<p><strong>ಮೈಸೂರು</strong>: ಜೀವವೈವಿಧ್ಯದ ತಾಣವನ್ನು ಸ್ಮಶಾನವಾಗಿಸಿದ ಕಥೆಯಿದು. ಒಂದು ಕಾಲದಲ್ಲಿ ಗ್ರಾಮದ ಉಸಿರಾಗಿದ್ದ ಕೆರೆಯಲ್ಲಿ ಕಾಣುವುದು ಕಟ್ಟಡ ತ್ಯಾಜ್ಯ. ಕಾಡುಗಳನ್ನು ರಸ್ತೆಗಳು ಸೀಳುವಂತೆಯೇ ಕೆರೆಯ ಜೀವವನ್ನು ಇಲ್ಲಿ ರಸ್ತೆಗಳೇ ಕೊಯ್ದಿವೆ. ಕಲ್ಲು, ಇಟ್ಟಿಗೆ ಸುರಿದು ಉಸಿರುಗಟ್ಟಿಸಿ ಕೊಲ್ಲಲಾಗುತ್ತಿದೆ.</p>.<p>ಹಿನಕಲ್ ಗ್ರಾಮದ ದಕ್ಷಿಣ ಭಾಗದಲ್ಲಿರುವ ‘ಹಿನಕಲ್ ರಾಯನ ಕೆರೆ’ ವಿಜಯನಗರ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಕಟ್ಟಡ ತ್ಯಾಜ್ಯಗಳ ಸುರಿವ ತಾಣವಾಗಿ ಬದಲಾಗಿದೆ. ಪ್ಲಾಸ್ಟಿಕ್, ವೈದ್ಯಕೀಯ, ಮಾಂಸದಂಗಡಿ ತ್ಯಾಜ್ಯ, ಕೊಳಚೆ ನೀರು ಶೇಖರವಾಗುತ್ತಿದೆ. ಇಲ್ಲಿ ಬಂದವರು ಮೂಗು ಮುಚ್ಚಿಕೊಂಡು ಓಡಾಡಬೇಕು.</p>.<p>ಸರ್ಕಾರದ ಭೂ ದಾಖಲೆ ಹಾಗೂ ನಕ್ಷೆಯ ಮಾಹಿತಿ ತೋರುವ ‘ದಿಶಾಂಕ್’ ಆ್ಯಪ್ನಲ್ಲಿ ಕೆರೆಯದ್ದು 5.9 ಎಕರೆ ವಿಸ್ತೀರ್ಣ ಎಂಬ ಉಲ್ಲೇಖವಿದೆ. ‘ನೀಲಿ ಬಣ್ಣ’ದಲ್ಲಿ ಸೂಚಿಸುವುದು ಮಾತ್ರ ಕೆರೆಯು ವಿಸ್ತೀರ್ಣದ ಮೂರು ಪಟ್ಟು. ಯಾರಾದರೂ ಈ ನಕ್ಷೆ ನೋಡಿದರೆ, ಸ್ಥಳಕ್ಕೆ ಭೇಟಿ ನೀಡಿದರೆ ಕೆರೆಯ ಗಡಿ ಎಷ್ಟಿರಬಹುದು ಎಂದು ಅಂದಾಜಾಗುತ್ತದೆ.</p>.<p>ನಿರಂತರ ಮಾನವ ಹಸ್ತಕ್ಷೇಪಕ್ಕೆ ಒಳಗಾಗಿರುವ ಕೆರೆಯು ಕುಗ್ಗುತ್ತಾ ಸಾಗಿದ್ದು, ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಕೆರೆಯ ಒಡಲಿನೊಳಗೆ ರಸ್ತೆಗಳನ್ನು ಮಾಡಿ, ತ್ಯಾಜ್ಯ ಸುರಿಯಲು ಅನುಕೂಲ ಮಾಡಿಕೊಟ್ಟಿರುವುದು ಸ್ಪಷ್ಟ. </p>.<p>ಕೆರೆ ಮಧ್ಯೆ ರಸ್ತೆ, ಕಾಲುವೆ: ‘ಡಿ.ರಂದೀಪ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಸಿಎಸ್ಆರ್ ನಿಧಿಯಡಿ ₹1.38 ಕೋಟಿ ವೆಚ್ಚದಲ್ಲಿ ಉದ್ಯಾನ, ಪಾದಚಾರಿ ಮಾರ್ಗ ಹಾಗೂ ತ್ಯಾಜ್ಯ ತೆರವಿಗೆ ಸೂಚಿಸಿದ್ದರು. ಕೆರೆ ಏರಿ ಬಳಿ ಮಾತ್ರ ನೀರು ನಿಲ್ಲುತ್ತಿದೆ. ರಾಜ ಕಾಲುವೆಯನ್ನು ಕೆರೆಯ ಮಧ್ಯೆಯೇ ಸೀಳಿ ಕಟ್ಟಲಾಗಿದ್ದು, ಕೆರೆಯನ್ನು ಇಲ್ಲವಾಗಿಸುವ ಹುನ್ನಾರ ನಡೆದಿದೆ’ ಎಂದು ಆರೋಪಿಸುತ್ತಾರೆ ಹಿನಕಲ್ ನಿವಾಸಿ ಎಂ.