ಅಮೆರಿಕ ಕನ್ನಡಿಗ ಸಾಹಿತಿ ಡಾ. ಮೈಸೂರು ನಟರಾಜ್ ಮಾತನಾಡಿ, ‘ಕರ್ನಾಟಕದಲ್ಲಿನ ವೃತ್ತಿಪರ ರಂಗ ಕಲಾವಿದರಿಗಿಂತ ಯಾವುದೇ ರೀತಿಯಲ್ಲಿ ಕಡಿಮೆಯಿಲ್ಲದೆ ಉತ್ಕೃಷ್ಟ ಮಟ್ಟದ ಕಲಾ ಪ್ರದರ್ಶನ ನೀಡಿದ ‘ರಂಗವರ್ತುಲ’ ಸದಸ್ಯರ ಉತ್ಸಾಹ ಮೆಚ್ಚಬೇಕಾದದ್ದು. ನಿತೀಶ್ ಶ್ರೀಧರ್ ಅವರಿಂದ ಇನ್ನಷ್ಟು ಸಂಖ್ಯೆಯ ನಾಟಕಗಳ ಪ್ರದರ್ಶನ ಮತ್ತು ಆಸಕ್ತರಿಗೆ ರಂಗ ತರಬೇತಿಯನ್ನು ನಿರೀಕ್ಷಿಸಬಹುದು’ ಎಂದರು.