<p><strong>ಹುಣಸೂರು</strong>: ಮುಂಗಾರು ಮಳೆ ಆರ್ಭಟಕ್ಕೆ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆ ದುರಸ್ತಿಗೆ ಸರ್ಕಾರದಿಂದ ನೀಡುವ ಅನುದಾನ ಒಂದು ಗ್ರಾಮಕ್ಕೆ ಸಾಲದಾಗಿದೆ ಎಂದು ಶಾಸಕ ಜಿ.ಡಿ.ಹರೀಶ ಗೌಡ ಹೇಳಿದರು.</p>.<p>ತಾಲ್ಲೂಕಿನ ಹನಗೋಡು ಹೋಬಳಿ ಭಾಗದ ಕಿರಂಗೂರು, ನೇರಳಕುಪ್ಪೆ, ದೊಡ್ಡಹೆಜ್ಜೂರು ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ₹ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.</p>.<p>‘ಮುಂಗಾರಿನಲ್ಲಿ ಹನಗೋಡು ಹೋಬಳಿ ಭಾಗದಲ್ಲಿ ಅತಿಯಾದ ಮಳೆಗೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಶಾಸಕರಿಗೆ ಅಗತ್ಯ ಅನುದಾನ ವಿತರಿಸದೆ ತಾರತಮ್ಯ ಅನುಸರಿಸಿ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ವಿಷಾದಿಸಿದರು.</p>.<p>‘ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಸರ್ಕಾರ ಅನುದಾನ ಕಡಿತಗೊಳಿಸಿ ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ₹ 50 ಕೋಟಿ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಚುನಾವಣೆ ಬಳಿಕ ಅಭಿವೃದ್ಧಿ ದೃಷ್ಟಿಕೋನದಲ್ಲಿ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಆಡಳಿತಾರೂಢ ಸರ್ಕಾರ ಸಮಾನವಾಗಿ ಪರಿಗಣಿಸಿ ಅನುದಾನ ನೀಡುವುದರಿಂದ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದರು.</p>.<p>ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್, ಉಪತಹಶೀಲ್ದಾರ್ ಚೆಲುವರಾಜು, ಗ್ರಾ.ಪಂ. ಸದಸ್ಯ ನಾಣ್ಯಕುಮಾರಿ, ಜಗದೀಶ್. ಚಂದ್ರಶೇಖರ್, ಪ್ರಭಾಕರ್ ಹೆಗಡೆ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಣಾಧಿಕಾರಿ ನಂದೀಶ್, ಸೆಸ್ಕ್ ಅಧಿಕಾರಿ ದಿಲೀಪ್ ಸೇರಿದಂತೆ ಇತರರಿದ್ದರು.</p>.<div><blockquote>ಗ್ರಾಮೀಣ ಭಾಗದಲ್ಲಿನ ಕುಡಿಯುವ ನೀರು ಒಳಗೊಂಡಂತೆ ಪೈಪ್ ಲೈನ್ ವ್ಯವಸ್ಥೆ ಸರಿಪಡಿಸಲು ಅನುದಾನದ ಅಗತ್ಯವಿದೆ. ಈ ಕಾಮಗಾರಿ ನಡೆಸಲು ಜಿ.ಪಂ. ಮತ್ತು ತಾ.ಪಂ.