ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮೈಸೂರು: ಮುಂಗಾರಿನತ್ತ ಚಿತ್ತ, ಸಿದ್ಧತೆಯತ್ತ ರೈತ

Published : 20 ಮೇ 2024, 7:12 IST
Last Updated : 20 ಮೇ 2024, 7:12 IST
ಫಾಲೋ ಮಾಡಿ
Comments
ಜಯಪುರದ ರೈತ ಸಂಪರ್ಕ ಕೇಂದ್ರದಲ್ಲಿ ಅಲಸಂದೆ ಹೆಸರು ಬಿತ್ತನೆಬೀಜ ದಾಸ್ತಾನು ಮಾಡಲಾಗಿದೆ
ಜಯಪುರದ ರೈತ ಸಂಪರ್ಕ ಕೇಂದ್ರದಲ್ಲಿ ಅಲಸಂದೆ ಹೆಸರು ಬಿತ್ತನೆಬೀಜ ದಾಸ್ತಾನು ಮಾಡಲಾಗಿದೆ
ಹುಣಸೂರು ತಾಲ್ಲೂಕಿನಲ್ಲಿ ತಂಬಾಕು ನಾಟಿ ಚಟುವಟಿಕೆಯಲ್ಲಿ ತೊಡಗಿರುವ ಕೃಷಿಕರು
ಹುಣಸೂರು ತಾಲ್ಲೂಕಿನಲ್ಲಿ ತಂಬಾಕು ನಾಟಿ ಚಟುವಟಿಕೆಯಲ್ಲಿ ತೊಡಗಿರುವ ಕೃಷಿಕರು
ತಂಬಾಕು ಶುಂಠಿ ‘ಸಿಂಹಪಾಲು’!
ಹುಣಸೂರು: ತಾಲ್ಲೂಕಿನಲ್ಲಿ 40ಸಾವಿರ ಹೆಕ್ಟೇರ್ ಭೂಮಿ ಕೃಷಿ ಬೇಸಾಯಕ್ಕೆ ಯೋಗ್ಯವಿದ್ದು ಈ ಪೈಕಿ ಸಿಂಹಪಾಲನ್ನು ವಾಣಿಜ್ಯ ಬೆಳೆ ತಂಬಾಕು ಮತ್ತು ಶುಂಠಿ ಪಡೆದುಕೊಂಡಿವೆ. ಒಂದು ವಾರದಿಂದ ಬಿದ್ದ ಮಳೆಗೆ ತಂಬಾಕು ಬೇಸಾಯ ಚುರುಕಾಗಿದೆ. ಪರ್ಯಾಯ ವಾಣಿಜ್ಯ ಬೆಳೆಯಾಗಿ ಶುಂಠಿ ಬೇಸಾಯ ಅವಲಂಬಿಸಿದ ರೈತರು ಏಪ್ರಿಲ್ ಅಂತ್ಯದಿಂದಲೇ ನಾಟಿ ಕಾರ್ಯ  ಆರಂಭಿಸಿದ್ದಾರೆ. ಈವರೆಗೆ 20ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಕಾರ್ಯ ಮುಗಿದಿದೆ. ವಾಡಿಕೆಯಂತೆ ಮೇ 16ವರಗೆ 65 ಮಿ.ಮೀ. ಮಳೆ ಆಗಬೇಕಿತ್ತು. ವಾಸ್ತವವಾಗಿ 110 ಮಿ.ಮೀ. ಬಿದ್ದಿದೆ. ಹೋದ ವರ್ಷ ಈ ಅವಧಿಯಲ್ಲಿ 149 ಮಿ.ಮೀ. ಸುರಿದಿತ್ತು. ಉತ್ತಮ ಮಳೆಯ ಕಾರಣ ರಾಗಿ ಬೇಸಾಯಕ್ಕೂ ರೈತರು ಸಜ್ಜಗುತ್ತಿದ್ದು ಈ ಸಾಲಿನಲ್ಲಿ 18ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಅಲಸಂದೆ ಹುರುಳಿ ಕಡಲೆ ಉದ್ದು ಹೆಸರು ಅವರೆಯನ್ನು 50ಸಾವಿರ ಎಕರೆ ಪ್ರದೇಶದಲ್ಲಿ ಹಾಕುವ ನಿರೀಕ್ಷೆ ಇದ್ದು ಈಗಾಗಲೇ 4ಸಾವಿರ ಎಕರೆಯಲ್ಲಿ ಬಿತ್ತನೆ ನಡೆದಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅನಿಲ್ ಕುಮಾರ್ ಕೆ.