<p><strong>ಮೈಸೂರು:</strong> ನಗರಕ್ಕೆ ಸಮೀಪದಲ್ಲಿರುವ ವರುಣ ಹೋಬಳಿಯ ಪ್ರದೇಶಗಳನ್ನು ಬೃಹತ್ ಮೈಸೂರು ಮಹಾನಗರಪಾಲಿಕೆ (ಬಿಎಂಸಿಸಿ) ವ್ಯಾಪ್ತಿಗೆ ಸೇರಸದಿರುವುದಕ್ಕೆ ಆಕ್ಷೇಪ ಸಲ್ಲಿಸಲಾಗಿದೆ.</p>.<p>ಇದಕ್ಕಾಗಿ ರಚಿಸಿಕೊಂಡಿರುವ ‘ಬೃಹತ್ ಮೈಸೂರು ಹೋರಾಟ ಸಮಿತಿ’ಯ ವತಿಯಿಂದ ಅಧಿಕೃತ ಆಕ್ಷೇಪಣೆ ಪತ್ರವನ್ನು ಅಂಚೆಯ ಮೂಲಕ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅವರಿಗೆ ರವಾನಿಸಲಾಯಿತು.</p>.<p>ಮೈಸೂರು ನಗರದ ಪೂರ್ವ ಭಾಗದ ವರುಣ ಹೋಬಳಿಯ ವರುಣ ಗ್ರಾಮ ಪಂಚಾಯಿತಿ, ಮೋಸಂಬಾಯನಹಳ್ಳಿ ಗ್ರಾಮ ಪಂಚಾಯಿತಿ, ವಾಜಮಂಗಲ ಗ್ರಾಮ ಪಂಚಾಯಿತಿ, ದೇವಲಾಪುರ ಗ್ರಾಮ ಪಂಚಾಯಿತಿ ಹಾಗೂ ಇದಕ್ಕೆ ಒಳಪಡುವ ಗ್ರಾಮಗಳು, ಬಡಾವಣೆಗಳನ್ನು ಸೇರಿಸುವಂತೆ ಕೋರಲಾಗಿದೆ.</p>.<p>ಆಕ್ಷೇಪಣೆ ಪತ್ರದ ಜೊತೆಗೆ ವರುಣ ಹೋಬಳಿಯ ಭಾಗದ 68 ಬಡಾವಣೆಗಳ ಪಟ್ಟಿಯನ್ನು ನೂರಾರು ಜನರ ಸಹಿಯೊಂದಿಗೆ ಸಲ್ಲಿಸಲಾಯಿತು.</p>.<p>ಬೃಹತ್ ಮೈಸೂರು ಹೋರಾಟ ಸಮಿತಿಯ ಸದಸ್ಯರಾದ ಶರತ್ ಪುಟ್ಟಬುದ್ದಿ, ಜಿಲ್ಲಾ ಪಂಚಾಯಿತಿ ನಿವೃತ್ತ ಸಿಇಒ ಶಿವಕುಮಾರ್, ಮೈಸೆಂ ಎಂಜಿನಿಯರಿಂಗ್ ಕಾಲೇಜಿನ ಟ್ರಸ್ಟಿ ಕಿಶೋರ್ ಬಿದ್ದಪ್ಪ, ಪ್ರವೀಣ್, ಸಿದ್ಧಾರ್ಥ, ಲೋಹಿತ್, ಪುಟ್ಟಸ್ವಾಮಿ, ನರಸಯ್ಯ, ಸುಬ್ಬಣ್ಣ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ನಗರಕ್ಕೆ ಸಮೀಪದಲ್ಲಿರುವ ವರುಣ ಹೋಬಳಿಯ ಪ್ರದೇಶಗಳನ್ನು ಬೃಹತ್ ಮೈಸೂರು ಮಹಾನಗರಪಾಲಿಕೆ (ಬಿಎಂಸಿಸಿ) ವ್ಯಾಪ್ತಿಗೆ ಸೇರಸದಿರುವುದಕ್ಕೆ ಆಕ್ಷೇಪ ಸಲ್ಲಿಸಲಾಗಿದೆ.</p>.<p>ಇದಕ್ಕಾಗಿ ರಚಿಸಿಕೊಂಡಿರುವ ‘ಬೃಹತ್ ಮೈಸೂರು ಹೋರಾಟ ಸಮಿತಿ’ಯ ವತಿಯಿಂದ ಅಧಿಕೃತ ಆಕ್ಷೇಪಣೆ ಪತ್ರವನ್ನು ಅಂಚೆಯ ಮೂಲಕ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್. ಸೆಲ್ವಕುಮಾರ್ ಅವರಿಗೆ ರವಾನಿಸಲಾಯಿತು.</p>.<p>ಮೈಸೂರು ನಗರದ ಪೂರ್ವ ಭಾಗದ ವರುಣ ಹೋಬಳಿಯ ವರುಣ ಗ್ರಾಮ ಪಂಚಾಯಿತಿ, ಮೋಸಂಬಾಯನಹಳ್ಳಿ ಗ್ರಾಮ ಪಂಚಾಯಿತಿ, ವಾಜಮಂಗಲ ಗ್ರಾಮ ಪಂಚಾಯಿತಿ, ದೇವಲಾಪುರ ಗ್ರಾಮ ಪಂಚಾಯಿತಿ ಹಾಗೂ ಇದಕ್ಕೆ ಒಳಪಡುವ ಗ್ರಾಮಗಳು, ಬಡಾವಣೆಗಳನ್ನು ಸೇರಿಸುವಂತೆ ಕೋರಲಾಗಿದೆ.</p>.<p>ಆಕ್ಷೇಪಣೆ ಪತ್ರದ ಜೊತೆಗೆ ವರುಣ ಹೋಬಳಿಯ ಭಾಗದ 68 ಬಡಾವಣೆಗಳ ಪಟ್ಟಿಯನ್ನು ನೂರಾರು ಜನರ ಸಹಿಯೊಂದಿಗೆ ಸಲ್ಲಿಸಲಾಯಿತು.</p>.<p>ಬೃಹತ್ ಮೈಸೂರು ಹೋರಾಟ ಸಮಿತಿಯ ಸದಸ್ಯರಾದ ಶರತ್ ಪುಟ್ಟಬುದ್ದಿ, ಜಿಲ್ಲಾ ಪಂಚಾಯಿತಿ ನಿವೃತ್ತ ಸಿಇಒ ಶಿವಕುಮಾರ್, ಮೈಸೆಂ ಎಂಜಿನಿಯರಿಂಗ್ ಕಾಲೇಜಿನ ಟ್ರಸ್ಟಿ ಕಿಶೋರ್ ಬಿದ್ದಪ್ಪ, ಪ್ರವೀಣ್, ಸಿದ್ಧಾರ್ಥ, ಲೋಹಿತ್, ಪುಟ್ಟಸ್ವಾಮಿ, ನರಸಯ್ಯ, ಸುಬ್ಬಣ್ಣ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>