿದ್ಯುತ್ಚಾಲಿತ ಬ್ಯಾರನ್ ಸಿದ್ಧಪಡಿಸಿದೆ.</p>.<p>ಬೆಳೆಗಾರರು ತಂಬಾಕು ಹದಗೊಳಿಸಲು ಸೌದೆ ಅವಲಂಬಿಸಿದ್ದರು. ವೈಜ್ಞಾನಿಕವಾಗಿ ಪ್ರತಿ ಕೆ.ಜಿ ತಂಬಾಕು ಹದಗೊಳಿಸಲು 6ರಿಂದ 7 ಕೆ.ಜಿ ಸೌದೆ ಬಳಸುತ್ತಿದ್ದು, ಒಂದು ಸಿಂಗಲ್ ಬ್ಯಾರನ್ ತಂಬಾಕು ಹದಗೊಳಿಸಲು ಕನಿಷ್ಠ 1.5 ರಿಂದ 2 ಟನ್ ಉರುವಲು ಅಗತ್ಯವಿದೆ.</p>.<p>ಸಂಶೋಧನೆ: ಆಂಧ್ರಪ್ರದೇಶದ ರಾಜಮಹೇಂದ್ರಿ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ 2 ವರ್ಷದಿಂದ ವಿದ್ಯುತ್ ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್ ಪರೀಕ್ಷೆ ನಡೆದಿದ್ದು, ಸಾಂಪ್ರದಾಯಿಕ ಬ್ಯಾರನ್ನಲ್ಲಿ ಹದಗೊಳಿಸಿದ ಮಾದರಿಯಲ್ಲೇ ಗುಣಮಟ್ಟದ ಇಳುವರಿ ಸಿಕ್ಕಿದೆ.</p>.<p>‘ಹುಣಸೂರಿನ ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರದಲ್ಲಿ 3 ತಿಂಗಳಿಂದ ಪರೀಕ್ಷೆ ನಡೆಸಿದ್ದು, ಉತ್ತಮ ಗುಣಮಟ್ಟ ಕಾಯ್ದುಕೊಂಡಿದೆ. ಸೌದೆ ಬದಲಿಗೆ ರೈತರು ವಿದ್ಯುತ್ ಚಾಲಿತ ಬ್ಯಾರನ್ ಬಳಸಬಹುದಾಗಿದೆ’ ಎಂದು ಕೇಂದ್ರದ ಹಿರಿಯ ವಿಜ್ಞಾನಿ ರಾಮಕೃಷ್ಣನ್ ತಿಳಿಸಿದರು.</p>.<p>ಅವಿಷ್ಕಾರ: ‘ಆಂಧ್ರಪ್ರದೇಶದ ತಂಬಾಕು ಬೇಸಾಯ ಕುಟುಂಬದ ಎಂಜಿನಿಯರ್ ನಾರಾಯಣ ರೆಡ್ಡಿ ಮತ್ತು ಇಬ್ಬರು ಸ್ನೇಹಿತರು ಆರಂಭಿಸಿದ ‘ಔಲ್ ಟೆಕ್ನೋ’ ವಿದ್ಯುತ್ ಚಾಲಿತ ಬ್ಯಾರನ್ ಅವಿಷ್ಕಾರಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ.</p>.<p>‘ಅಗ್ನಿ ಅವಘಡದಲ್ಲಿ ಬ್ಯಾರನ್ ಸುಟ್ಟು ಭಸ್ಮವಾದ ಕಹಿ ಘಟನೆಯಿಂದ ಸಮಸ್ಯೆ ಪರಿಹಾರಕ್ಕೆ ಮತ್ತು ಪರಿಸರ ಪೂರಕ ಬ್ಯಾರನ್ನ ಹೊಸ ತಂತ್ರಜ್ಞಾನದ ಅವಿಷ್ಕಾರಕ್ಕೆ ಕಾರಣವಾಯಿತು’ ಎಂದು ನಾರಾಯಣ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ತಂಬಾಕು ಸಂಶೋಧನಾ ಕೇಂದ್ರ ರಾಜಮಹೇಂದ್ರಿಯೊಂದಿಗೆ ಒಪ್ಪಂದ ಮಾಡಿಕೊಂಡು ವಿದ್ಯುತ್ ಬ್ಯಾರನ್ನಲ್ಲಿ 2 ವರ್ಷ ನಿರಂತರ ಪ್ರಯತ್ನಿಸಿ ಗುಣಮಟ್ಟದ ತಂಬಾಕು ಹದಗೊಳಿಸಿದ ಫಲಿತಾಂಶ ಸಿಕ್ಕಿದೆ. ಕರ್ನಾಟಕದ ವಾತಾವರಣದಲ್ಲಿ ಬೆಳೆದ ತಂಬಾಕು ಹೊಸ ತಂತ್ರಜ್ಞಾನದಲ್ಲಿ ಹದಗೊಳಿಸುವ ಕಾರ್ಯ ಕಳೆದ 3 ತಿಂಗಳಿಂದ ಹುಣಸೂರು ಸಿಟಿಆರ್ಐ ಕೇಂದ್ರದಲ್ಲಿ ನಡೆದಿದ್ದು, ಇಲ್ಲಿಯೂ ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ’ ಎನ್ನುತ್ತಾರೆ ಅವರು.</p>.