<p><strong>ಮೈಸೂರು:</strong> ‘ಸಂಶೋಧನೆ ಎಂದರೆ ಈಗಾಗಲೇ ಮಾಡಿರುವುದನ್ನೇ ಯಥಾವತ್ತಾಗಿ ನಕಲಿಸುವುದಲ್ಲ. ಸ್ವಂತಿಕೆ ತೋರುವ, ವಿಸ್ತರಿಸುವ, ವಿಶ್ಲೇಷಿಸುವ ಹಾಗೂ ಹೊಸ ಚಿಂತನೆಗಳನ್ನು ಬೆಳೆಸುವುದಾಗಿದೆ’ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಪ್ರತಿಪಾದಿಸಿದರು. </p>.<p>ನಗರದ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಸಂಶೋಧನೆ ಮತ್ತು ಪ್ರಕಟಣೆ ಮೌಲ್ಯಗಳು’ ಕುರಿತ 6 ದಿನಗಳ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ‘ಗುಣಮಟ್ಟದ ಸಂಶೋಧನೆಯು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ’ ಎಂದರು. </p>.<p>‘ನಾವು ಪಿಎಚ್ಡಿ ಸಂಶೋಧನೆಗಳನ್ನು ಮಾಡುವಾಗ ಬರೆದದ್ದು ಸರಿಯಿಲ್ಲದಿದ್ದರೆ, ಕಾಗದಗಳನ್ನು ಮಾರ್ಗದರ್ಶಕರು ತೂರುತ್ತಿದ್ದರು. ಈಗಿನ ಸಂಶೋಧನಾ ವಿದ್ಯಾರ್ಥಿಗಳು ಗೈಡ್ಗಳ ಮೇಲೆ ಬೀಳುತ್ತಿದ್ದಾರೆ. ಅಗತ್ಯ ಸಮಯ, ತಾಳ್ಮೆಯನ್ನು ಗೈಡ್ಗಳಿಗೂ ಕೊಡಬೇಕು. ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು. </p>.<p>‘ಸಂಶೋಧನೆ ಮಾಡುತ್ತೇವೆಂದು ತೊಡಗಿಸಿಕೊಂಡ ಮೇಲೆ ಗೈಡ್ ಮಾತನ್ನು ಕೇಳುತ್ತೇವೆಂಬ ಬದ್ಧತೆ ಪ್ರದರ್ಶಿಸಬೇಕು. ಗಂಭೀರತೆ ಇರಬೇಕು. ಗುಣಮಟ್ಟತೆ ಬರಬೇಕೆಂದರೆ ಸಾಕಷ್ಟು ತಿದ್ದುಪಡಿಗಳು ಆಗಲೇಬೇಕು. ಪ್ರಯತ್ನ ನಿಲ್ಲಿಸಬಾರದು’ ಎಂದರು. </p>.<p>‘ಬಹುಶಿಸ್ತೀಯ ಅಧ್ಯಯನ ಕ್ರಮವೀಗ ಬಂದಿದೆ. ಮೊದಲೆಲ್ಲ ಒಂದೇ ವಿಷಯದ ಬಗ್ಗೆ ಮೂರ್ನಾಲ್ಕು ಪತ್ರಿಕೆಗಳು ಇರುತ್ತಿದ್ದವು. ಕಷ್ಟದ ಪಾಠಗಳನ್ನು ತೆಗೆದು ಬಿಡುವ ಕೆಲಸವನ್ನು ಬೋಧಕರಾದವರು ಮಾಡಬಾರದು. ಸಾಮರ್ಥ್ಯ ಹೆಚ್ಚಿಸುವ ಪಠ್ಯಕ್ರಮವನ್ನು ಬದ್ಧತೆಯಿಂದ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು. </p>.<p>‘ಜ್ಞಾನ, ಅರಿವಿನ ಪರಿಷ್ಕರಣೆಯು ನಿರಂತರವಾಗಿ ನಡೆಯುತ್ತದೆ. ತರಗತಿಗಳನ್ನು ತಪ್ಪಿಸಿಕೊಳ್ಳಬಾರದು. ಉತ್ತಮ ಅಧ್ಯಾಪಕರಾಗದೇ ಹೋದರೆ, ಕಲಿಸಿದ ಮಾರ್ಗದರ್ಶಕರನ್ನೇ ಬಯ್ಯುತ್ತಾರೆ. ಕಲಿಕೆ, ಬೋಧನೆಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು’ ಎಂದರು. </p>.