<p><strong>ಮೈಸೂರು:</strong> ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಇಂದು (ಶನಿವಾರ) ನಡೆಯಲಿದ್ದು, ₹ 2,578.03 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. </p>.<p>ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉದ್ದೇಶಿತ ₹192.99 ಕೋಟಿ ವೆಚ್ಚದ ‘ಯುನಿಟಿ ಮಾಲ್’, ಬನ್ನಿಮಂಟಪದಲ್ಲಿ ₹ 120 ಕೋಟಿ ವೆಚ್ಚದ ಕೆಎಸ್ಆರ್ಟಿಸಿ ಬಸ್ನಿಲ್ದಾಣ, ₹ 409 ಕೋಟಿ ವೆಚ್ಚದ ಭೂಗತ ಕೇಬಲ್ ಅಳವಡಿಕೆಯ ಸೆಸ್ಕ್ ಕಾಮಗಾರಿಗಳು ಶಂಕುಸ್ಥಾಪನೆಯಾಗುವ ನಗರದ ಮಹತ್ವಾಕಾಂಕ್ಷಿ ಯೋಜನೆಯಾಗಿವೆ. </p>.<p>ಇದಲ್ಲದೇ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಉದ್ದೇಶಿಸಲಾಗಿರುವ ತಲಾ ₹ 9.5 ಕೋಟಿ ವೆಚ್ಚದ ನೀರಿನ ಕಾರಂಜಿ, ಇ–ಬ್ಲಾಕ್ ಅಭಿವೃದ್ಧಿ ಹಾಗೂ ₹ 1 ಕೋಟಿ ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ, ₹ 3.59 ಕೋಟಿಯ ‘ಡ್ರ್ಯಾಗನ್ ಬೋಟಿಂಗ್ ಕೊಳ’ ಸೇರಿದಂತೆ ₹ 23.59 ಕೋಟಿ ವೆಚ್ಚದ ಕಾಮಗಾರಿಗಳೂ ಇವೆ. </p>.<p>ಲೋಕೋಪಯೋಗಿ ಇಲಾಖೆಯು 108.56 ಕೋಟಿಯ ವೆಚ್ಚದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ದೀನ್ ದಯಾಳ್ ಉಪಾಧ್ಯಾಯ ಬಾಲಕ– ಬಾಲಕಿಯರ ವಿದ್ಯಾರ್ಥಿ ನಿಲಯಗಳು, ನಂಜನಗೂಡು, ನರಸಿಂಹರಾಜ, ಕೃಷ್ಣರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ವಿದ್ಯಾರ್ಥಿನಿಲಯಗಳ ಕಾರ್ಯಾರಂಭಕ್ಕೆ ಚಾಲನೆ ಸಿಗಲಿದೆ. </p>.<p>ಕಾಂಕ್ರೀಟ್ ರಸ್ತೆ ಕಾಮಗಾರಿ: ₹393.41 ಕೋಟಿ ವೆಚ್ಚದಲ್ಲಿ ಜೆಎಲ್ಬಿ, ಹುಣಸೂರು– ಬೋಗಾದಿ, ಇರ್ವಿನ್, ಹಾರ್ಡಿಂಜ್ ವೃತ್ತದಿಂದ ಕೊಲಂಬಿಯಾ ಏಷ್ಯಾ, ಮಹದೇವಪುರ, ಮಾನಂದವಾಡಿ, ಕುಕ್ಕರಹಳ್ಳಿ ಜಂಕ್ಷನ್, ವಾಣಿವಿಲಾಸ ರಸ್ತೆಗಳ ಕಾಂಕ್ರೀಟ್ ಕಾಮಗಾರಿ, ₹ 380.84 ಕೋಟಿಯ ಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನಡೆಯಲಿದೆ.</p>.<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ₹ 55.5 ಕೋಟಿ, ಕೆಪಿಟಿಸಿಎಲ್ನ ₹ 38.73 ಕೋಟಿ, ಸಮಾಜ ಕಲ್ಯಾಣ ಇಲಾಖೆಯ ₹ 29.35, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹ 14.63 ಕೋಟಿ, ಸಣ್ಣ ನೀರಾವರಿ ಇಲಾಖೆಯ ₹ 13 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ₹ 10.8 ಕೋಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ₹ 163.78 ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿವೆ. </p>.<p>ಕಾರ್ಯಕ್ರಮದ ವೇದಿಕೆಯ ಸಿದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ವೀಕ್ಷಿಸಿದರು.</p>.