<p class="Subhead">ವಿದ್ಯುತ್ ಬಳಕೆ: ಹೊಸ ವಿನ್ಯಾಸದಲ್ಲಿ ಹೊರ ಬಂದಿರುವ ವಿದ್ಯುತ್ ಬ್ಯಾರನ್ನಲ್ಲಿ ತಂಬಾಕು ಹದಗೊಳಿಸಲು ಪ್ರತಿ ಬ್ಯಾರನ್ಗೆ 400ರಿಂದ 500 ಯುನಿಟ್ ವಿದ್ಯುತ್ ಬೇಕು. ಇದಕ್ಕೆ ತಗಲುವ ವೆಚ್ಚ ₹3ರಿಂದ 4ಸಾವಿರ. ಸೌದೆ ಬಳಸಿದಲ್ಲಿ ₹8 ರಿಂದ 9 ಸಾವಿರ ಬೇಕಾಗುತ್ತದೆ. ಇದಲ್ಲದೆ ಕೂಲಿ ಕಾರ್ಮಿಕರು ಹಗಲು ರಾತ್ರಿ ಪಾಳೆಯಲ್ಲಿ ಉರುವಲು ನೀಡಬೇಕು. ಈ ತಂತ್ರಜ್ಞಾನದಲ್ಲಿ ಎಲ್ಲವೂ ಆಟೋಮೆಟಿಕ್ ವ್ಯವಸ್ಥೆ ಅಳವಡಿಸಿದೆ. ಮೊಬೈಲ್ ಮೂಲಕ ಶಾಖ ನಿರ್ವಹಣೆ ಮಾಡುವ ಸೌಲಭ್ಯ ಕಲ್ಪಿಸಿದೆ.</p>.<p>ವಿದ್ಯುತ್ ಅಡಚಣೆ ಆದಲ್ಲಿ ಸೌರಶಕ್ತಿ ಚಾಲಿತ ವಿದ್ಯುತ್ ಪರ್ಯಾಯವಾಗಿ ಬಳಸುವ ವ್ಯವಸ್ಥೆ ಈ ತಂತ್ರಜ್ಞಾನದಲ್ಲಿ ಅಳವಡಿಸಿದ್ದು, ಗ್ರಾಮೀಣ ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿಗೊಳಿಸಲಾಗಿದೆ.</p>.<p>Highlights - ಪ್ರತಿ ಬ್ಯಾರನ್ಗೆ 400ರಿಂದ 500 ಯುನಿಟ್ ತಗಲುವ ವೆಚ್ಚ ₹3ರಿಂದ 4ಸಾವಿರ ಮೊಬೈಲ್ ಫೋನ್ ಮೂಲಕ ಶಾಖ ನಿರ್ವಹಣೆ </p>.<p>Quote - ವಿದ್ಯುತ್ ಬ್ಯಾರನ್ ಮೂರು ಫೇಸ್ನಲ್ಲಿ ಬಳಸುವಂತೆ ಅಭಿವೃದ್ಧಿಪಡಿಸಲಾಗಿದೆ. ಮುಂದಿನ ದಿನದಲ್ಲಿ ಸಿಂಗಲ್ ಫೇಸ್ ವಿದ್ಯುತ್ ಬಳಸಿ ಹದಗೊಳಿಸುವ ತಂತ್ರಜ್ಞಾನ ಅಳವಡಿಸುವ ಚಿಂತನೆ ಇದೆ ನಾರಾಯಣ ರೆಡ್ಡಿ ಯುವ ವಿಜ್ಞಾನಿ</p>.<p>Cut-off box - ‘ಆರ್ಥಿಕ ಹೊರೆ ತಗ್ಗಲಿದೆ’ ವಿದ್ಯುತ್ಚಾಲಿತ ತಂಬಾಕು ಹದಗೊಳಿಸುವ ಬ್ಯಾರನ್ ಪರಿಸರ ಪೂರಕವಾಗಿದ್ದು ಆರ್ಥಿಕ ಹೊರೆ ತಗ್ಗಲಿದೆ. ಆರಂಭದ ಬಂಡವಾಳ ₹ 18ರಿಂದ 20 ಲಕ್ಷ ಹೂಡಬೇಕಾಗಿದ್ದು ರೈತರಿಗೆ ಕಷ್ಟ ಸಾಧ್ಯ. ಬ್ಯಾಂಕ್ ಸಾಲ ಸೌಲಭ್ಯ ಮತ್ತು ತಂಬಾಕು ಮಂಡಳಿ ರಿಯಾಯಿತಿ ದರದಲ್ಲಿ ನೀಡಬೇಕು ಎಂದು ತಂಬಾಕು ಬೆಳೆಗಾರರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಮೋದೂರು ಶಿವಣ್ಣ ಹೇಳಿದರು.</p>.<p>Cut-off box - ‘ರಾಸಾಯನಿಕ ಬದಲಾವಣೆ ಕಂಡು ಬಂದಿಲ್ಲ’ ಹದಗೊಳಿಸಿದ ತಂಬಾಕು ಪ್ರಯೋಗಾಲಯಕ್ಕೆ ಕಳುಹಿಸಿ ವೈಜ್ಞಾನಿಕ ಪರೀಕ್ಷೆ ನಡೆಸಿದ್ದು ಸಾಂಪ್ರದಾಯಕ ಪದ್ಧತಿ ಮತ್ತು ವಿದ್ಯುತ್ ಪದ್ಧತಿಯಲ್ಲಿ ಹದಗೊಳಿಸಿದ ತಂಬಾಕಿನಲ್ಲಿ ಯಾವುದೇ ರಾಸಾಯನಿಕ ಬದಲಾವಣೆ ಕಂಡು ಬಂದಿಲ್ಲ ಎಂಬ ವರದಿ ಬಂದಿದೆ. ರೈತರು ಈ ತಂತ್ರಜ್ಞಾನ ಅಳವಡಿಸಿಕೊಳ್ಳಬಹುದಾಗಿದೆ ಎಂದು ಸಿಟಿಆರ್ಐ ವಿಜ್ಞಾನಿ ರಾಮಕೃಷ್ಣನ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>