<p><strong>ಎಚ್.ಡಿ.ಕೋಟೆ:</strong> ಕೇರಳದ ಪುಪ್ಪಳ್ಳಿಯ ಶಾಲೆಯ ಬಳಿ ಇತ್ತೀಚೆಗೆ ಕಾಣಿಸಿಕೊಂಡಿದ್ದ 6 ತಿಂಗಳ ಮರಿ ಆನೆಯು ತಾಲ್ಲೂಕಿನ ವಡಕನಮಾಳದ ದೇವೇಗೌಡ ಎಂಬುವರ ತೋಟದ ಬಳಿ ಪತ್ತೆಯಾಗಿದ್ದು, ಅದನ್ನು ತಾಯಿಯ ಬಳಿ ಸೇರಿಸಲು ಅಲ್ಲಿನ ಅರಣ್ಯಾಧಿಕಾರಿಗಳು ವಿಫಲವಾಗಿ ನದಿಯ ಆಚೆ ದಡದಿಂದ ನಾಗರಹೊಳೆಗೆ ತಂದುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.</p>.<p>ಸದ್ಯ ಸ್ಥಳೀಯರು ಅದನ್ನು ಆರೈಕೆ ಮಾಡಿ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ. ‘ಕೇರಳದಿಂದ ಕರ್ನಾಟಕದ ಅರಣ್ಯ ಪ್ರದೇಶಕ್ಕೆ ಮರಿ ಬಂದಿದ್ದು ಹೇಗೆ’ ಎಂದು ಸ್ಥಳೀಯರಾದ ಗುಂಡತ್ತೂರು ರವಿ ಪ್ರಶ್ನಿಸಿದ್ದಾರೆ.</p>.<p>‘ಕೇರಳ ರಾಜ್ಯದ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆದಿದ್ದು, ಜಂಟಿ ಕಾರ್ಯಾಚರಣೆ ನಡೆಸಿ ಮರಿಯಾನೆಯನ್ನು ತಾಯಿಯ ಬಳಿ ಸೇರಿಸಲು ಕ್ರಮ ವಹಿಸುತ್ತೇವೆ’ ಎಂದು ಎಸಿಎಫ್ ಮಧು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘ಸುಲ್ತಾನ್ ಬತ್ತೇರಿ ಭಾಗದ ಪುಲ್ಪಳ್ಳಿಗೂ ಕರ್ನಾಟಕದ ಡಿ.ಬಿ.ಕುಪ್ಪೆಗೂ ನಡುವೆ ಕಪಿಲಾ ನದಿಯಿದ್ದು, ವಯನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿ ತುಂಬಿ ರಭಸವಾಗಿ ಹರಿಯುತ್ತಿದೆ. ಈ ಸಮಯದಲ್ಲಿ ಮರಿಯು ನದಿಯನ್ನು ದಾಟಿ ಬರಲು ಸಾಧ್ಯವಿಲ್ಲ. ಕೇರಳದವರೇ ಅದನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ ’ ಎಂದು ಡಿ.ಬಿ.ಕುಪ್ಪೆ ಗ್ರಾಮದ ಮುಖಂಡ ಸುಂದರ ಆರೋಪಿಸಿದ್ದಾರೆ.</p>.<div><blockquote>6 ತಿಂಗಳ ಆನೆ ಮರಿ ಕಾಣಿಸಿಕೊಂಡಿದ್ದು ಆರೈಕೆ ಮಾಡುತ್ತಿದ್ದೇವೆ. ತಾಯಿಯ ಮಡಿಲು ಸೇರಿಸುವ ಪ್ರಯತ್ನದಲ್ಲಿದ್ದೇವೆ.</blockquote><span class="attribution"> ಹನುಮಂತರಾಜು ಡಿ.ಬಿ.