<p><strong>ಮೈಸೂರು</strong>: ‘ಒಳ ಮೀಸಲಾತಿ ಸಮೀಕ್ಷೆ ಎರಡು ಬಾರಿ ನಡೆದರೂ, ಬಲಗೈ ಸಮುದಾಯಕ್ಕೆ ಅನ್ಯಾಯವೇ ಆಗಿದೆ’ ಎಂದು ಕಾಂಗ್ರೆಸ್ ಶಾಸಕ ಎ.ಆರ್.ಕೃಷ್ಣಮೂರ್ತಿ ಶುಕ್ರವಾರ ಬೇಸರ ವ್ಯಕ್ತಪಡಿಸಿದರು. </p>.<p>ಇಲ್ಲಿನ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ‘ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ’ ಏರ್ಪಡಿಸಿದ್ದ ‘ನಾಗ, ಮಹಾರ್, ಹೊಲೆಯ, ಛಲವಾದಿ ಸಮುದಾಯಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.</p>.<p>‘ವರದಿ ಕೊಟ್ಟವರನ್ನು ಬಹಳ ನಂಬಿದ್ದೆವು. ಆದರೆ, ಸಮುದಾಯವನ್ನು ಒಡೆದು ಛಿದ್ರ ಮಾಡಿದ್ದಾರೆ. ನ್ಯಾಯಾಲಯದ ಕದ ತಟ್ಟುವ ಕೆಲಸವನ್ನು ಸಮುದಾಯದ ಬೌದ್ಧಿಕ ವಲಯವು ನಿರ್ಧರಿಸಲಿ’ ಎಂದರು. </p>.<p>‘ಬಡ್ತಿ ಮೀಸಲಾತಿಯಲ್ಲಿ ಎ, ಬಿ, ಸಿ, ಡಿ ವಿಭಾಗಗಳಿದ್ದು, ಬಲಗೈ ಸಮಾಜದವರನ್ನು ಕೆಳಕ್ಕೆ ತಳ್ಳಲಾಗಿದೆ. ಅದಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಿದೆ’ ಎಂದು ಪ್ರತಿಪಾದಿಸಿದರು. </p>.<p>‘ಬಲಗೈ ಸಮುದಾಯದ ಸಾವಿರಾರು ಜನರು ಸಮೀಕ್ಷೆಯಲ್ಲಿ ‘ಹೊಲೆಯ’ ಎಂದು ನಮೂದಿಸಲು ಹಿಂಜರಿದರು. ಹೀಗಾಗಿ, ಜನಸಂಖ್ಯೆ ಕಡಿಮೆ ದಾಖಲಾಗಿದೆ. ಸಮೀಕ್ಷೆಯಿಂದ ನೋವಾಗಿದೆ’ ಎಂದರು.</p>.<p>‘ಬಾಡಿಗೆ ಮನೆಗಾಗಿ ಹಲವರು ಸುಳ್ಳು ಜಾತಿ ಹೇಳಿದ್ದಾರೆ. ನಮ್ಮ ಜಾತಿಯನ್ನು ಸ್ವಾಭಿಮಾನದಿಂದ ಹೇಳಿಕೊಳ್ಳದಿದ್ದರೆ ಇದ್ದರೂ ಸತ್ತಂತೆ. ಮುಂದಿನ ಪೀಳಿಗೆಗೆ ಮಣ್ಣು ಹಾಕಿದಂತೆ’ ಎಂದರು. </p>.<p>‘ಒಳ ಮೀಸಲಾತಿ ಜಾರಿ ಆದಾಗ ಎಡಗೈ ಸಮುದಾಯದವರು ವಿಜಯೋತ್ಸವ ಆಚರಿಸಿದರು, ನಾವು ಮೌನವಾಗಿದ್ದೇವೆ. ಸಮೀಕ್ಷೆಯ ಅಂಕಿ– ಅಂಶ ನಮಗೆ ಸಮಾಧಾನ ಕೊಟ್ಟಿಲ್ಲ’ ಎಂದು ಹೇಳಿದರು.</p>.<p><strong>‘ಮನುವಾದದತ್ತ ಸಮಾಜ’ </strong></p><p>ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ‘1925ರಲ್ಲಿ ಹುಟ್ಟಿದ ಮನುವಾದಿ ಸಂಘಟನೆ ಸೋದರ ಸಮಾಜವನ್ನು ಒಡೆದು ಹಾಕಿದೆ‘ ಎಂದು ದೂರಿದರು. ‘ಮತ್ತೆ ಮನುವಾದಕ್ಕೆ ಸಮಾಜ ತಿರುಗುತ್ತಿದೆ.ಯಶಸ್ಸಿಗೆ ಒಗ್ಗಟ್ಟು ಅಗತ್ಯ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಒಳ ಮೀಸಲಾತಿ ಸಮೀಕ್ಷೆ ಎರಡು ಬಾರಿ ನಡೆದರೂ, ಬಲಗೈ ಸಮುದಾಯಕ್ಕೆ ಅನ್ಯಾಯವೇ ಆಗಿದೆ’ ಎಂದು ಕಾಂಗ್ರೆಸ್ ಶಾಸಕ ಎ.ಆರ್.ಕೃಷ್ಣಮೂರ್ತಿ ಶುಕ್ರವಾರ ಬೇಸರ ವ್ಯಕ್ತಪಡಿಸಿದರು. </p>.<p>ಇಲ್ಲಿನ ಮಾನಸಗಂಗೋತ್ರಿ ವಿಜ್ಞಾನ ಭವನದಲ್ಲಿ ‘ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ’ ಏರ್ಪಡಿಸಿದ್ದ ‘ನಾಗ, ಮಹಾರ್, ಹೊಲೆಯ, ಛಲವಾದಿ ಸಮುದಾಯಗಳ ಸಾಂಸ್ಕೃತಿಕ ಮತ್ತು ಐತಿಹಾಸಿಕ ಹಿನ್ನೆಲೆ’ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.</p>.<p>‘ವರದಿ ಕೊಟ್ಟವರನ್ನು ಬಹಳ ನಂಬಿದ್ದೆವು. ಆದರೆ, ಸಮುದಾಯವನ್ನು ಒಡೆದು ಛಿದ್ರ ಮಾಡಿದ್ದಾರೆ. ನ್ಯಾಯಾಲಯದ ಕದ ತಟ್ಟುವ ಕೆಲಸವನ್ನು ಸಮುದಾಯದ ಬೌದ್ಧಿಕ ವಲಯವು ನಿರ್ಧರಿಸಲಿ’ ಎಂದರು. </p>.<p>‘ಬಡ್ತಿ ಮೀಸಲಾತಿಯಲ್ಲಿ ಎ, ಬಿ, ಸಿ, ಡಿ ವಿಭಾಗಗಳಿದ್ದು, ಬಲಗೈ ಸಮಾಜದವರನ್ನು ಕೆಳಕ್ಕೆ ತಳ್ಳಲಾಗಿದೆ. ಅದಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಿದೆ’ ಎಂದು ಪ್ರತಿಪಾದಿಸಿದರು. </p>.<p>‘ಬಲಗೈ ಸಮುದಾಯದ ಸಾವಿರಾರು ಜನರು ಸಮೀಕ್ಷೆಯಲ್ಲಿ ‘ಹೊಲೆಯ’ ಎಂದು ನಮೂದಿಸಲು ಹಿಂಜರಿದರು. ಹೀಗಾಗಿ, ಜನಸಂಖ್ಯೆ ಕಡಿಮೆ ದಾಖಲಾಗಿದೆ. ಸಮೀಕ್ಷೆಯಿಂದ ನೋವಾಗಿದೆ’ ಎಂದರು.</p>.<p>‘ಬಾಡಿಗೆ ಮನೆಗಾಗಿ ಹಲವರು ಸುಳ್ಳು ಜಾತಿ ಹೇಳಿದ್ದಾರೆ. ನಮ್ಮ ಜಾತಿಯನ್ನು ಸ್ವಾಭಿಮಾನದಿಂದ ಹೇಳಿಕೊಳ್ಳದಿದ್ದರೆ ಇದ್ದರೂ ಸತ್ತಂತೆ. ಮುಂದಿನ ಪೀಳಿಗೆಗೆ ಮಣ್ಣು ಹಾಕಿದಂತೆ’ ಎಂದರು. </p>.<p>‘ಒಳ ಮೀಸಲಾತಿ ಜಾರಿ ಆದಾಗ ಎಡಗೈ ಸಮುದಾಯದವರು ವಿಜಯೋತ್ಸವ ಆಚರಿಸಿದರು, ನಾವು ಮೌನವಾಗಿದ್ದೇವೆ. ಸಮೀಕ್ಷೆಯ ಅಂಕಿ– ಅಂಶ ನಮಗೆ ಸಮಾಧಾನ ಕೊಟ್ಟಿಲ್ಲ’ ಎಂದು ಹೇಳಿದರು.</p>.<p><strong>‘ಮನುವಾದದತ್ತ ಸಮಾಜ’ </strong></p><p>ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ ‘1925ರಲ್ಲಿ ಹುಟ್ಟಿದ ಮನುವಾದಿ ಸಂಘಟನೆ ಸೋದರ ಸಮಾಜವನ್ನು ಒಡೆದು ಹಾಕಿದೆ‘ ಎಂದು ದೂರಿದರು. ‘ಮತ್ತೆ ಮನುವಾದಕ್ಕೆ ಸಮಾಜ ತಿರುಗುತ್ತಿದೆ.ಯಶಸ್ಸಿಗೆ ಒಗ್ಗಟ್ಟು ಅಗತ್ಯ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>