<p><strong>ತಿ.ನರಸೀಪುರ:</strong> ತಾಲ್ಲೂಕಿನ ಕಳ್ಳಿಪುರದ ಪಟ್ಟದ ಮಠದ ಬಸವ ಗೋಪುರವನ್ನು ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿದ ಅವರು, ‘ಜನರಲ್ಲಿ ಭಕ್ತಿ ಭಾವಗಳಿರಬೇಕು. ಮನಸ್ಸಿನಲ್ಲಿ ಧಾರ್ಮಿಕತೆ ಚಿಂತನೆಗಳು ಹುಟ್ಟಬೇಕು. ಆಗ ಮಾತ್ರ ಶಾಂತಿಯುತ ಬದುಕಿಗೆ ದಾರಿದೀಪವಾಗುತ್ತದೆ. ಊರಿಗೊಂದು ಶಿವ ಮಂದಿರ, ಮಠ ಇದ್ದರೆ ಧಾರ್ಮಿಕತೆ ಹಾಗೂ ಜ್ಞಾನಾರ್ಜನೆ ಹೆಚ್ಚಾಗುತ್ತದೆ’ ಎಂದು ಹೇಳಿದರು.</p>.<p>ಕಳ್ಳಿಪುರ ಪಟ್ಟದ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಡಿದ ₹5 ಲಕ್ಷ ಸಹಾಯಧನದಿಂದ ಗೋಪುರ ನಿರ್ಮಾಣವಾಗಿದೆ. ಹಲವರು ಶ್ರೀಮಠದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯ’ ಎಂದರು.</p>.<p>ಎಂ.ಎಲ್. ಹುಂಡಿ ವಿರಕ್ತ ಮಠಾಧೀಶರಾದ ಗೌರಿಶಂಕರ ಸ್ವಾಮೀಜಿ, ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಚಿದರವಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಿಲಿಗೆರೆಹುಂಡಿ ಮಠದ ಸ್ವಾಮೀಜಿ, ಸರಗೂರು ಮಠಾಧ್ಯಕ್ಷ ಬಸವರಾಜ ಸ್ವಾಮೀಜಿ, ಮುಖಂಡರಾದ ಗೌಡ್ರು ಶಿವಮಲ್ಲಪ್ಪ, ಕುರಿ ಮಹದೇವಪ್ಪ, ಕುಮಾರ, ಕಳ್ಳಿಪುರ ಮಹಾದೇವಸ್ವಾಮಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿ.ನರಸೀಪುರ:</strong> ತಾಲ್ಲೂಕಿನ ಕಳ್ಳಿಪುರದ ಪಟ್ಟದ ಮಠದ ಬಸವ ಗೋಪುರವನ್ನು ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿದ ಅವರು, ‘ಜನರಲ್ಲಿ ಭಕ್ತಿ ಭಾವಗಳಿರಬೇಕು. ಮನಸ್ಸಿನಲ್ಲಿ ಧಾರ್ಮಿಕತೆ ಚಿಂತನೆಗಳು ಹುಟ್ಟಬೇಕು. ಆಗ ಮಾತ್ರ ಶಾಂತಿಯುತ ಬದುಕಿಗೆ ದಾರಿದೀಪವಾಗುತ್ತದೆ. ಊರಿಗೊಂದು ಶಿವ ಮಂದಿರ, ಮಠ ಇದ್ದರೆ ಧಾರ್ಮಿಕತೆ ಹಾಗೂ ಜ್ಞಾನಾರ್ಜನೆ ಹೆಚ್ಚಾಗುತ್ತದೆ’ ಎಂದು ಹೇಳಿದರು.</p>.<p>ಕಳ್ಳಿಪುರ ಪಟ್ಟದ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ ಮಾತನಾಡಿ, ‘ಗ್ರಾಮ ವಿದ್ಯೋದಯ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನೀಡಿದ ₹5 ಲಕ್ಷ ಸಹಾಯಧನದಿಂದ ಗೋಪುರ ನಿರ್ಮಾಣವಾಗಿದೆ. ಹಲವರು ಶ್ರೀಮಠದ ಅಭಿವೃದ್ಧಿಗೆ ನೀಡಿದ ಕೊಡುಗೆ ಸ್ಮರಣೀಯ’ ಎಂದರು.</p>.<p>ಎಂ.ಎಲ್. ಹುಂಡಿ ವಿರಕ್ತ ಮಠಾಧೀಶರಾದ ಗೌರಿಶಂಕರ ಸ್ವಾಮೀಜಿ, ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ, ಚಿದರವಳ್ಳಿ ಪಾರಮಾರ್ಥ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಬಿಲಿಗೆರೆಹುಂಡಿ ಮಠದ ಸ್ವಾಮೀಜಿ, ಸರಗೂರು ಮಠಾಧ್ಯಕ್ಷ ಬಸವರಾಜ ಸ್ವಾಮೀಜಿ, ಮುಖಂಡರಾದ ಗೌಡ್ರು ಶಿವಮಲ್ಲಪ್ಪ, ಕುರಿ ಮಹದೇವಪ್ಪ, ಕುಮಾರ, ಕಳ್ಳಿಪುರ ಮಹಾದೇವಸ್ವಾಮಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>