ಆರ್.ಮೋಹನ್.</p>.<p>ರಾಜಕಾಲುವೆಯಲ್ಲಿ ನೀರೆಲ್ಲ ಬೋಗಾದಿ ಕೆರೆಗೆ ನೇರವಾಗಿ ಹೋಗುವುದರಿಂದ ವರ್ಷವೆಲ್ಲ ಒಣಗಿರುತ್ತದೆ. ಕೆರೆಯ ಉತ್ತರ ಭಾಗವು ವಸತೀಕರಣಕ್ಕಾಗಿ ಒತ್ತುವರಿಯಾಗಿದೆ. ಜೀವ ವೈವಿಧ್ಯದ ತಾಣವನ್ನು ಸ್ಮಶಾನವಾಗಿಸುವ ಕಾರ್ಯ ನಡೆಯುತ್ತಲೇ ಇದೆ. ಇನ್ನಾದರೂ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತುಕೊಂಡು ಮುಂದಿನ ಪೀಳಿಗೆಗೆ ಉಳಿಸಬೇಕೆಂಬುದು ಪರಿಸರ ಪ್ರಿಯರ ಒತ್ತಾಯ.</p>.<p>ಸರ್ವೆ ನಂ 282, 306, 100ರಲ್ಲಿ ಕೆರೆಯ ನೀಲಿ ಬಣ್ಣ ಕಾಣುತ್ತದೆ. 306ರ ಸ್ವಲ್ಪ ಭಾಗವನ್ನು ಗ್ರಾಮಸ್ಥರ ಸ್ಮಶಾನಕ್ಕೆ ಮುಡಾ ಬಿಟ್ಟುಕೊಟ್ಟಿದೆ. ಪಾಳು ಭೂಮಿಯಾಗಿರುವ ಭಾಗವನ್ನು ಸೇರಿಸಿ ಪುನರುಜ್ಜೀವನಗೊಳಿಸಿದರೆ, ಹಸಿರು– ನೀಲಿ ವಲಯ ನಗರಕ್ಕೆ ಸಿಗಲಿದೆ. ಇಲ್ಲದಿದ್ದರೆ ಬೆಂಗಳೂರಿನಂತಾಗಲಿದೆ.</p>.<p><strong>‘ಜೀವವೈವಿಧ್ಯ ಉಳಿಸುವ ತುರ್ತು’</strong></p><p> ‘ಕುಪ್ಪಯ್ಯನ ಕೆರೆ ರಾಯನಕೆರೆ ದಿವಾನರ ಕೆರೆ ಎಂಬ ವಿವಿಧ ಹೆಸರುಗಳಿಂದ ಹಿನಕಲ್ ಕೆರೆಯನ್ನು ಕರೆಯಲಾಗುತ್ತದೆ. ಕೆರೆಯ ನೀರು ನಿಲ್ಲದಂತೆ ಮಾಡಿ ಒತ್ತುವರಿ ಮಾಡಲಾಗುತ್ತಿದೆ’ ಎಂದು ಜಲತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. </p><p>‘25 ವರ್ಷದ ಹಿಂದೆ ಕೆರೆಯು ತುಂಬಿತ್ತು. ಇದೀಗ ಅಲ್ಲಿ ನೀರು ನಿಲ್ಲುತ್ತಿಲ್ಲ. ಶೆಡ್ಗಳನ್ನು ನಿರ್ಮಿಸಲಾಗಿದೆ. ದೇವರಕರೆಯಂತೆಯೇ ಈ ಕೆರೆಯನ್ನೂ ಉಳಿಸಿಕೊಳ್ಳಬಹುದು. ವಲಸೆ ಹಕ್ಕಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಅವೀಗ ಕಡಿಮೆಯಾಗುತ್ತಿವೆ. ಕೂಡಲೇ ಆಡಳಿತ ವರ್ಗ ಎಚ್ಚೆತ್ತುಕೊಂಡು ಉಳಿಸಿಕೊಳ್ಳಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಜೀವವೈವಿಧ್ಯದ ತಾಣವನ್ನು ಸ್ಮಶಾನವಾಗಿಸಿದ ಕಥೆಯಿದು. ಒಂದು ಕಾಲದಲ್ಲಿ ಗ್ರಾಮದ ಉಸಿರಾಗಿದ್ದ ಕೆರೆಯಲ್ಲಿ ಕಾಣುವುದು ಕಟ್ಟಡ ತ್ಯಾಜ್ಯ. ಕಾಡುಗಳನ್ನು ರಸ್ತೆಗಳು ಸೀಳುವಂತೆಯೇ ಕೆರೆಯ ಜೀವವನ್ನು ಇಲ್ಲಿ ರಸ್ತೆಗಳೇ ಕೊಯ್ದಿವೆ. ಕಲ್ಲು, ಇಟ್ಟಿಗೆ ಸುರಿದು ಉಸಿರುಗಟ್ಟಿಸಿ ಕೊಲ್ಲಲಾಗುತ್ತಿದೆ.</p>.<p>ಹಿನಕಲ್ ಗ್ರಾಮದ ದಕ್ಷಿಣ ಭಾಗದಲ್ಲಿರುವ ‘ಹಿನಕಲ್ ರಾಯನ ಕೆರೆ’ ವಿಜಯನಗರ ಸೇರಿದಂತೆ ಸುತ್ತಮುತ್ತಲ ಬಡಾವಣೆಗಳ ಕಟ್ಟಡ ತ್ಯಾಜ್ಯಗಳ ಸುರಿವ ತಾಣವಾಗಿ ಬದಲಾಗಿದೆ. ಪ್ಲಾಸ್ಟಿಕ್, ವೈದ್ಯಕೀಯ, ಮಾಂಸದಂಗಡಿ ತ್ಯಾಜ್ಯ, ಕೊಳಚೆ ನೀರು ಶೇಖರವಾಗುತ್ತಿದೆ. ಇಲ್ಲಿ ಬಂದವರು ಮೂಗು ಮುಚ್ಚಿಕೊಂಡು ಓಡಾಡಬೇಕು.</p>.<p>ಸರ್ಕಾರದ ಭೂ ದಾಖಲೆ ಹಾಗೂ ನಕ್ಷೆಯ ಮಾಹಿತಿ ತೋರುವ ‘ದಿಶಾಂಕ್’ ಆ್ಯಪ್ನಲ್ಲಿ ಕೆರೆಯದ್ದು 5.9 ಎಕರೆ ವಿಸ್ತೀರ್ಣ ಎಂಬ ಉಲ್ಲೇಖವಿದೆ. ‘ನೀಲಿ ಬಣ್ಣ’ದಲ್ಲಿ ಸೂಚಿಸುವುದು ಮಾತ್ರ ಕೆರೆಯು ವಿಸ್ತೀರ್ಣದ ಮೂರು ಪಟ್ಟು. ಯಾರಾದರೂ ಈ ನಕ್ಷೆ ನೋಡಿದರೆ, ಸ್ಥಳಕ್ಕೆ ಭೇಟಿ ನೀಡಿದರೆ ಕೆರೆಯ ಗಡಿ ಎಷ್ಟಿರಬಹುದು ಎಂದು ಅಂದಾಜಾಗುತ್ತದೆ.</p>.<p>ನಿರಂತರ ಮಾನವ ಹಸ್ತಕ್ಷೇಪಕ್ಕೆ ಒಳಗಾಗಿರುವ ಕೆರೆಯು ಕುಗ್ಗುತ್ತಾ ಸಾಗಿದ್ದು, ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಎಂಡಿಎ) ಕೆರೆಯ ಒಡಲಿನೊಳಗೆ ರಸ್ತೆಗಳನ್ನು ಮಾಡಿ, ತ್ಯಾಜ್ಯ ಸುರಿಯಲು ಅನುಕೂಲ ಮಾಡಿಕೊಟ್ಟಿರುವುದು ಸ್ಪಷ್ಟ. </p>.<p>ಕೆರೆ ಮಧ್ಯೆ ರಸ್ತೆ, ಕಾಲುವೆ: ‘ಡಿ.ರಂದೀಪ್ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಸಿಎಸ್ಆರ್ ನಿಧಿಯಡಿ ₹1.38 ಕೋಟಿ ವೆಚ್ಚದಲ್ಲಿ ಉದ್ಯಾನ, ಪಾದಚಾರಿ ಮಾರ್ಗ ಹಾಗೂ ತ್ಯಾಜ್ಯ ತೆರವಿಗೆ ಸೂಚಿಸಿದ್ದರು. ಕೆರೆ ಏರಿ ಬಳಿ ಮಾತ್ರ ನೀರು ನಿಲ್ಲುತ್ತಿದೆ. ರಾಜ ಕಾಲುವೆಯನ್ನು ಕೆರೆಯ ಮಧ್ಯೆಯೇ ಸೀಳಿ ಕಟ್ಟಲಾಗಿದ್ದು, ಕೆರೆಯನ್ನು ಇಲ್ಲವಾಗಿಸುವ ಹುನ್ನಾರ ನಡೆದಿದೆ’ ಎಂದು ಆರೋಪಿಸುತ್ತಾರೆ ಹಿನಕಲ್ ನಿವಾಸಿ ಎಂ.