<p><strong>ಮೈಸೂರು</strong>: ಹೊಸ ಶಿಕ್ಷಣ ನೀತಿ ಸಕ್ಕರೆ ಲೇಪಿತ ಮಾತ್ರೆಯಂತೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ತಿಳಿಸಿದರು.</p>.<p>ಮಾನವ ಬಂಧುತ್ವ ವೇದಿಕೆಯು ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ 'ಹೊಸ ಶಿಕ್ಷಣ ನೀತಿ ಮತ್ತು ಪಠ್ಯ ತಿರುಚುವಿಕೆಯ ರಾಜಕಾರಣ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ಹೊಸ ಶಿಕ್ಷಣ ನೀತಿ ಮೇಲುನೋಟಕ್ಕೆ ಚೆನ್ನಾಗಿದೆ. ಬಹಳ ಚೆನ್ನಾಗಿ ಕಾಣಿಸುತ್ತದೆ. ಇದು ಸಕ್ಕರೆ ಲೇಪಿತ ಮಾತ್ರೆಯಂತೆ. ಮೊದಲು ಸಿಹಿ ನಂತರ ಕಹಿಯಾಗುತ್ತದೆ ಎಂದು ಹೇಳಿದರು.</p>.<p>ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ. ಬಹುದೊಡ್ಡ ಸುಧಾರಣೆ ಬೇಕಿದೆ ನಿಜ. ಆದರೆ ಅದು ಹೊಸ ಶಿಕ್ಷಣ ನೀತಿಯಂತಿರಬಾರದು ಎಂದರು.</p>.<p>ಬಲವಂತವಾಗಿ ಶಿಕ್ಷಣ ನೀತಿ ಹೇರುವ ಅಧಿಕಾರ ಕೇಂದ್ರಕ್ಕೆ ಇಲ್ಲ. ಸಂವಿಧಾನ ವಿರೋಧಿ ನೀತಿಯನ್ನು ರಾಜ್ಯಗಳ ಮೇಲೆ ಹೇರುವುದು ಒಕ್ಕೂಟ ವ್ಯವಸ್ಥೆಗೆ ಬಲವಾದ ಪೆಟ್ಟು ನೀಡುತ್ತರೆ ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಹೇಳಿದರು.</p>.<p>ಶಿಕ್ಷಣವನ್ನು ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರವನ್ನು ಕೇಂದ್ರೀಕೃತಗೊಳಿಸಲಾಗುತ್ತಿದೆ. ಹೊಸನೀತಿಯಲ್ಲಿ ವ್ಯಾಪಾರೀಕರಣಕ್ಕೆ ಅವಕಾಶ ಇದ್ದು ಹಣ ಇದ್ದವರಿಗಷ್ಟೇ ಶಿಕ್ಷಣ ಎನ್ನುವಂತಾಗಿದೆ.ಖಾಸಗಿ ಅವರು ಶಿಕ್ಷಣ ಕೊಡುವುದು ಸ್ವಾಗತ. ಆದರೆ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.</p>.<p>ಜನಪರ ಹೋರಾಟಗಳೇ ಜನರ ಸಮಸ್ಯೆಗಳಿಗೆ ಮದ್ದು ಎಂಬುದನ್ನು ರೈತ ಚಳವಳಿ ಸಾಬೀತುಪಡಿಸಿದೆ. ಹೊಸದೊಂದು ಚಳವಳಿ ರೂಪುಗೊಳ್ಳುವ ಮೊದಲು ಹೊಸ ನೀತಿಯನ್ನು ವಾಪಸ್ ತೆಗೆದುಕೊಳ್ಳಿ. ಎಲ್ಲರೊಂದಿಗೂ ಚರ್ಚಿಸಿ ನಂತರ ನೀತಿ ರೂಪಿಸಿ ಎಂದು ಒತ್ತಾಯಿಸಿದರು.</p>.<p>ಅಂಗನವಾಡಿ ಶಿಕ್ಷಕರನ್ನು ಹಸಿವಿನಲ್ಲಿ ಇಟ್ಟು ಶಿಕ್ಷಣ ಸುಧಾರಣೆಗೆ ಹೊರಟಿರುವುದು ನಾಚಿಕೆಗೇಡು. ಅರ್ಧದಷ್ಟು ಬೋಧಕರ ಹುದ್ದೆ ಖಾಲಿ ಇವೆ. ಮೊದಲು ಇವುಗಳನ್ನು ಭರ್ತಿ ಮಾಡಿ ಎಂದರು.</p>.<p>ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಶಿಕ್ಷಣದಲ್ಲಿ ಬದಲಾವಣೆ ತರಬೇಕು. ಮುಂದಕ್ಕೆ ಹೋಗುವ ನೀತಿಯನ್ನು ಜಾರಿಗೊಳಿಸಿಲ್ಲ. ಇದು ಹಿಮ್ಮುಖ ಚಲನೆಯ ನೀತಿ. ಕೇಸರೀಕರಣ ಮಾಡುವ ಹುನ್ನಾರ ಇದೆ ಎಂದು ಟೀಕಿಸಿದರು.</p>.<p>ಹೊಸ ಶಿಕ್ಷಣ ನೀತಿ ಕಾಲ್ಪನಿಕ ಪರಿಕಲ್ಪನೆಯ ಆಧಾರದ ಮೇಲೆ ರೂಪಿಸಲಾಗಿದೆ. ವೈಜ್ಞಾನಿಕ ತಳಹದಿ ನೀತಿಗೆ ಇಲ್ಲ ಎಂದು ಹೇಳಿದರು.</p>.<p>ಜೈಭೀಮ್ ನಂತಹ ಸಿನಿಮಾ ನೀಡಿದ ತಮಿಳು ಚಿತ್ರರಂಗಕ್ಕೆ ಅಭಿನಂದಿಸುತ್ತೇನೆ. ಆ ತರಹ ಶೋಷಿತರ ಪರವಾದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲೂ ಬರಬೇಕು ಎಂದರು.</p>.<p>ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ತಾವೇ ತಾವಾಗಿ ಶಿಕ್ಷಣದಿಂದ ದೂರ ಹೋಗಲಿ ಎಂದೆ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದು ಹೇಳಿದರು.</p>.<p>ಭಾರತದ ಶಿಕ್ಷಣ ನೀತಿಯನ್ನು ನಾಶ ಮಾಡುವುದಕ್ಕೆಂದೇ ಹಾಗೂ ಆಧುನಿಕ ಗುಲಾಮಗಿರಿಯನ್ನು ರೂಪಿಸಲು<br />ನೂತನ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದರು.</p>.<p><strong>ಹೊಸ ಶಿಕ್ಷಣ ನೀತಿಯಿಂದ ವಾಪಸ್ ಕಾಡಿಗೆ ಹೋಗಬೇಕಾಗುತ್ತದೆ- ಎಚ್ಚರಿಕೆ</strong><br />ವೇದಿಕೆಯ ಸಂಸ್ಥಾಪಕ ಸತೀಶ ಜಾರಕಿಹೊಳಿ ಮಾತನಾಡಿ, 'ಹೊಸ ಶಿಕ್ಷಣ ನೀತಿ ಜಾರಿಗೊಂಡರೆ ಹಿಂದುಳಿದವರು ವಾಪಸ್ ಕಾಡಿಗೆ ಹೋಗಬೇಕಾಗುತ್ತದೆ ಹಾಗೂ ಚಪ್ಪಲಿ ಹೊಲಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.</p>.<p>2 ಸಾವಿರ ವರ್ಷಗಳ ಹಿಂದೆ ನಾವು ಶಿಕ್ಷಣದಿಂದ ವಂಚಿತರಾಗಿದ್ದೆವು. ಅಂಬೇಡ್ಕರ್ ಅವರಿಂದ ಶಿಕ್ಷಣ ಪಡೆದೆವು. ಹೀಗೇ ಬಿಟ್ಟರೆ ದಲಿತರು ಮುಂದುವರಿಯುತ್ತಾರೆ ಎನ್ನುವ ಭಯದಿಂದ ಈ ನೀತಿ ಜಾರಿಗೊಳಿಸಲಾಗಿದೆ ಎಂದರು.</p>.<p>ಈ ಕುರಿತ ವಿರೋಧಕ್ಕೆ ಸರ್ಕಾರ ಕಿವಿಗೊಡುತ್ತಿಲ್ಲ. ಆದರೆ, ರೈತ ಚಳವಳಿ ಸರ್ಕಾರಕ್ಕೆ ಅಂಕುಶ ಹಾಕಿದೆ. ಶಿಕ್ಷಣ ನೀತಿ ವಿಚಾರದಲ್ಲೂ ಇದೇ ಬಗೆಯ ಜನಾಭಿಪ್ರಾಯ ಮೂಡಬೇಕು ಎಂದು ಹೇಳಿದರು.</p>.<p>ಶಿಕ್ಷಣದಲ್ಲಿ ಹೊಸ ಹೊಸ ಪಠ್ಯ ಸೇರಿಸುವ ಹುನ್ನಾರ ನಡೆಯುತ್ತಿದೆ. ಈ ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ಮುಂದುವರಿಸಬೇಕು. ಪ್ರತಿಭಟನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.</p>.<p>ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ, ಸರ್ಕಾರ ಕುಲಪತಿಯವರಿಗೆ ಬೆದರಿಕೆ ಹಾಕಿ ಅವಕಾಶ ನಿರಾಕರಿಸಲಾಯಿತು ಎಂದು ಆರೋಪಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಹೊಸ ಶಿಕ್ಷಣ ನೀತಿ ಸಕ್ಕರೆ ಲೇಪಿತ ಮಾತ್ರೆಯಂತೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ತಿಳಿಸಿದರು.</p>.<p>ಮಾನವ ಬಂಧುತ್ವ ವೇದಿಕೆಯು ಇಲ್ಲಿನ ಎಂಜಿನಿಯರುಗಳ ಸಂಸ್ಥೆಯಲ್ಲಿ ಏರ್ಪಡಿಸಿದ್ದ 'ಹೊಸ ಶಿಕ್ಷಣ ನೀತಿ ಮತ್ತು ಪಠ್ಯ ತಿರುಚುವಿಕೆಯ ರಾಜಕಾರಣ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.</p>.<p>ಹೊಸ ಶಿಕ್ಷಣ ನೀತಿ ಮೇಲುನೋಟಕ್ಕೆ ಚೆನ್ನಾಗಿದೆ. ಬಹಳ ಚೆನ್ನಾಗಿ ಕಾಣಿಸುತ್ತದೆ. ಇದು ಸಕ್ಕರೆ ಲೇಪಿತ ಮಾತ್ರೆಯಂತೆ. ಮೊದಲು ಸಿಹಿ ನಂತರ ಕಹಿಯಾಗುತ್ತದೆ ಎಂದು ಹೇಳಿದರು.</p>.<p>ವಿದ್ಯಾವಂತರು ನಿರುದ್ಯೋಗಿಗಳಾಗುತ್ತಿದ್ದಾರೆ. ಬಹುದೊಡ್ಡ ಸುಧಾರಣೆ ಬೇಕಿದೆ ನಿಜ. ಆದರೆ ಅದು ಹೊಸ ಶಿಕ್ಷಣ ನೀತಿಯಂತಿರಬಾರದು ಎಂದರು.</p>.<p>ಬಲವಂತವಾಗಿ ಶಿಕ್ಷಣ ನೀತಿ ಹೇರುವ ಅಧಿಕಾರ ಕೇಂದ್ರಕ್ಕೆ ಇಲ್ಲ. ಸಂವಿಧಾನ ವಿರೋಧಿ ನೀತಿಯನ್ನು ರಾಜ್ಯಗಳ ಮೇಲೆ ಹೇರುವುದು ಒಕ್ಕೂಟ ವ್ಯವಸ್ಥೆಗೆ ಬಲವಾದ ಪೆಟ್ಟು ನೀಡುತ್ತರೆ ಇದು ಪ್ರಜಾಪ್ರಭುತ್ವ ವಿರೋಧಿ ಧೋರಣೆ ಎಂದು ಹೇಳಿದರು.</p>.<p>ಶಿಕ್ಷಣವನ್ನು ಅಂಗಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಶಿಕ್ಷಣಕ್ಕೆ ಸಂಬಂಧಿಸಿದ ಅಧಿಕಾರವನ್ನು ಕೇಂದ್ರೀಕೃತಗೊಳಿಸಲಾಗುತ್ತಿದೆ. ಹೊಸನೀತಿಯಲ್ಲಿ ವ್ಯಾಪಾರೀಕರಣಕ್ಕೆ ಅವಕಾಶ ಇದ್ದು ಹಣ ಇದ್ದವರಿಗಷ್ಟೇ ಶಿಕ್ಷಣ ಎನ್ನುವಂತಾಗಿದೆ.ಖಾಸಗಿ ಅವರು ಶಿಕ್ಷಣ ಕೊಡುವುದು ಸ್ವಾಗತ. ಆದರೆ ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡುವುದು ಸರಿಯಲ್ಲ ಎಂದು ಟೀಕಿಸಿದರು.</p>.<p>ಜನಪರ ಹೋರಾಟಗಳೇ ಜನರ ಸಮಸ್ಯೆಗಳಿಗೆ ಮದ್ದು ಎಂಬುದನ್ನು ರೈತ ಚಳವಳಿ ಸಾಬೀತುಪಡಿಸಿದೆ. ಹೊಸದೊಂದು ಚಳವಳಿ ರೂಪುಗೊಳ್ಳುವ ಮೊದಲು ಹೊಸ ನೀತಿಯನ್ನು ವಾಪಸ್ ತೆಗೆದುಕೊಳ್ಳಿ. ಎಲ್ಲರೊಂದಿಗೂ ಚರ್ಚಿಸಿ ನಂತರ ನೀತಿ ರೂಪಿಸಿ ಎಂದು ಒತ್ತಾಯಿಸಿದರು.</p>.<p>ಅಂಗನವಾಡಿ ಶಿಕ್ಷಕರನ್ನು ಹಸಿವಿನಲ್ಲಿ ಇಟ್ಟು ಶಿಕ್ಷಣ ಸುಧಾರಣೆಗೆ ಹೊರಟಿರುವುದು ನಾಚಿಕೆಗೇಡು. ಅರ್ಧದಷ್ಟು ಬೋಧಕರ ಹುದ್ದೆ ಖಾಲಿ ಇವೆ. ಮೊದಲು ಇವುಗಳನ್ನು ಭರ್ತಿ ಮಾಡಿ ಎಂದರು.</p>.<p>ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಮಾತನಾಡಿ, ಶಿಕ್ಷಣದಲ್ಲಿ ಬದಲಾವಣೆ ತರಬೇಕು. ಮುಂದಕ್ಕೆ ಹೋಗುವ ನೀತಿಯನ್ನು ಜಾರಿಗೊಳಿಸಿಲ್ಲ. ಇದು ಹಿಮ್ಮುಖ ಚಲನೆಯ ನೀತಿ. ಕೇಸರೀಕರಣ ಮಾಡುವ ಹುನ್ನಾರ ಇದೆ ಎಂದು ಟೀಕಿಸಿದರು.</p>.<p>ಹೊಸ ಶಿಕ್ಷಣ ನೀತಿ ಕಾಲ್ಪನಿಕ ಪರಿಕಲ್ಪನೆಯ ಆಧಾರದ ಮೇಲೆ ರೂಪಿಸಲಾಗಿದೆ. ವೈಜ್ಞಾನಿಕ ತಳಹದಿ ನೀತಿಗೆ ಇಲ್ಲ ಎಂದು ಹೇಳಿದರು.</p>.<p>ಜೈಭೀಮ್ ನಂತಹ ಸಿನಿಮಾ ನೀಡಿದ ತಮಿಳು ಚಿತ್ರರಂಗಕ್ಕೆ ಅಭಿನಂದಿಸುತ್ತೇನೆ. ಆ ತರಹ ಶೋಷಿತರ ಪರವಾದ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲೂ ಬರಬೇಕು ಎಂದರು.</p>.<p>ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಪರಿಶಿಷ್ಟ ಜಾತಿ ಹಾಗೂ ಪಂಗಡದವರು ತಾವೇ ತಾವಾಗಿ ಶಿಕ್ಷಣದಿಂದ ದೂರ ಹೋಗಲಿ ಎಂದೆ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದು ಹೇಳಿದರು.</p>.<p>ಭಾರತದ ಶಿಕ್ಷಣ ನೀತಿಯನ್ನು ನಾಶ ಮಾಡುವುದಕ್ಕೆಂದೇ ಹಾಗೂ ಆಧುನಿಕ ಗುಲಾಮಗಿರಿಯನ್ನು ರೂಪಿಸಲು<br />ನೂತನ ಶಿಕ್ಷಣ ನೀತಿ ರೂಪಿಸಲಾಗಿದೆ ಎಂದರು.</p>.<p><strong>ಹೊಸ ಶಿಕ್ಷಣ ನೀತಿಯಿಂದ ವಾಪಸ್ ಕಾಡಿಗೆ ಹೋಗಬೇಕಾಗುತ್ತದೆ- ಎಚ್ಚರಿಕೆ</strong><br />ವೇದಿಕೆಯ ಸಂಸ್ಥಾಪಕ ಸತೀಶ ಜಾರಕಿಹೊಳಿ ಮಾತನಾಡಿ, 'ಹೊಸ ಶಿಕ್ಷಣ ನೀತಿ ಜಾರಿಗೊಂಡರೆ ಹಿಂದುಳಿದವರು ವಾಪಸ್ ಕಾಡಿಗೆ ಹೋಗಬೇಕಾಗುತ್ತದೆ ಹಾಗೂ ಚಪ್ಪಲಿ ಹೊಲಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.</p>.<p>2 ಸಾವಿರ ವರ್ಷಗಳ ಹಿಂದೆ ನಾವು ಶಿಕ್ಷಣದಿಂದ ವಂಚಿತರಾಗಿದ್ದೆವು. ಅಂಬೇಡ್ಕರ್ ಅವರಿಂದ ಶಿಕ್ಷಣ ಪಡೆದೆವು. ಹೀಗೇ ಬಿಟ್ಟರೆ ದಲಿತರು ಮುಂದುವರಿಯುತ್ತಾರೆ ಎನ್ನುವ ಭಯದಿಂದ ಈ ನೀತಿ ಜಾರಿಗೊಳಿಸಲಾಗಿದೆ ಎಂದರು.</p>.<p>ಈ ಕುರಿತ ವಿರೋಧಕ್ಕೆ ಸರ್ಕಾರ ಕಿವಿಗೊಡುತ್ತಿಲ್ಲ. ಆದರೆ, ರೈತ ಚಳವಳಿ ಸರ್ಕಾರಕ್ಕೆ ಅಂಕುಶ ಹಾಕಿದೆ. ಶಿಕ್ಷಣ ನೀತಿ ವಿಚಾರದಲ್ಲೂ ಇದೇ ಬಗೆಯ ಜನಾಭಿಪ್ರಾಯ ಮೂಡಬೇಕು ಎಂದು ಹೇಳಿದರು.</p>.<p>ಶಿಕ್ಷಣದಲ್ಲಿ ಹೊಸ ಹೊಸ ಪಠ್ಯ ಸೇರಿಸುವ ಹುನ್ನಾರ ನಡೆಯುತ್ತಿದೆ. ಈ ಬಗೆಯ ಜಾಗೃತಿ ಕಾರ್ಯಕ್ರಮಗಳನ್ನು ಮೈಸೂರಿನಲ್ಲಿ ಮುಂದುವರಿಸಬೇಕು. ಪ್ರತಿಭಟನೆಗಳನ್ನು ರೂಪಿಸಬೇಕು ಎಂದು ಕರೆ ನೀಡಿದರು.</p>.<p>ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ಭವನದಲ್ಲಿ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಆದರೆ, ಸರ್ಕಾರ ಕುಲಪತಿಯವರಿಗೆ ಬೆದರಿಕೆ ಹಾಕಿ ಅವಕಾಶ ನಿರಾಕರಿಸಲಾಯಿತು ಎಂದು ಆರೋಪಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>