<p><strong>ಮೈಸೂರು</strong>: ‘ವಿಮರ್ಶೆ ಉಸಿರಾಟದಷ್ಟೇ ಅನಿವಾರ್ಯ. ಮೌಲ್ಯಮಾಪನ ಮಾಡದೇ ಜಗತ್ತಿನ ಯಾವುದನ್ನೂ ಅರ್ಥಮಾಡಿಕೊಳ್ಳಲು ಆಗದು’ ಎಂದು ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು. </p><p>ನಗರದ ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗವು ಶುಕ್ರವಾರ ಆಯೋಜಿಸಿದ್ದ ‘ಸಾಹಿತ್ಯ ವಿಮರ್ಶೆಯ ಕೌಶಲಗಳು’ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>‘ಎಲ್ಲ ವ್ಯಕ್ತಿಗಳೂ ವಿಮರ್ಶಕರೇ. ಸರಿ– ತಪ್ಪು, ಒಳಿತು– ಕೆಡಕು ಸೇರಿದಂತೆ ಎಲ್ಲ ವಿಷಯ ವಸ್ತುಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಹೋಲಿಕೆ ಮತ್ತು ಮೌಲ್ಯಮಾಪನ ಅಗತ್ಯ’ ಎಂದರು. </p>.<p>‘ಬದುಕಿನಲ್ಲಿ ವಿಮರ್ಶೆ ಮುಖ್ಯ. ವಿದ್ಯಾರ್ಥಿಗಳಲ್ಲಿ ವಿಮರ್ಶಾ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಪಠ್ಯದಲ್ಲಿ ವಿಮರ್ಶೆ ಇಡಲಾಗಿದೆ. ಜೀವನದಲ್ಲಿ ಯಾವುದು ಅಸ್ಪಷ್ಟವಾಗಿರುತ್ತದೋ ಅದು ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ವಿಮರ್ಶಾ ಪ್ರಜ್ಞೆ ಬೆಳೆಸಿಕೊಂಡರೆ ಜೀವನದಲ್ಲೂ ಸ್ಪಷ್ಟತೆ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು. </p>.<p>‘ಸಾಹಿತ್ಯದ ಕರ್ತೃ, ಕೃತಿ, ಓದುಗ ಹಾಗೂ ಸಮಾಜ ಇರಬೇಕು. ಈ ನಾಲ್ಕರಲ್ಲಿ ಒಂದೇ ಒಂದು ಇಲ್ಲದಿದ್ದರೂ ಸಾಹಿತ್ಯ ಇರುವುದಿಲ್ಲ. ಕೃತಿಯ ಲೇಖಕ, ಸಾರ, ಭಾಷೆ, ಕೃತಿಯಲ್ಲಿನ ವಿಷಯ ಮಂಡನೆ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಬಹುದು’ ಎಂದರು. </p>.<p>ಪ್ರಾಂಶುಪಾಲ ಪ್ರೊ.ವಿ.ಷಣ್ಮುಗಂ, ‘ಸಾಹಿತ್ಯ ವಿದ್ಯಾರ್ಥಿಗಳಿಗೆ ವಿಮರ್ಶಾ ಕೌಶಲ ಮುಖ್ಯ. ಅದರ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ವಿಮರ್ಶಾ ಕೌಶಲ ಅಭಿವೃದ್ಧಿ ಪಡಿಸಿಕೊಂಡರೆ ಯಾವ ಅಭಿವ್ಯಕ್ತಿಯನ್ನೂ ಮಾಡಬಹುದು’ ಎಂದು ಹೇಳಿದರು. </p>.<p>ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ವಿಜಯಲಕ್ಷ್ಮೀ, ಸಂಚಾಲಕಿ ಪ್ರೊ.