<p><strong>ಮೈಸೂರು: ‘</strong>ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ– 317-ಜಿ ಪ್ರಾಂತೀಯ ಸಮ್ಮೇಳನವನ್ನು ಜ.4ರಂದು ಬೆಳಿಗ್ಗೆ 9ಕ್ಕೆ ವಿಶ್ವೇಶ್ವರ ನಗರದ ಭಾರತೀಯ ಬಿಲ್ಡರ್ಗಳ ಸಂಘದ ಎಂಬಿಸಿಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಾಂತೀಯ ಅಧ್ಯಕ್ಷ ಪಿ. ಹೊನ್ನರಾಜು ತಿಳಿಸಿದರು.</p>.<p>ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಂಗಕರ್ಮಿ ಎಚ್. ಜನಾರ್ಧನ್ (ಜನ್ನಿ) ‘ಮಾನವೀಯತೆ ಮೊದಲ ಆದ್ಯತೆ’ ವಿಷಯ ಕುರಿತು ಮಾತನಾಡುವರು. ಡಾ.ಎನ್. ಕೃಷ್ಣಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದರು.</p>.<p>‘₹ 1.75 ಲಕ್ಷ ಮೊತ್ತದ 35 ಕೃತಕ ಕಾಲು ವಿತರಿಸಲಾಗುವುದು, ಸಂತೆಸರಗೂರಿನ ಶಾಲಾ ಕಟ್ಟಡ ಅಭಿವೃದ್ಧಿಗೆ ₹ 50ಸಾವಿರ ಚೆಕ್ ಹಾಗೂ ಮಹಿಳೆಯೊಬ್ಬರ ನೆರವಿಗೆ ಹೊಲಿಗೆ ಯಂತ್ರ ವಿತರಿಸಲಾಗುವುದು. ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಎಂ. ಪಂಚಲಿಂಗೇಗೌಡ, ವೀಣಾ ಅಶೋಕ್, ಎಚ್.ಖುಷಿ, ಕೆ.ಪಿ. ಶಿವಪ್ರಸಾದ್ ಹಾಗೂ ಜೈಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.</p>.<p>ಕ್ಲಬ್ನ ಎಂ.ಎನ್. ಜೈಪ್ರಕಾಶ್, ಎಂ.ವಿ. ನಂದೀಶ್, ಸಿ. ಶಂಕರ್, ಜೆ.ಲೋಕೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: ‘</strong>ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ– 317-ಜಿ ಪ್ರಾಂತೀಯ ಸಮ್ಮೇಳನವನ್ನು ಜ.4ರಂದು ಬೆಳಿಗ್ಗೆ 9ಕ್ಕೆ ವಿಶ್ವೇಶ್ವರ ನಗರದ ಭಾರತೀಯ ಬಿಲ್ಡರ್ಗಳ ಸಂಘದ ಎಂಬಿಸಿಟಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಪ್ರಾಂತೀಯ ಅಧ್ಯಕ್ಷ ಪಿ. ಹೊನ್ನರಾಜು ತಿಳಿಸಿದರು.</p>.<p>ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಂಗಕರ್ಮಿ ಎಚ್. ಜನಾರ್ಧನ್ (ಜನ್ನಿ) ‘ಮಾನವೀಯತೆ ಮೊದಲ ಆದ್ಯತೆ’ ವಿಷಯ ಕುರಿತು ಮಾತನಾಡುವರು. ಡಾ.ಎನ್. ಕೃಷ್ಣಗೌಡ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದರು.</p>.<p>‘₹ 1.75 ಲಕ್ಷ ಮೊತ್ತದ 35 ಕೃತಕ ಕಾಲು ವಿತರಿಸಲಾಗುವುದು, ಸಂತೆಸರಗೂರಿನ ಶಾಲಾ ಕಟ್ಟಡ ಅಭಿವೃದ್ಧಿಗೆ ₹ 50ಸಾವಿರ ಚೆಕ್ ಹಾಗೂ ಮಹಿಳೆಯೊಬ್ಬರ ನೆರವಿಗೆ ಹೊಲಿಗೆ ಯಂತ್ರ ವಿತರಿಸಲಾಗುವುದು. ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಎಂ. ಪಂಚಲಿಂಗೇಗೌಡ, ವೀಣಾ ಅಶೋಕ್, ಎಚ್.ಖುಷಿ, ಕೆ.ಪಿ. ಶಿವಪ್ರಸಾದ್ ಹಾಗೂ ಜೈಪ್ರಕಾಶ್ ಅವರಿಗೆ ಪ್ರದಾನ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.</p>.<p>ಕ್ಲಬ್ನ ಎಂ.ಎನ್. ಜೈಪ್ರಕಾಶ್, ಎಂ.ವಿ. ನಂದೀಶ್, ಸಿ. ಶಂಕರ್, ಜೆ.ಲೋಕೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>