ಕುಪ್ಪೆ ಆರ್ಎಫ್ಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಎಚ್.ಡಿ.ಕೋಟೆ:</strong> ಕೇರಳದ ಪುಪ್ಪಳ್ಳಿಯ ಶಾಲೆಯ ಬಳಿ ಇತ್ತೀಚೆಗೆ ಕಾಣಿಸಿಕೊಂಡಿದ್ದ 6 ತಿಂಗಳ ಮರಿ ಆನೆಯು ತಾಲ್ಲೂಕಿನ ವಡಕನಮಾಳದ ದೇವೇಗೌಡ ಎಂಬುವರ ತೋಟದ ಬಳಿ ಪತ್ತೆಯಾಗಿದ್ದು, ಅದನ್ನು ತಾಯಿಯ ಬಳಿ ಸೇರಿಸಲು ಅಲ್ಲಿನ ಅರಣ್ಯಾಧಿಕಾರಿಗಳು ವಿಫಲವಾಗಿ ನದಿಯ ಆಚೆ ದಡದಿಂದ ನಾಗರಹೊಳೆಗೆ ತಂದುಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.</p>.<p>ಸದ್ಯ ಸ್ಥಳೀಯರು ಅದನ್ನು ಆರೈಕೆ ಮಾಡಿ ಅರಣ್ಯಾಧಿಕಾರಿಗಳ ವಶಕ್ಕೆ ನೀಡಿದ್ದಾರೆ. ‘ಕೇರಳದಿಂದ ಕರ್ನಾಟಕದ ಅರಣ್ಯ ಪ್ರದೇಶಕ್ಕೆ ಮರಿ ಬಂದಿದ್ದು ಹೇಗೆ’ ಎಂದು ಸ್ಥಳೀಯರಾದ ಗುಂಡತ್ತೂರು ರವಿ ಪ್ರಶ್ನಿಸಿದ್ದಾರೆ.</p>.<p>‘ಕೇರಳ ರಾಜ್ಯದ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ನಡೆದಿದ್ದು, ಜಂಟಿ ಕಾರ್ಯಾಚರಣೆ ನಡೆಸಿ ಮರಿಯಾನೆಯನ್ನು ತಾಯಿಯ ಬಳಿ ಸೇರಿಸಲು ಕ್ರಮ ವಹಿಸುತ್ತೇವೆ’ ಎಂದು ಎಸಿಎಫ್ ಮಧು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<p>‘ಸುಲ್ತಾನ್ ಬತ್ತೇರಿ ಭಾಗದ ಪುಲ್ಪಳ್ಳಿಗೂ ಕರ್ನಾಟಕದ ಡಿ.ಬಿ.ಕುಪ್ಪೆಗೂ ನಡುವೆ ಕಪಿಲಾ ನದಿಯಿದ್ದು, ವಯನಾಡು ಭಾಗದಲ್ಲಿ ಮಳೆಯಾಗುತ್ತಿರುವುದರಿಂದ ನದಿ ತುಂಬಿ ರಭಸವಾಗಿ ಹರಿಯುತ್ತಿದೆ. ಈ ಸಮಯದಲ್ಲಿ ಮರಿಯು ನದಿಯನ್ನು ದಾಟಿ ಬರಲು ಸಾಧ್ಯವಿಲ್ಲ. ಕೇರಳದವರೇ ಅದನ್ನು ಇಲ್ಲಿಗೆ ತಂದು ಬಿಟ್ಟಿದ್ದಾರೆ ’ ಎಂದು ಡಿ.ಬಿ.ಕುಪ್ಪೆ ಗ್ರಾಮದ ಮುಖಂಡ ಸುಂದರ ಆರೋಪಿಸಿದ್ದಾರೆ.</p>.<div><blockquote>6 ತಿಂಗಳ ಆನೆ ಮರಿ ಕಾಣಿಸಿಕೊಂಡಿದ್ದು ಆರೈಕೆ ಮಾಡುತ್ತಿದ್ದೇವೆ. ತಾಯಿಯ ಮಡಿಲು ಸೇರಿಸುವ ಪ್ರಯತ್ನದಲ್ಲಿದ್ದೇವೆ.</blockquote><span class="attribution"> ಹನುಮಂತರಾಜು ಡಿ.ಬಿ.ಕುಪ್ಪೆ ಆರ್ಎಫ್ಒ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>