ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 6 ವೈದ್ಯರ ಪೈಕಿ ಪ್ರಭುಲಿಂಗಸ್ವಾಮಿ ಚಿಕಿತ್ಸೆ ನೀಡಿದ್ದಾರೆ. ಅದೇ ವಿಮಾನದಲ್ಲಿ ಇದ್ದ ಶುಶ್ರೂಷಕಿಯೊಬ್ಬರ ಸಹಾಯ ಪಡೆದು ವ್ಯಕ್ತಿಯನ್ನು ಪರಿಶೀಲಿಸಿದ್ದಾರೆ. ಹೃದಯ ಬಡಿತ ನಿಂತಿರುವುದನ್ನು ಗಮನಿಸಿ, ಕೂಡಲೇ ಎದೆಭಾಗವನ್ನು ಉಜ್ಜಿ ಕೃತಕ ಉಸಿರು ನೀಡಿದ್ದಾರೆ. ವಿಮಾನದಲ್ಲಿದ್ದ ಆಮ್ಲಜನಕದ ಸಿಲಿಂಡರ್ ಬಳಸಿಕೊಂಡಿದ್ದಾರೆ. ಇದರಿಂದ ವ್ಯಕ್ತಿಗೆ ಪ್ರಜ್ಞೆ ಬಂದಿದ್ದು, ಕೆಲ ಹೊತ್ತಿನ ಬಳಿಕ ಹಣ್ಣಿನ ರಸವನ್ನೂ ಕುಡಿದಿದ್ದಾರೆ.