ಗಳಿಂದ ಯಾವುದೇ ಅನುದಾನವಿಲ್ಲವಾಗಿದೆ </blockquote><span class="attribution">ಜಿ.ಡಿ.ಹರೀಶ ಗೌಡ ಶಾಸಕ</span></div>.<p>ಅಭಿವೃದ್ಧಿ ಕಾಮಗಾರಿಗೆ ಏಷ್ಟೆಷ್ಟು ಅನುದಾನ.. ಶಿಂಡೇನಹಳ್ಳಿ ಗ್ರಾಮದ ಮುಖ್ಯ ರಸ್ತೆ ಸಿ.ಸಿ ಮತ್ತು ಚರಂಡಿ ಕಾಮಗಾರಿಗೆ ₹ 75 ಲಕ್ಷ ಅಬ್ಬೂರು ಗ್ರಾಮದ ರಸ್ತೆಗೆ ₹ 30 ಲಕ್ಷ ಕಿರಂಗೂರು ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹ 50 ಲಕ್ಷ ಹರಳಹಳ್ಳಿ ಬೋವಿ ಕಾಲೊನಿ ಅಂಗನವಾಡಿ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ₹20 ಲಕ್ಷ ಶಂಕರಪುರ ಹಾಡಿ ಅಂಗನವಾಡಿ ಕಟ್ಟಡ ಕಾಮಗಾರಿ ₹ 20 ಲಕ್ಷ ಹನಗೋಡು ದೊಡ್ಡಹೆಜ್ಜೂರು ಮಾರ್ಗ ಕೊಣನಹೊಸಹಳ್ಳಿ ಲೋಕೋಪಯೋಗಿ ಇಲಾಕೆ ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ವೀರನಹೊಸಹಳ್ಳಿ ಕೆರೆ ಹಾಡಿಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ₹ 20 ಲಕ್ಷ ನಾಗಾಪುರ 6ನೇ ಬ್ಲಾಕ್ ಅಂಗನವಾಡಿ ಕಟ್ಡಡ ಕಾಮಗಾರಿ ₹20 ಲಕ್ಷದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ಜಿ.ಡಿ.ಹರೀಶ ಗೌಡ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಣಸೂರು</strong>: ಮುಂಗಾರು ಮಳೆ ಆರ್ಭಟಕ್ಕೆ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಈ ರಸ್ತೆ ದುರಸ್ತಿಗೆ ಸರ್ಕಾರದಿಂದ ನೀಡುವ ಅನುದಾನ ಒಂದು ಗ್ರಾಮಕ್ಕೆ ಸಾಲದಾಗಿದೆ ಎಂದು ಶಾಸಕ ಜಿ.ಡಿ.ಹರೀಶ ಗೌಡ ಹೇಳಿದರು.</p>.<p>ತಾಲ್ಲೂಕಿನ ಹನಗೋಡು ಹೋಬಳಿ ಭಾಗದ ಕಿರಂಗೂರು, ನೇರಳಕುಪ್ಪೆ, ದೊಡ್ಡಹೆಜ್ಜೂರು ಪಂಚಾಯಿತಿಗೆ ಸೇರಿದ ಗ್ರಾಮಗಳಲ್ಲಿ ₹ 3 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.</p>.<p>‘ಮುಂಗಾರಿನಲ್ಲಿ ಹನಗೋಡು ಹೋಬಳಿ ಭಾಗದಲ್ಲಿ ಅತಿಯಾದ ಮಳೆಗೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ ಶಾಸಕರಿಗೆ ಅಗತ್ಯ ಅನುದಾನ ವಿತರಿಸದೆ ತಾರತಮ್ಯ ಅನುಸರಿಸಿ ಅಭಿವೃದ್ಧಿ ಮರೀಚಿಕೆಯಾಗಿದೆ’ ಎಂದು ವಿಷಾದಿಸಿದರು.</p>.