<p><strong>ಮೈಸೂರು</strong>: ಮೈಸೂರು ವಿಶ್ವವಿದ್ಯಾಲಯದ ಬಿ.ಕಾಂ. ಹಾಗೂ ಬಿಬಿಎ ಪದವಿ ಮೂರನೇ ಸೆಮಿಸ್ಟರ್ನ ಕನ್ನಡ ಭಾಷಾ ಪುಸ್ತಕಗಳು ಮಾರುಕಟ್ಟೆಗೆ ಬಂದಿದ್ದು, ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.</p>.<p>ಕಳೆದ ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಬದಲು ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಜಾರಿಗೆ ಬಂದಿದೆ. ಅದರ ಅನ್ವಯ ಈ ವರ್ಷ ಮೂರನೇ ಸೆಮಿಸ್ಟರ್ಗೆ ಹೊಸ ಪಠ್ಯಕ್ರಮ ಜಾರಿಯಾಗಿದೆ. ಉಳಿದೆಲ್ಲ ವಿಷಯಗಳ ಪಠ್ಯಗಳು ಸಕಾಲಕ್ಕೆ ಬಂದರೂ ಪದವಿ ಕನ್ನಡ ಭಾಷಾ ಪಠ್ಯ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಕುರಿತು ‘ಪ್ರಜಾವಾಣಿ’ಯು ಆ. 20ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.</p>.<p>ಗುರುವಾರ ಸಂಜೆಯಿಂದಲೇ ‘ವಾಣಿಜ್ಯ ಗಂಗೋತ್ರಿ–3’ ಹಾಗೂ ‘ನಿರ್ವಹಣಾ ಗಂಗೋತ್ರಿ–3’ ಪಠ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳ ಕೈ ಸೇರಿದೆ. ‘ಗಣಕ ಗಂಗೋತ್ರಿ–3’ ಪುಸ್ತಕ ಇನ್ನಷ್ಟೇ ಬರಬೇಕಿದೆ.</p>.<p>‘ತರಗತಿಗಳು ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ಪಠ್ಯಪುಸ್ತಕ ಸಿಗದೇ ತೀವ್ರ ತೊಂದರೆ ಆಗಿತ್ತು. ಇದೀಗ ಪುಸ್ತಕಗಳು ಬಂದಿದ್ದು, ಶುಕ್ರವಾರದಿಂದಲೇ ಪಾಠ ಆರಂಭಿಸಿದ್ದೇವೆ. ವರದಿ ಮೂಲಕ ಗಮನ ಸೆಳೆದ ‘ಪ್ರಜಾವಾಣಿ’ಗೆ ಧನ್ಯವಾದ’ ಎಂದು ಪದವಿ ಕಾಲೇಜುಗಳ ಉಪನ್ಯಾಸಕರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ಮೈಸೂರು ವಿಶ್ವವಿದ್ಯಾಲಯದ ಬಿ.ಕಾಂ. ಹಾಗೂ ಬಿಬಿಎ ಪದವಿ ಮೂರನೇ ಸೆಮಿಸ್ಟರ್ನ ಕನ್ನಡ ಭಾಷಾ ಪುಸ್ತಕಗಳು ಮಾರುಕಟ್ಟೆಗೆ ಬಂದಿದ್ದು, ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.</p>.<p>ಕಳೆದ ವರ್ಷದಿಂದ ವಿಶ್ವವಿದ್ಯಾಲಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಬದಲು ರಾಜ್ಯ ಶಿಕ್ಷಣ ನೀತಿ (ಎಸ್ಇಪಿ) ಜಾರಿಗೆ ಬಂದಿದೆ. ಅದರ ಅನ್ವಯ ಈ ವರ್ಷ ಮೂರನೇ ಸೆಮಿಸ್ಟರ್ಗೆ ಹೊಸ ಪಠ್ಯಕ್ರಮ ಜಾರಿಯಾಗಿದೆ. ಉಳಿದೆಲ್ಲ ವಿಷಯಗಳ ಪಠ್ಯಗಳು ಸಕಾಲಕ್ಕೆ ಬಂದರೂ ಪದವಿ ಕನ್ನಡ ಭಾಷಾ ಪಠ್ಯ ಸಿಗದೇ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಕುರಿತು ‘ಪ್ರಜಾವಾಣಿ’ಯು ಆ. 20ರ ಸಂಚಿಕೆಯಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.</p>.<p>ಗುರುವಾರ ಸಂಜೆಯಿಂದಲೇ ‘ವಾಣಿಜ್ಯ ಗಂಗೋತ್ರಿ–3’ ಹಾಗೂ ‘ನಿರ್ವಹಣಾ ಗಂಗೋತ್ರಿ–3’ ಪಠ್ಯಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, ವಿದ್ಯಾರ್ಥಿಗಳ ಕೈ ಸೇರಿದೆ. ‘ಗಣಕ ಗಂಗೋತ್ರಿ–3’ ಪುಸ್ತಕ ಇನ್ನಷ್ಟೇ ಬರಬೇಕಿದೆ.</p>.<p>‘ತರಗತಿಗಳು ಆರಂಭಗೊಂಡು ಒಂದೂವರೆ ತಿಂಗಳು ಕಳೆದರೂ ಪಠ್ಯಪುಸ್ತಕ ಸಿಗದೇ ತೀವ್ರ ತೊಂದರೆ ಆಗಿತ್ತು. ಇದೀಗ ಪುಸ್ತಕಗಳು ಬಂದಿದ್ದು, ಶುಕ್ರವಾರದಿಂದಲೇ ಪಾಠ ಆರಂಭಿಸಿದ್ದೇವೆ. ವರದಿ ಮೂಲಕ ಗಮನ ಸೆಳೆದ ‘ಪ್ರಜಾವಾಣಿ’ಗೆ ಧನ್ಯವಾದ’ ಎಂದು ಪದವಿ ಕಾಲೇಜುಗಳ ಉಪನ್ಯಾಸಕರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>