ಷಹಸೀನಾ ಬೇಗಂ, ಪ್ರೊ.ಎಸ್. ಕೃಷ್ಣಪ್ಪ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ವಿಮರ್ಶೆ ಉಸಿರಾಟದಷ್ಟೇ ಅನಿವಾರ್ಯ. ಮೌಲ್ಯಮಾಪನ ಮಾಡದೇ ಜಗತ್ತಿನ ಯಾವುದನ್ನೂ ಅರ್ಥಮಾಡಿಕೊಳ್ಳಲು ಆಗದು’ ಎಂದು ವಿಮರ್ಶಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು. </p><p>ನಗರದ ಮಹಾರಾಜ ಕಾಲೇಜಿನಲ್ಲಿ ಕನ್ನಡ ವಿಭಾಗವು ಶುಕ್ರವಾರ ಆಯೋಜಿಸಿದ್ದ ‘ಸಾಹಿತ್ಯ ವಿಮರ್ಶೆಯ ಕೌಶಲಗಳು’ ಕಾರ್ಯಾಗಾರದಲ್ಲಿ ಮಾತನಾಡಿದರು.</p>.<p>‘ಎಲ್ಲ ವ್ಯಕ್ತಿಗಳೂ ವಿಮರ್ಶಕರೇ. ಸರಿ– ತಪ್ಪು, ಒಳಿತು– ಕೆಡಕು ಸೇರಿದಂತೆ ಎಲ್ಲ ವಿಷಯ ವಸ್ತುಗಳನ್ನು ಅರ್ಥಮಾಡಿಕೊಳ್ಳಬೇಕೆಂದರೆ, ಹೋಲಿಕೆ ಮತ್ತು ಮೌಲ್ಯಮಾಪನ ಅಗತ್ಯ’ ಎಂದರು. </p>.<p>‘ಬದುಕಿನಲ್ಲಿ ವಿಮರ್ಶೆ ಮುಖ್ಯ. ವಿದ್ಯಾರ್ಥಿಗಳಲ್ಲಿ ವಿಮರ್ಶಾ ಸಾಮರ್ಥ್ಯ ಹೆಚ್ಚಿಸುವುದಕ್ಕಾಗಿ ಪಠ್ಯದಲ್ಲಿ ವಿಮರ್ಶೆ ಇಡಲಾಗಿದೆ. ಜೀವನದಲ್ಲಿ ಯಾವುದು ಅಸ್ಪಷ್ಟವಾಗಿರುತ್ತದೋ ಅದು ಸಾಹಿತ್ಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ವಿಮರ್ಶಾ ಪ್ರಜ್ಞೆ ಬೆಳೆಸಿಕೊಂಡರೆ ಜೀವನದಲ್ಲೂ ಸ್ಪಷ್ಟತೆ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು. </p>.<p>‘ಸಾಹಿತ್ಯದ ಕರ್ತೃ, ಕೃತಿ, ಓದುಗ ಹಾಗೂ ಸಮಾಜ ಇರಬೇಕು. ಈ ನಾಲ್ಕರಲ್ಲಿ ಒಂದೇ ಒಂದು ಇಲ್ಲದಿದ್ದರೂ ಸಾಹಿತ್ಯ ಇರುವುದಿಲ್ಲ. ಕೃತಿಯ ಲೇಖಕ, ಸಾರ, ಭಾಷೆ, ಕೃತಿಯಲ್ಲಿನ ವಿಷಯ ಮಂಡನೆ ಎಲ್ಲವನ್ನೂ ವಿಮರ್ಶೆಗೆ ಒಳಪಡಿಸಬಹುದು’ ಎಂದರು. </p>.<p>ಪ್ರಾಂಶುಪಾಲ ಪ್ರೊ.ವಿ.ಷಣ್ಮುಗಂ, ‘ಸಾಹಿತ್ಯ ವಿದ್ಯಾರ್ಥಿಗಳಿಗೆ ವಿಮರ್ಶಾ ಕೌಶಲ ಮುಖ್ಯ. ಅದರ ಪರಿಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ವಿಮರ್ಶಾ ಕೌಶಲ ಅಭಿವೃದ್ಧಿ ಪಡಿಸಿಕೊಂಡರೆ ಯಾವ ಅಭಿವ್ಯಕ್ತಿಯನ್ನೂ ಮಾಡಬಹುದು’ ಎಂದು ಹೇಳಿದರು. </p>.<p>ವಿಭಾಗದ ಮುಖ್ಯಸ್ಥೆ ಪ್ರೊ.ಡಿ.ವಿಜಯಲಕ್ಷ್ಮೀ, ಸಂಚಾಲಕಿ ಪ್ರೊ.ಷಹಸೀನಾ ಬೇಗಂ, ಪ್ರೊ.ಎಸ್. ಕೃಷ್ಣಪ್ಪ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>