ಎಸ್. ತಿಳಿಸಿದರು. ‘ಕಳೆದ ಸಾಲಿನಲ್ಲಿ ಬೇಸಾಯ ಕೈ ಕಚ್ಚಿತ್ತು. ಈ ಸಾಲಿನಲ್ಲಿ ಪೂರಕವಾಗಿದ್ದು ಖುಷಿಯಿಂದ ಆರಂಭಿಸಿದ್ದೇವೆ. ಇದೇ ವಾತಾವರಣ ಮುಂದುವರಿದರೆ ವಾಣಿಜ್ಯ ಬೆಳೆ ಸೇರಿದಂತೆ ತರಕಾರಿ ಕೈ ಹಿಡಿಯುವ ವಿಶ್ವಾಸವಿದೆ’ ಎಂದು ಅಗ್ರಹಾರ ಗ್ರಾಮದ ರೈತ ರಾಮೇಗೌಡ ಪ್ರತಿಕ್ರಿಯಿಸಿದರು.
ಪಿರಿಯಾಪಟ್ಟಣದಲ್ಲಿ ನೆರವಾದ ‘ದುಪ್ಪಟ್ಟು ಮಳೆ’
ಪಿರಿಯಾಪಟ್ಟಣ: ಮೇ ತಿಂಗಳಿನಲ್ಲಿ ತಾಲ್ಲೂಕಿನಲ್ಲಿ ವಾಡಿಕೆಗಿಂತ ದುಪ್ಪಟ್ಟು ಮಳೆಯಾಗಿದ್ದು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ತಂಬಾಕು ಮತ್ತು ಮುಸುಕಿನ ಜೋಳ ಹಲಸಂದೆ ಬಿತ್ತನೆ ಕಾರ್ಯ ನಡೆಯುತ್ತಿದೆ. ತಂಬಾಕು 28ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಇದೆ. ಈಗಾಗಲೇ ಶೇ. 70ರಷ್ಟು ನಾಟಿ ಕಾರ್ಯ ಮುಗಿದಿದೆ. ಹತ್ತು ಸಾವಿರ ಹೆಕ್ಟೇರ್‌ ಮುಸುಕಿನ ಜೋಳ ಬಿತ್ತನೆ ಗುರಿ ಇದೆ. ತಾಲ್ಲೂಕಿನ 4 ಹೋಬಳಿ ಕೇಂದ್ರಗಳಲ್ಲಿ ಬಿತ್ತನೆ ಬೀಜ ದಾಸ್ತಾನಿದೆ. ಹಸಿರೆಲೆ ಗೊಬ್ಬರ ಸಾಕಷ್ಟು ಲಭ್ಯವಿದೆ. ‘ತಂಬಾಕು ಮಂಡಳಿಯಿಂದ ರಸಗೊಬ್ಬರ ಪೂರೈಕೆ ಆಗುತ್ತಿದ್ದು ಖಾಸಗಿ ಅಂಗಡಿಗಳಲ್ಲೂ ಲಭ್ಯವಿದೆ. ಹೀಗಾಗಿ ಕೊರತೆ ಆಗದು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ತಿಳಿಸಿದರು. ‘ತಡವಾಗಿಯಾದರೂ ಉತ್ತಮ ಮಳೆ ಆಗುತ್ತಿರುವುದು ವರದಾನವಾಗಿದೆ. ಬಿತ್ತನೆ ಮಾಡುತ್ತಿದ್ದೇವೆ. ತಂಬಾಕು ಮತ್ತು ಮುಸುಕಿನಜೋಳವನ್ನು ಉತ್ತಮ ಬೆಲೆಗೆ ಖರೀದಿಸಬೇಕು’ ಎನ್ನುವುದು ರೈತ ಸಣ್ಣತಮ್ಮೇಗೌಡ ಅವರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT