<p><strong>ಮೈಸೂರು: </strong>ನಂಜನಗೂಡಿನಲ್ಲಿರುವ ಪುರಾತನ ರೈಲ್ವೆ ಸೇತುವೆಯನ್ನು ಪಾರಂಪರಿಕ ತಾಣವಾಗಿ ಸಂರಕ್ಷಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗ ಯೋಜನೆ ರೂಪಿಸಿದೆ.</p>.<p>ಮೈಸೂರು ವಿಭಾಗದ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಅವರು ಇತ್ತೀಚೆಗೆ ಈ ಸೇತುವೆಯ ಪರಿಶೀಲನೆ ನಡೆಸಿದರು. ಸೇತುವೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದ ಸಾಧಕಬಾಧಕಗಳ ಬಗ್ಗೆ ಅಧಿಕಾರಿಗಳು, ಎಂಜಿನಿಯರ್ಗಳ ಜತೆ ಚರ್ಚೆ ನಡೆಸಿದರು.</p>.<p>ಗತವೈಭವವನ್ನು ಸಾರುವ ಈ ಸೇತುವೆಯನ್ನು ಮುಂದಿನ ತಲೆಮಾರಿನ ಜನರಿಗಾಗಿ ಸಂರಕ್ಷಿಸಿಡಲು ವಿಸ್ತೃತ ಯೋಜನಾ ವರದಿಯೊಂದನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.</p>.<p>ಪಾರಂಪರಿಕ ಶೈಲಿಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಸೇತುವೆಯ ನವೀಕರಣ, ಮಾಹಿತಿ ಫಲಕ ಅಳ ವಡಿಕೆ, ರಾತ್ರಿ ವೇಳೆ ಕಂಗೊಳಿಸುವ ರೀತಿ ಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಒಳಗೊಂಡಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.</p>.<p>ಭಾರತೀಯ ರೈಲ್ವೆಯು ಪುರಾತನ ಕಟ್ಟಡ, ಸೇತುವೆ, ಇತರ ತಾಣಗಳನ್ನು ಸಂರಕ್ಷಿಸಲು ವಿಶೇಷ ಆಸಕ್ತಿ ವಹಿಸುತ್ತಿದೆ. ಅದೇ ರೀತಿ ಈ ಸೇತುವೆಯನ್ನು ಕೂಡಾ ಸಂರಕ್ಷಿಸಲು ಮುಂದಾಗಿದೆ ಎಂದು ಅಪರ್ಣಾ ಗರ್ಗ್ ತಿಳಿಸಿದರು.</p>.<p>ಈ ಕುರಿತ ಪ್ರಸ್ತಾವವನ್ನು ನೈರುತ್ಯ ರೈಲ್ವೆ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು. ಅನುಮತಿ ಲಭಿಸಿದ ಕೂಡಲೇ ನವೀಕರಣ ಕೆಲಸ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.</p>.<p>ಈ ಸೇತುವೆಯನ್ನು ಸುಮಾರು 250 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ 300 ಮೀ. ಉದ್ದವಿದ್ದು, 2007 ರಲ್ಲಿ ಹೊಸ ಸೇತುವೆ ನಿರ್ಮಾಣವಾಗುವವರೆಗೂ ಬಳಕೆಯಲ್ಲಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಂಜನಗೂಡಿನಲ್ಲಿರುವ ಪುರಾತನ ರೈಲ್ವೆ ಸೇತುವೆಯನ್ನು ಪಾರಂಪರಿಕ ತಾಣವಾಗಿ ಸಂರಕ್ಷಿಸಲು ನೈರುತ್ಯ ರೈಲ್ವೆ ಮೈಸೂರು ವಿಭಾಗ ಯೋಜನೆ ರೂಪಿಸಿದೆ.</p>.<p>ಮೈಸೂರು ವಿಭಾಗದ ವ್ಯವಸ್ಥಾಪಕಿ ಅಪರ್ಣಾ ಗರ್ಗ್ ಅವರು ಇತ್ತೀಚೆಗೆ ಈ ಸೇತುವೆಯ ಪರಿಶೀಲನೆ ನಡೆಸಿದರು. ಸೇತುವೆಯನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವುದಕ್ಕೆ ಸಂಬಂಧಿಸಿದ ಸಾಧಕಬಾಧಕಗಳ ಬಗ್ಗೆ ಅಧಿಕಾರಿಗಳು, ಎಂಜಿನಿಯರ್ಗಳ ಜತೆ ಚರ್ಚೆ ನಡೆಸಿದರು.</p>.<p>ಗತವೈಭವವನ್ನು ಸಾರುವ ಈ ಸೇತುವೆಯನ್ನು ಮುಂದಿನ ತಲೆಮಾರಿನ ಜನರಿಗಾಗಿ ಸಂರಕ್ಷಿಸಿಡಲು ವಿಸ್ತೃತ ಯೋಜನಾ ವರದಿಯೊಂದನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.</p>.<p>ಪಾರಂಪರಿಕ ಶೈಲಿಗೆ ಯಾವುದೇ ಧಕ್ಕೆಯಾಗದ ರೀತಿಯಲ್ಲಿ ಸೇತುವೆಯ ನವೀಕರಣ, ಮಾಹಿತಿ ಫಲಕ ಅಳ ವಡಿಕೆ, ರಾತ್ರಿ ವೇಳೆ ಕಂಗೊಳಿಸುವ ರೀತಿ ಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆ ಒಳಗೊಂಡಂತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ.</p>.<p>ಭಾರತೀಯ ರೈಲ್ವೆಯು ಪುರಾತನ ಕಟ್ಟಡ, ಸೇತುವೆ, ಇತರ ತಾಣಗಳನ್ನು ಸಂರಕ್ಷಿಸಲು ವಿಶೇಷ ಆಸಕ್ತಿ ವಹಿಸುತ್ತಿದೆ. ಅದೇ ರೀತಿ ಈ ಸೇತುವೆಯನ್ನು ಕೂಡಾ ಸಂರಕ್ಷಿಸಲು ಮುಂದಾಗಿದೆ ಎಂದು ಅಪರ್ಣಾ ಗರ್ಗ್ ತಿಳಿಸಿದರು.</p>.<p>ಈ ಕುರಿತ ಪ್ರಸ್ತಾವವನ್ನು ನೈರುತ್ಯ ರೈಲ್ವೆ ಕೇಂದ್ರ ಕಚೇರಿಗೆ ಸಲ್ಲಿಸಲಾಗುವುದು. ಅನುಮತಿ ಲಭಿಸಿದ ಕೂಡಲೇ ನವೀಕರಣ ಕೆಲಸ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.</p>.<p>ಈ ಸೇತುವೆಯನ್ನು ಸುಮಾರು 250 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಕಪಿಲಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ 300 ಮೀ. ಉದ್ದವಿದ್ದು, 2007 ರಲ್ಲಿ ಹೊಸ ಸೇತುವೆ ನಿರ್ಮಾಣವಾಗುವವರೆಗೂ ಬಳಕೆಯಲ್ಲಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>