<p><strong>ಮೈಸೂರು: </strong>ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮಾರಕವಾಗಿದ್ದ ಬೀದಿ ಹಂದಿಗಳನ್ನು ಮೈಸೂರು ಮಹಾನಗರಪಾಲಿಕೆಯ ಸಿಬ್ಬಂದಿ ಶನಿವಾರ ಹಿಡಿದರು. ಮಧುರೈನಿಂದ ಬಂದಿದ್ದ 20 ಜನರ ತಂಡವು ಮೊದಲ ದಿನವೇ 30 ಹಂದಿಗಳನ್ನು ಹಿಡಿಯಿತು.</p>.<p>ನಾಗರಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಪಾಲಿಕೆಯು ‘ಆಪರೇಷನ್ ಸ್ಟ್ರೇ ಪಿಗ್’ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದಕ್ಕಾಗಿ ನಗರಪಾಲಿಕೆ ವತಿಯಿಂದ ಮಧುರೈನಿಂದ ತಜ್ಞ ಕಾರ್ಮಿಕರನ್ನು ಕರೆಸಲಾಗಿದೆ. ಒಂದು ತಿಂಗಳ ಕಾಲ ಮೈಸೂರಿನಲ್ಲಿ ನೆಲೆಸಲಿರುವ ಈ ತಂಡವು ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಹಂದಿಗಳನ್ನು ಸೆರೆಹಿಡಿಯಲಿದೆ.</p>.<p>ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಹೊರವರ್ತುಲ ರಸ್ತೆ ಬಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಸಾತಗಳ್ಳಿ ಬಡಾವಣೆ, ಮಹಾದೇವಪುರ, ಡಾ.ರಾಜಕುಮಾರ್ ರಸ್ತೆ, ತ್ರಿವೇಣಿ ವೃತ್ತ, ಕೈಲಾಸಪುರಂ, ರಾಜೀವನಗರದಲ್ಲಿ ಹಂದಿಗಳನ್ನು ಸೆರೆಹಿಡಿಯಲಾಗಿದೆ. ಹಿಡಿದ ಹಂದಿಗಳನ್ನು ಅರಣ್ಯ ಪ್ರದೇಶಗಳಿಗೆ ಬಿಡಲಾಗುವುದು ಎಂದು ನಗರಪಾಲಿಕೆ ಪಶುವೈದ್ಯ ಡಾ.ಸುರೇಶ್ ತಿಳಿಸಿದರು.</p>.<p>ಹಂದಿಗಳನ್ನು ಕೊಟ್ಟಿಗೆಯಲ್ಲಿ ಸಾಕಬೇಕೆಂದು ಹಲವು ಬಾರಿ ಸೂಚನೆ ನೀಡಲಾಗಿದೆ. ಹಾಗಿದ್ದೂ ಹಂದಿಗಳನ್ನು ಬೀದಿಗೆ ಬಿಟ್ಟಿದ್ದಾರೆ. ರಸ್ತೆಯಲ್ಲಿರುವ ಹಂದಿಗಳನ್ನು ಮಾತ್ರ ಹಿಡಿಯಲಾಗಿದೆ ಎಂದು ಹೇಳಿದರು.</p>.<p>ಹಂಚ್ಯಾ – ಸಾತಗಳ್ಳಿ ಬಳಿ ಹಂದಿ ಪುನರ್ವಸತಿ ಕೇಂದ್ರವನ್ನು ತೆರೆಯುವ ಸಿದ್ಧತೆ ಈ ಹಿಂದೆ ನಡೆದಿತ್ತು. ಆದರೆ, ಅದು ಫಲಕಾರಿಯಾಗದ ಕಾರಣ ಅರಣ್ಯಕ್ಕೆ ಬಿಡಬೇಕಾಗಿ ಬಂದಿದೆ ಎಂದು ಡಾ.ಸುರೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು: </strong>ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಮಾರಕವಾಗಿದ್ದ ಬೀದಿ ಹಂದಿಗಳನ್ನು ಮೈಸೂರು ಮಹಾನಗರಪಾಲಿಕೆಯ ಸಿಬ್ಬಂದಿ ಶನಿವಾರ ಹಿಡಿದರು. ಮಧುರೈನಿಂದ ಬಂದಿದ್ದ 20 ಜನರ ತಂಡವು ಮೊದಲ ದಿನವೇ 30 ಹಂದಿಗಳನ್ನು ಹಿಡಿಯಿತು.</p>.<p>ನಾಗರಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ನಗರಪಾಲಿಕೆಯು ‘ಆಪರೇಷನ್ ಸ್ಟ್ರೇ ಪಿಗ್’ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಇದಕ್ಕಾಗಿ ನಗರಪಾಲಿಕೆ ವತಿಯಿಂದ ಮಧುರೈನಿಂದ ತಜ್ಞ ಕಾರ್ಮಿಕರನ್ನು ಕರೆಸಲಾಗಿದೆ. ಒಂದು ತಿಂಗಳ ಕಾಲ ಮೈಸೂರಿನಲ್ಲಿ ನೆಲೆಸಲಿರುವ ಈ ತಂಡವು ನಗರದ ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿ ಹಂದಿಗಳನ್ನು ಸೆರೆಹಿಡಿಯಲಿದೆ.</p>.<p>ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಹೊರವರ್ತುಲ ರಸ್ತೆ ಬಳಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಸಾತಗಳ್ಳಿ ಬಡಾವಣೆ, ಮಹಾದೇವಪುರ, ಡಾ.ರಾಜಕುಮಾರ್ ರಸ್ತೆ, ತ್ರಿವೇಣಿ ವೃತ್ತ, ಕೈಲಾಸಪುರಂ, ರಾಜೀವನಗರದಲ್ಲಿ ಹಂದಿಗಳನ್ನು ಸೆರೆಹಿಡಿಯಲಾಗಿದೆ. ಹಿಡಿದ ಹಂದಿಗಳನ್ನು ಅರಣ್ಯ ಪ್ರದೇಶಗಳಿಗೆ ಬಿಡಲಾಗುವುದು ಎಂದು ನಗರಪಾಲಿಕೆ ಪಶುವೈದ್ಯ ಡಾ.ಸುರೇಶ್ ತಿಳಿಸಿದರು.</p>.<p>ಹಂದಿಗಳನ್ನು ಕೊಟ್ಟಿಗೆಯಲ್ಲಿ ಸಾಕಬೇಕೆಂದು ಹಲವು ಬಾರಿ ಸೂಚನೆ ನೀಡಲಾಗಿದೆ. ಹಾಗಿದ್ದೂ ಹಂದಿಗಳನ್ನು ಬೀದಿಗೆ ಬಿಟ್ಟಿದ್ದಾರೆ. ರಸ್ತೆಯಲ್ಲಿರುವ ಹಂದಿಗಳನ್ನು ಮಾತ್ರ ಹಿಡಿಯಲಾಗಿದೆ ಎಂದು ಹೇಳಿದರು.</p>.<p>ಹಂಚ್ಯಾ – ಸಾತಗಳ್ಳಿ ಬಳಿ ಹಂದಿ ಪುನರ್ವಸತಿ ಕೇಂದ್ರವನ್ನು ತೆರೆಯುವ ಸಿದ್ಧತೆ ಈ ಹಿಂದೆ ನಡೆದಿತ್ತು. ಆದರೆ, ಅದು ಫಲಕಾರಿಯಾಗದ ಕಾರಣ ಅರಣ್ಯಕ್ಕೆ ಬಿಡಬೇಕಾಗಿ ಬಂದಿದೆ ಎಂದು ಡಾ.ಸುರೇಶ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>