ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಆ ‘1’ಕ್ಕಾಗಿ 11 ಮಂದಿ ಪೈಪೋಟಿ!

Published : 28 ಮೇ 2024, 7:36 IST
Last Updated : 28 ಮೇ 2024, 7:36 IST
ಫಾಲೋ ಮಾಡಿ
Comments
ಈ ಚುನಾವಣೆಯಲ್ಲಿ ಚಿಹ್ನೆ ಇರುವುದಿಲ್ಲ ಪ್ರಥಮ ಪ್ರಾಶಸ್ತ್ಯದ ಮತವನ್ನೇ ಕೇಳುತ್ತಿರುವ ಅಭ್ಯರ್ಥಿಗಳು ಮತಗಟ್ಟೆಗಳಲ್ಲೂ ಜಾಗೃತಿಗೆ ಕ್ರಮ
ಚುನಾವಣಾ ಆಯೋಗದ ಸೂಚನೆಯಂತೆ ಮತದಾರರ ತೋರು ಬೆರಳಿಗೆ ಅಳಿಸಲಾಗದ ಶಾಯಿ ಹಾಕಲಾಗುವುದು. ಈ ಚುನಾವಣೆಯಲ್ಲಿ ಎನ್‌ಒಟಿಎ (ನೋಟಾ) ಇರುವುದಿಲ್ಲ
ಜಿ.ಸಿ. ಪ್ರಕಾಶ್ ಚುನಾವಣಾಧಿಕಾರಿ
‘ನೇರ ಹಣಾಹಣಿಯಿಂದ ಗೊಂದಲವಾಗದು’
‘ಈ ಬಾರಿ ಕಾಂಗ್ರೆಸ್‌ ಹಾಗೂ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇರುವುದರಿಂದ ಹೆಚ್ಚು ಗೊಂದಲ ಉಂಟಾಗುವುದಿಲ್ಲ ಎಂಬ ವಿಶ್ವಾಸವಿದೆ.  ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿರುವುದರಿಂದ ಹಾಗೂ ಮೈಸೂರಿನವರೇ ಮುಖ್ಯಮಂತ್ರಿ ಆಗಿರುವುದರಿಂದ ಸಮಸ್ಯೆಗಳ ಪರಿಹಾರಕ್ಕೆ ಅನುಕೂಲವಾಗುತ್ತದೆ ಎಂದು ಪ್ರಬುದ್ಧ ಮತದಾರರು ನಮ್ಮ ಅಭ್ಯರ್ಥಿ ಮರಿತಿಬ್ಬೇಗೌಡ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಲಿದ್ದಾರೆ. ಹೀಗಾಗಿ ಈ ಬಾರಿ ಸ್ಪಷ್ಟ ಫಲಿತಾಂಶ ಹೊರಬೀಳಲಿದೆ ಎನ್ನುವುದು ನಮ್ಮ ನಿರೀಕ್ಷೆ’ ಎಂದು ಹೋದ ಚುನಾವಣೆಯಲ್ಲಿ ಪರಾಜಿತರಾಗಿದ್ದ ಎಂ. ಲಕ್ಷ್ಮಣ ಪ್ರತಿಕ್ರಿಯಿಸಿದರು.
ಯಾವುದು ಕ್ರಮಬದ್ಧವಾಗದು?
‘ಮತದಾರರು ಬ್ಯಾಲೆಟ್‌ ಪೇಪರ್‌ನಲ್ಲಿ ಮತದಾನ ಮಾಡಬೇಕು. ಕೇಂದ್ರದಲ್ಲಿ ಒದಗಿಸಲಾಗುವ ನೇರಳೆ ಬಣ್ಣದ ಪೆನ್‌ನಲ್ಲಿ ಪ್ರಾಶಸ್ತ್ಯದ ಮತಗಳನ್ನು ಬರೆದು ಮಡಚಿ ಬ್ಯಾಲೆಟ್‌ ಬಾಕ್ಸ್‌ನಲ್ಲಿ ಹಾಕಬೇಕು. ಎಲ್ಲ ಅಭ್ಯರ್ಥಿಗಳಿಗೂ ‘1’ ಎಂದೇ ನಮೂದಿಸಿದರೆ ಕನ್ನಡ ಇಂಗ್ಲಿಷ್‌ ರೋಮನ್ ಅಂಕಿಗಳನ್ನೆಲ್ಲ ಬಳಸಿದರೆ ರೈಟ್ ಅಥವಾ ಟಿಕ್‌ ಮಾರ್ಕ್‌ ಹಾಕುವುದು ಮಾಡಿದರೆ ಅದು ಕುಲಗೆಟ್ಟ ಮತವಾಗುತ್ತದೆ. ಬ್ಯಾಲೆಟ್‌ ಪೇಪರ್‌ನಲ್ಲಿ ಓಂ ಶ್ರೀ ಎಂಬಿತ್ಯಾದಿಯಾಗಿ ಬರೆದರೆ ತಿರಸ್ಕರಿಸಲಾಗುತ್ತದೆ’ ಎಂದು ಪ್ರಾದೇಶಿಕ ಆಯುಕ್ತರ ಕಚೇರಿಯ ಚುನಾವಣಾ ತಹಶೀಲ್ದಾರ್‌ ಅಶೋಕ್‌ ‘‍ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ‘ಪ್ರತಿ ಮತಗಟ್ಟೆಯಲ್ಲೂ ಮತಗಟ್ಟೆ ಅಧಿಕಾರಿಯು ಪೆನ್ ಕೊಡುವಾಗಲೇ ಹೇಗೆ ಮತ ಚಲಾಯಿಸಬೇಕು ಎಂಬುದನ್ನು ಮತದಾರರಿಗೆ ತಿಳಿಸುತ್ತಾರೆ. ಮತದಾನದ ಕ್ರಮಬದ್ಧವಾದ ವಿಧಾನದ ಮಾಹಿತಿಯುಳ್ಳ ಪೋಸ್ಟರ್‌ ಅನ್ನು ಅಂಟಿಸಲಾಗುತ್ತದೆ. ಅದನ್ನು ಮತದಾರರು ನೋಡಿಕೊಳ್ಳಬಹುದು’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT