ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

Mysuru Dasara: ನಾಡಹಬ್ಬದಲ್ಲಿ ಈ ಬಾರಿಯೂ ಅಧಿಕಾರಿಗಳದ್ದೇ ‘ದರ್ಬಾರ್‌’

ಅಧಿಕಾರೇತರರ ನೇಮಕಕ್ಕಿಲ್ಲ ಆದ್ಯತೆ!
Published : 19 ಸೆಪ್ಟೆಂಬರ್ 2024, 4:40 IST
Last Updated : 19 ಸೆಪ್ಟೆಂಬರ್ 2024, 4:40 IST
ಫಾಲೋ ಮಾಡಿ
Comments
ಮೈಸೂರಿನಲ್ಲಿ ಅ.3ರಿಂದ ಆರಂಭಗೊಳ್ಳಲಿರುವ ‘ನಾಡಹಬ್ಬ ಮೈಸೂರು ದಸರಾ’ ಮಹೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತೆ ಮಾಡಬೇಕಾದ ಈ ‘ಅದ್ದೂರಿ’ ಉತ್ಸವಕ್ಕೆ ನಡೆದಿರುವ ತಯಾರಿಗಳು ಇನ್ನೂ ಅಂತಿಮ ರೂಪವನ್ನು ಪಡೆದುಕೊಂಡೇ ಇಲ್ಲ. ಸಿದ್ಧತೆಯನ್ನು ಚುರುಕುಗೊಳಿಸುವಲ್ಲಿ ಜಿಲ್ಲಾಡಳಿತವಾಗಲಿ, ಸರ್ಕಾರವಾಗಲಿ ಗಮನಹರಿಸಿಲ್ಲ. ಉಪ ಸಮಿತಿಗಳನ್ನು ರಚಿಸಲಾಗಿದೆಯಾದರೂ ಬಹುತೇಕ ಕಾರ್ಯಕ್ರಮಗಳು ಇನ್ನೂ ಅಂತಿಮಗೊಂಡಿಲ್ಲ. ‘ಚರ್ಚೆ ಅಥವಾ ಚಿಂತನೆಯ ಹಂತದಲ್ಲಿವೆ’ ಎಂಬ ಉತ್ತರವೇ ಅಧಿಕಾರಿಗಳಿಂದ ಬರುತ್ತಿದೆ. ಈ ಎಲ್ಲದರ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ ಸರಣಿ ಆರಂಭಿಸಿದೆ.
ಜಿ.ಲಕ್ಷ್ಮೀಕಾಂತ ರೆಡ್ಡಿ
ಜಿ.ಲಕ್ಷ್ಮೀಕಾಂತ ರೆಡ್ಡಿ
ದಸರಾ ಮಹೋತ್ಸವದ ಉಪ ಸಮಿತಿಗಳಿಗೆ ಅಧಿಕಾರೇತರರ ನೇಮಕದ ಬಗ್ಗೆ ಈವರೆಗೂ ಯಾವುದೇ ತೀರ್ಮಾನವಾಗಿಲ್ಲ
ಜಿ.ಲಕ್ಷ್ಮೀಕಾಂತ ರೆಡ್ಡಿ ಜಿಲ್ಲಾಧಿಕಾರಿ
ಚುಕ್ಕಾಣಿ ಹಿಡಿದಿರುವವರು ‘ಹೊಸಬರು’
-ಈ ಬಾರಿ ದಸರಾ ಮಹೋತ್ಸವ ರೂಪಿಸುವಲ್ಲಿ ಪ್ರಮುಖ ಸ್ಥಾನದಲ್ಲಿರುವ ಅಧಿಕಾರಿಗಳಲ್ಲಿ ಹೊಸಬರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳಾ ಅಧಿಕಾರಿಗಳೇ ಹಲವು ಪ್ರಮುಖ ಹುದ್ದೆಗಳಲ್ಲಿರುವುದು ಈ ಸಲದ ವಿಶೇಷವಾಗಿದೆ. ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅವರಿಗೆ ದಸರಾ ವಿಶೇಷಾಧಿಕಾರಿಯಾಗಿ ಇದು ಮೊದಲನೇ ದಸರಾ. ಹಿಂದೆ ಅವರು ಮಹಾನಗರಪಾಲಿಕೆ ಆಯುಕ್ತರಾಗಿದ್ದರಾದರು. ಈಗ ಇವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹತ್ವದ ಹೊಣೆ ಹೊತ್ತಿರುವ ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್‌ ಅವರಿಗೂ ಇದು ಹೊಸ ಅನುಭವ. ಹೋದ ವರ್ಷ ಅವರು ಎಸ್ಪಿಯಾಗಿದ್ದರು. ಈ ಬಾರಿ ಮೆರವಣಿಗೆ ಪಂಜಿನ ಕವಾಯತು ಉಪ ಸಮಿತಿಯ ಉಪ ವಿಶೇಷಾಧಿಕಾರಿಯೂ ಹೌದು. ಎಸ್ಪಿ ಎನ್.ವಿಷ್ಣುವರ್ಧನ್‌ (ಯುವ ಸಂಭ್ರಮ ಯುವ ದಸರಾ) ಮುಡಾ ಆಯುಕ್ತ ಎ.ಎನ್. ರಘುನಂದನ್ (ಆಹಾರ ಮೇಳ) ಸೆಸ್ಕ್‌ ವ್ಯವಸ್ಥಾಪಕ ನಿರ್ದೇಶಕಿ ಜಿ. ಶೀಲಾ (ವಿದ್ಯುತ್‌ ದೀಪಾಲಂಕಾರ) ಎಟಿಐ ಜಂಟಿ ನಿರ್ದೇಶಕಿ ಪ್ರಿಯದರ್ಶಿನಿ ಕೆ. (ಮಹಿಳಾ ಮಕ್ಕಳ ದಸರಾ) ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್‌ ವಿ.ಕೆ. (ಕ್ರೀಡಾ ದಸರಾ) ಮೊದಲಾದವರಿಗೆ ಹೊಸ ‘ಜವಾಬ್ದಾರಿ’ಯ ಅನುಭವವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT