ಕಾರ್ಮಿಕರಲ್ಲಿ 10 ಪುರುಷರು, 9 ಮಹಿಳೆಯರಲ್ಲದೇ ಮಕ್ಕಳೂ ಇದ್ದಾರೆ. ಪಂಚವಳ್ಳಿ ಸಮೀಪದ ಮುದ್ದನಹಳ್ಳಿ ಗ್ರಾಮದಲ್ಲಿ ಕಾರ್ಮಿಕರಿಗೆ ಎರಡು ಬಾಡಿಗೆ ಮನೆ ಮಾಡಿಕೊಟ್ಟಿದ್ದ ರಿಯಾಜ್, ಪುರುಷರಿಗೆ ₹ 500, ಮಹಿಳೆಯರಿಗೆ ₹ 400 ಕೂಲಿ ನೀಡುವುದಾಗಿ ಭರವಸೆ ನೀಡಿದ್ದ. ಆದರೆ 2 ತಿಂಗಳಿನಿಂದ ಸರಿಯಾಗಿ ವೇತನ ನೀಡದೆ ಸತಾಯಿಸಿದ್ದ ಆತ, ಗುಜರಿಯನ್ನು ಮಾರಾಟ ಮಾಡಿ ಹಣ ನೀಡುವುದಾಗಿ ತಿಳಿಸಿ ಜುಲೈ 6ರಂದು ತೆರಳಿದವನು ವಾರವಾದರೂ ಬರಲಿಲ್ಲ.