<p>‘ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಸರ್ಕಾರ ಅನುದಾನ ಕಡಿತಗೊಳಿಸಿ ಆಡಳಿತ ಪಕ್ಷದ ಶಾಸಕರ ಕ್ಷೇತ್ರಕ್ಕೆ ₹ 50 ಕೋಟಿ ನೀಡುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಚುನಾವಣೆ ಬಳಿಕ ಅಭಿವೃದ್ಧಿ ದೃಷ್ಟಿಕೋನದಲ್ಲಿ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಆಡಳಿತಾರೂಢ ಸರ್ಕಾರ ಸಮಾನವಾಗಿ ಪರಿಗಣಿಸಿ ಅನುದಾನ ನೀಡುವುದರಿಂದ ರಾಜ್ಯದ ಅಭಿವೃದ್ಧಿಗೆ ಪೂರಕವಾಗಲಿದೆ’ ಎಂದರು.</p>.<p>ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಸುಭಾಷ್, ಉಪತಹಶೀಲ್ದಾರ್ ಚೆಲುವರಾಜು, ಗ್ರಾ.ಪಂ. ಸದಸ್ಯ ನಾಣ್ಯಕುಮಾರಿ, ಜಗದೀಶ್. ಚಂದ್ರಶೇಖರ್, ಪ್ರಭಾಕರ್ ಹೆಗಡೆ, ಕಂದಾಯ ಇಲಾಖೆ ರಾಜಸ್ವ ನಿರೀಕ್ಷಣಾಧಿಕಾರಿ ನಂದೀಶ್, ಸೆಸ್ಕ್ ಅಧಿಕಾರಿ ದಿಲೀಪ್ ಸೇರಿದಂತೆ ಇತರರಿದ್ದರು.</p>.<div><blockquote>ಗ್ರಾಮೀಣ ಭಾಗದಲ್ಲಿನ ಕುಡಿಯುವ ನೀರು ಒಳಗೊಂಡಂತೆ ಪೈಪ್ ಲೈನ್ ವ್ಯವಸ್ಥೆ ಸರಿಪಡಿಸಲು ಅನುದಾನದ ಅಗತ್ಯವಿದೆ. ಈ ಕಾಮಗಾರಿ ನಡೆಸಲು ಜಿ.ಪಂ. ಮತ್ತು ತಾ.ಪಂ.ಗಳಿಂದ ಯಾವುದೇ ಅನುದಾನವಿಲ್ಲವಾಗಿದೆ </blockquote><span class="attribution">ಜಿ.ಡಿ.ಹರೀಶ ಗೌಡ ಶಾಸಕ</span></div>.<p>ಅಭಿವೃದ್ಧಿ ಕಾಮಗಾರಿಗೆ ಏಷ್ಟೆಷ್ಟು ಅನುದಾನ.. ಶಿಂಡೇನಹಳ್ಳಿ ಗ್ರಾಮದ ಮುಖ್ಯ ರಸ್ತೆ ಸಿ.ಸಿ ಮತ್ತು ಚರಂಡಿ ಕಾಮಗಾರಿಗೆ ₹ 75 ಲಕ್ಷ ಅಬ್ಬೂರು ಗ್ರಾಮದ ರಸ್ತೆಗೆ ₹ 30 ಲಕ್ಷ ಕಿರಂಗೂರು ರಸ್ತೆ ಮತ್ತು ಚರಂಡಿ ಕಾಮಗಾರಿಗೆ ₹ 50 ಲಕ್ಷ ಹರಳಹಳ್ಳಿ ಬೋವಿ ಕಾಲೊನಿ ಅಂಗನವಾಡಿ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ₹20 ಲಕ್ಷ ಶಂಕರಪುರ ಹಾಡಿ ಅಂಗನವಾಡಿ ಕಟ್ಟಡ ಕಾಮಗಾರಿ ₹ 20 ಲಕ್ಷ ಹನಗೋಡು ದೊಡ್ಡಹೆಜ್ಜೂರು ಮಾರ್ಗ ಕೊಣನಹೊಸಹಳ್ಳಿ ಲೋಕೋಪಯೋಗಿ ಇಲಾಕೆ ರಸ್ತೆ ಅಭಿವೃದ್ಧಿಗೆ ₹ 1 ಕೋಟಿ ವೀರನಹೊಸಹಳ್ಳಿ ಕೆರೆ ಹಾಡಿಯಲ್ಲಿ ಅಂಗನವಾಡಿ ಕಟ್ಟಡ ಕಾಮಗಾರಿಗೆ ₹ 20 ಲಕ್ಷ ನಾಗಾಪುರ 6ನೇ ಬ್ಲಾಕ್ ಅಂಗನವಾಡಿ ಕಟ್ಡಡ ಕಾಮಗಾರಿ ₹20 ಲಕ್ಷದಲ್ಲಿ ನಿರ್ಮಾಣಗೊಳ್ಳಲಿದೆ ಎಂದು ಶಾಸಕ ಜಿ.ಡಿ.ಹರೀಶ ಗೌಡ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>