<p>‘ಭಾಷಾ ಪ್ರೌಢಿಮೆ ಬೆಳೆಸಿಕೊಳ್ಳುವತ್ತ ಎಲ್ಲ ಮಾನವಿಕ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಶ್ರಮಿಸಬೇಕು. ಸಂವಹನ ಕೌಶಲ ಬೆಳೆಸಿಕೊಳ್ಳಬೇಕು. ಹೊಸ ತಂತ್ರಜ್ಞಾನಗಳ ಅರಿವು ಪಡೆಯಬೇಕು’ ಎಂದು ಸಲಹೆ ನೀಡಿದರು. </p>.<p>ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ರವಿಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್.ಆನಂದಕುಮಾರ್, ಅಧ್ಯಯನ ಕೇಂದ್ರಗಳ ಡೀನ್ ಪ್ರೊ.ಎನ್.ಆರ್.ಚಂದ್ರೇಗೌಡ, ಶೈಕ್ಷಣಿಕ ಡೀನ್ ಪ್ರೊ.ರಾಮನಾಥಂ ನಾಯ್ಡು, ಪಿಎಚ್ಡಿ ಕೋಶದ ವಿಶೇಷಾಧಿಕಾರಿ ಪ್ರೊ.ಟಿ.ಎಸ್.ಹರ್ಷ, ಸಂಯೋಜನಾಧಿಕಾರಿ ಎಚ್.ರಾಜೇಶ್ವರಿ ಪಾಲ್ಗೊಂಡಿದ್ದರು. </p>.<blockquote>ಸಂವಹನ ಕೌಶಲ ಬೆಳೆಸಿಕೊಳ್ಳಿ | ಹೊಸ ತಂತ್ರಜ್ಞಾನ ಅರಿವು ಪಡೆಯಿರಿ | ಬೋಧನೆ, ಕಲಿಕೆಗೆ ನ್ಯಾಯ ಕೊಡಿಸಿ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ‘ಸಂಶೋಧನೆ ಎಂದರೆ ಈಗಾಗಲೇ ಮಾಡಿರುವುದನ್ನೇ ಯಥಾವತ್ತಾಗಿ ನಕಲಿಸುವುದಲ್ಲ. ಸ್ವಂತಿಕೆ ತೋರುವ, ವಿಸ್ತರಿಸುವ, ವಿಶ್ಲೇಷಿಸುವ ಹಾಗೂ ಹೊಸ ಚಿಂತನೆಗಳನ್ನು ಬೆಳೆಸುವುದಾಗಿದೆ’ ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್.ನಿರಂಜನ ಪ್ರತಿಪಾದಿಸಿದರು. </p>.<p>ನಗರದ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ‘ಸಂಶೋಧನೆ ಮತ್ತು ಪ್ರಕಟಣೆ ಮೌಲ್ಯಗಳು’ ಕುರಿತ 6 ದಿನಗಳ ಕಾರ್ಯಾಗಾರಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿ, ‘ಗುಣಮಟ್ಟದ ಸಂಶೋಧನೆಯು ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ’ ಎಂದರು. </p>.<p>‘ನಾವು ಪಿಎಚ್ಡಿ ಸಂಶೋಧನೆಗಳನ್ನು ಮಾಡುವಾಗ ಬರೆದದ್ದು ಸರಿಯಿಲ್ಲದಿದ್ದರೆ, ಕಾಗದಗಳನ್ನು ಮಾರ್ಗದರ್ಶಕರು ತೂರುತ್ತಿದ್ದರು. ಈಗಿನ ಸಂಶೋಧನಾ ವಿದ್ಯಾರ್ಥಿಗಳು ಗೈಡ್ಗಳ ಮೇಲೆ ಬೀಳುತ್ತಿದ್ದಾರೆ. ಅಗತ್ಯ ಸಮಯ, ತಾಳ್ಮೆಯನ್ನು ಗೈಡ್ಗಳಿಗೂ ಕೊಡಬೇಕು. ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ಸಲಹೆ ನೀಡಿದರು. </p>.<p>‘ಸಂಶೋಧನೆ ಮಾಡುತ್ತೇವೆಂದು ತೊಡಗಿಸಿಕೊಂಡ ಮೇಲೆ ಗೈಡ್ ಮಾತನ್ನು ಕೇಳುತ್ತೇವೆಂಬ ಬದ್ಧತೆ ಪ್ರದರ್ಶಿಸಬೇಕು. ಗಂಭೀರತೆ ಇರಬೇಕು. ಗುಣಮಟ್ಟತೆ ಬರಬೇಕೆಂದರೆ ಸಾಕಷ್ಟು ತಿದ್ದುಪಡಿಗಳು ಆಗಲೇಬೇಕು. ಪ್ರಯತ್ನ ನಿಲ್ಲಿಸಬಾರದು’ ಎಂದರು. </p>.<p>‘ಬಹುಶಿಸ್ತೀಯ ಅಧ್ಯಯನ ಕ್ರಮವೀಗ ಬಂದಿದೆ. ಮೊದಲೆಲ್ಲ ಒಂದೇ ವಿಷಯದ ಬಗ್ಗೆ ಮೂರ್ನಾಲ್ಕು ಪತ್ರಿಕೆಗಳು ಇರುತ್ತಿದ್ದವು. ಕಷ್ಟದ ಪಾಠಗಳನ್ನು ತೆಗೆದು ಬಿಡುವ ಕೆಲಸವನ್ನು ಬೋಧಕರಾದವರು ಮಾಡಬಾರದು. ಸಾಮರ್ಥ್ಯ ಹೆಚ್ಚಿಸುವ ಪಠ್ಯಕ್ರಮವನ್ನು ಬದ್ಧತೆಯಿಂದ ಪಾಲಿಸಬೇಕು’ ಎಂದು ಕಿವಿಮಾತು ಹೇಳಿದರು. </p>.<p>‘ಜ್ಞಾನ, ಅರಿವಿನ ಪರಿಷ್ಕರಣೆಯು ನಿರಂತರವಾಗಿ ನಡೆಯುತ್ತದೆ. ತರಗತಿಗಳನ್ನು ತಪ್ಪಿಸಿಕೊಳ್ಳಬಾರದು. ಉತ್ತಮ ಅಧ್ಯಾಪಕರಾಗದೇ ಹೋದರೆ, ಕಲಿಸಿದ ಮಾರ್ಗದರ್ಶಕರನ್ನೇ ಬಯ್ಯುತ್ತಾರೆ. ಕಲಿಕೆ, ಬೋಧನೆಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕು’ ಎಂದರು. </p>.<p>‘ಭಾಷಾ ಪ್ರೌಢಿಮೆ ಬೆಳೆಸಿಕೊಳ್ಳುವತ್ತ ಎಲ್ಲ ಮಾನವಿಕ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಶ್ರಮಿಸಬೇಕು. ಸಂವಹನ ಕೌಶಲ ಬೆಳೆಸಿಕೊಳ್ಳಬೇಕು. ಹೊಸ ತಂತ್ರಜ್ಞಾನಗಳ ಅರಿವು ಪಡೆಯಬೇಕು’ ಎಂದು ಸಲಹೆ ನೀಡಿದರು. </p>.<p>ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಎಸ್.ಕೆ.ರವಿಕುಮಾರ್, ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಸ್.ಆನಂದಕುಮಾರ್, ಅಧ್ಯಯನ ಕೇಂದ್ರಗಳ ಡೀನ್ ಪ್ರೊ.ಎನ್.ಆರ್.ಚಂದ್ರೇಗೌಡ, ಶೈಕ್ಷಣಿಕ ಡೀನ್ ಪ್ರೊ.ರಾಮನಾಥಂ ನಾಯ್ಡು, ಪಿಎಚ್ಡಿ ಕೋಶದ ವಿಶೇಷಾಧಿಕಾರಿ ಪ್ರೊ.ಟಿ.ಎಸ್.ಹರ್ಷ, ಸಂಯೋಜನಾಧಿಕಾರಿ ಎಚ್.ರಾಜೇಶ್ವರಿ ಪಾಲ್ಗೊಂಡಿದ್ದರು. </p>.<blockquote>ಸಂವಹನ ಕೌಶಲ ಬೆಳೆಸಿಕೊಳ್ಳಿ | ಹೊಸ ತಂತ್ರಜ್ಞಾನ ಅರಿವು ಪಡೆಯಿರಿ | ಬೋಧನೆ, ಕಲಿಕೆಗೆ ನ್ಯಾಯ ಕೊಡಿಸಿ</blockquote>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>