ಈ ವರ್ಷ ಮಾರ್ಚ್ 22ರಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾ ಅಧಿಕಾರಿ (ಪಿಸಿಸಿಎಫ್) ಎನ್ಟಿಸಿಎ ಡಿಐಜಿಗೆ ಪತ್ರ ಬರೆದಿದ್ದು, ‘ಬಾಕಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಹೋಟೆಲ್ಗೆ ನೀಡಬೇಕಾದ ₹80.6 ಲಕ್ಷವನ್ನು ಅವರ ಖಾತೆಗೆ ನೇರವಾಗಿ ಪಾವತಿಸಬೇಕು’ ಎಂದು ಕೋರಿದ್ದರು. ಉತ್ತರಿಸಿದ್ದ ಎನ್ಟಿಸಿಎ, ‘ರಾಜ್ಯ ಸರ್ಕಾರವೇ ಹಣ ಬಿಡುಗಡೆ ಮಾಡಬೇಕು’ ಎಂದು ಹೇಳಿ ಸುಮ್ಮನಾಗಿದೆ.