ಆರ್.ಮೋಹನ್.</p>.<p>ರಾಜಕಾಲುವೆಯಲ್ಲಿ ನೀರೆಲ್ಲ ಬೋಗಾದಿ ಕೆರೆಗೆ ನೇರವಾಗಿ ಹೋಗುವುದರಿಂದ ವರ್ಷವೆಲ್ಲ ಒಣಗಿರುತ್ತದೆ. ಕೆರೆಯ ಉತ್ತರ ಭಾಗವು ವಸತೀಕರಣಕ್ಕಾಗಿ ಒತ್ತುವರಿಯಾಗಿದೆ. ಜೀವ ವೈವಿಧ್ಯದ ತಾಣವನ್ನು ಸ್ಮಶಾನವಾಗಿಸುವ ಕಾರ್ಯ ನಡೆಯುತ್ತಲೇ ಇದೆ. ಇನ್ನಾದರೂ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತುಕೊಂಡು ಮುಂದಿನ ಪೀಳಿಗೆಗೆ ಉಳಿಸಬೇಕೆಂಬುದು ಪರಿಸರ ಪ್ರಿಯರ ಒತ್ತಾಯ.</p>.<p>ಸರ್ವೆ ನಂ 282, 306, 100ರಲ್ಲಿ ಕೆರೆಯ ನೀಲಿ ಬಣ್ಣ ಕಾಣುತ್ತದೆ. 306ರ ಸ್ವಲ್ಪ ಭಾಗವನ್ನು ಗ್ರಾಮಸ್ಥರ ಸ್ಮಶಾನಕ್ಕೆ ಮುಡಾ ಬಿಟ್ಟುಕೊಟ್ಟಿದೆ. ಪಾಳು ಭೂಮಿಯಾಗಿರುವ ಭಾಗವನ್ನು ಸೇರಿಸಿ ಪುನರುಜ್ಜೀವನಗೊಳಿಸಿದರೆ, ಹಸಿರು– ನೀಲಿ ವಲಯ ನಗರಕ್ಕೆ ಸಿಗಲಿದೆ. ಇಲ್ಲದಿದ್ದರೆ ಬೆಂಗಳೂರಿನಂತಾಗಲಿದೆ.</p>.<p><strong>‘ಜೀವವೈವಿಧ್ಯ ಉಳಿಸುವ ತುರ್ತು’</strong></p><p> ‘ಕುಪ್ಪಯ್ಯನ ಕೆರೆ ರಾಯನಕೆರೆ ದಿವಾನರ ಕೆರೆ ಎಂಬ ವಿವಿಧ ಹೆಸರುಗಳಿಂದ ಹಿನಕಲ್ ಕೆರೆಯನ್ನು ಕರೆಯಲಾಗುತ್ತದೆ. ಕೆರೆಯ ನೀರು ನಿಲ್ಲದಂತೆ ಮಾಡಿ ಒತ್ತುವರಿ ಮಾಡಲಾಗುತ್ತಿದೆ’ ಎಂದು ಜಲತಜ್ಞ ಯು.ಎನ್.ರವಿಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು. </p><p>‘25 ವರ್ಷದ ಹಿಂದೆ ಕೆರೆಯು ತುಂಬಿತ್ತು. ಇದೀಗ ಅಲ್ಲಿ ನೀರು ನಿಲ್ಲುತ್ತಿಲ್ಲ. ಶೆಡ್ಗಳನ್ನು ನಿರ್ಮಿಸಲಾಗಿದೆ. ದೇವರಕರೆಯಂತೆಯೇ ಈ ಕೆರೆಯನ್ನೂ ಉಳಿಸಿಕೊಳ್ಳಬಹುದು. ವಲಸೆ ಹಕ್ಕಿಗಳು ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದವು. ಅವೀಗ ಕಡಿಮೆಯಾಗುತ್ತಿವೆ. ಕೂಡಲೇ ಆಡಳಿತ ವರ್ಗ ಎಚ್ಚೆತ್ತುಕೊಂಡು ಉಳಿಸಿಕೊಳ್ಳಬೇಕು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>