<p><strong>ನೀರಾವರಿ:</strong> ₹ 419.86 ಕೋಟಿ ಜಲಸಂಪನ್ಮೂಲ ಇಲಾಖೆಯ ₹ 419.86 ಕೋಟಿ ವೆಚ್ಚದ ಕಾಮಗಾರಿಗಳು ಅನುಷ್ಠಾನಗೊಳ್ಳಲಿದ್ದು ನಂಜನಗೂಡು ತಾಲ್ಲೂಕಿನ ಕೆರೆಗಳಿಗೆ ನೀರು ಪೂರೈಸಲು ಹೆಗ್ಗಡಹಳ್ಳಿಯಲ್ಲಿ ಕಬಿನಿ ನದಿಯಲ್ಲಿ ಸ್ಥಾಪಿಸಲಾದ ₹ 58.8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಂಪ್ಹೌಸ್ ಉದ್ಘಾಟನೆಗೊಳ್ಳಲಿದೆ. ಪಿರಿಯಾಪಟ್ಟಣ ಎಚ್.ಡಿ.ಕೋಟೆಯಲ್ಲಿ ನಾಲೆಗಳು ಕೆಆರ್ನಗರ ಪಿರಿಯಾಪಟ್ಟಣ ತಾಲ್ಲೂಕಿನ ಏತನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದೆ. </p>.<p><strong>ಕ್ಯಾನ್ಸರ್ ಕೇಂದ್ರ ಗಾಂಧಿ ಭವನ ಉದ್ಘಾಟನೆ</strong> </p><p>ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ತಲಾ ₹ 50 ಕೋಟಿ ವೆಚ್ಚದ ಕ್ಯಾನ್ಸರ್ ಕೇಂದ್ರ ಎಂಡೋಕ್ರೋನಾಲಜಿ ಕೇಂದ್ರ ಹಾಗೂ ₹ 75.5 ಕೋಟಿ ವೆಚ್ಚದ ಕಿಡ್ನಿ ಕೇಂದ್ರ ಕಟ್ಟಡಗಳು ಲೋಕಾರ್ಪಣೆ ಆಗಲಿವೆ. ಕಾರ್ಮಿಕ ಇಲಾಖೆಯಿಂದ ಚಾಮುಂಡಿಪುರಂನಲ್ಲಿ ₹ 19.76 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಕಾರ್ಮಿಕ ಭವನ ಕ್ರೀಡಾ ಇಲಾಖೆಯಿಂದ ನಿರ್ಮಾಣವಾದ ₹ 3.5 ಕೋಟಿಯ ಕ್ರೀಡಾ ವಿಜ್ಞಾನ ಕೇಂದ್ರ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ವಾರ್ತಾ ಇಲಾಖೆಯಿಂದ ನಿರ್ಮಿಸಿರುವ ₹ 3 ಕೋಟಿಯ ಗಾಂಧಿ ಭವನ ಉದ್ಘಾಟನೆಯಾಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು:</strong> ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ರಾಜ್ಯ ಸರ್ಕಾರದ ಸಾಧನಾ ಸಮಾವೇಶ ಇಂದು (ಶನಿವಾರ) ನಡೆಯಲಿದ್ದು, ₹ 2,578.03 ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸಲಿದ್ದಾರೆ. </p>.<p>ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಉದ್ದೇಶಿತ ₹192.99 ಕೋಟಿ ವೆಚ್ಚದ ‘ಯುನಿಟಿ ಮಾಲ್’, ಬನ್ನಿಮಂಟಪದಲ್ಲಿ ₹ 120 ಕೋಟಿ ವೆಚ್ಚದ ಕೆಎಸ್ಆರ್ಟಿಸಿ ಬಸ್ನಿಲ್ದಾಣ, ₹ 409 ಕೋಟಿ ವೆಚ್ಚದ ಭೂಗತ ಕೇಬಲ್ ಅಳವಡಿಕೆಯ ಸೆಸ್ಕ್ ಕಾಮಗಾರಿಗಳು ಶಂಕುಸ್ಥಾಪನೆಯಾಗುವ ನಗರದ ಮಹತ್ವಾಕಾಂಕ್ಷಿ ಯೋಜನೆಯಾಗಿವೆ. </p>.<p>ಇದಲ್ಲದೇ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಉದ್ದೇಶಿಸಲಾಗಿರುವ ತಲಾ ₹ 9.5 ಕೋಟಿ ವೆಚ್ಚದ ನೀರಿನ ಕಾರಂಜಿ, ಇ–ಬ್ಲಾಕ್ ಅಭಿವೃದ್ಧಿ ಹಾಗೂ ₹ 1 ಕೋಟಿ ವೆಚ್ಚದ ಮೂಲಸೌಕರ್ಯ ಅಭಿವೃದ್ಧಿ, ₹ 3.59 ಕೋಟಿಯ ‘ಡ್ರ್ಯಾಗನ್ ಬೋಟಿಂಗ್ ಕೊಳ’ ಸೇರಿದಂತೆ ₹ 23.59 ಕೋಟಿ ವೆಚ್ಚದ ಕಾಮಗಾರಿಗಳೂ ಇವೆ. </p>.<p>ಲೋಕೋಪಯೋಗಿ ಇಲಾಖೆಯು 108.56 ಕೋಟಿಯ ವೆಚ್ಚದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಥಾಪಿಸಿರುವ ದೀನ್ ದಯಾಳ್ ಉಪಾಧ್ಯಾಯ ಬಾಲಕ– ಬಾಲಕಿಯರ ವಿದ್ಯಾರ್ಥಿ ನಿಲಯಗಳು, ನಂಜನಗೂಡು, ನರಸಿಂಹರಾಜ, ಕೃಷ್ಣರಾಜ, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ವಿದ್ಯಾರ್ಥಿನಿಲಯಗಳ ಕಾರ್ಯಾರಂಭಕ್ಕೆ ಚಾಲನೆ ಸಿಗಲಿದೆ. </p>.<p>ಕಾಂಕ್ರೀಟ್ ರಸ್ತೆ ಕಾಮಗಾರಿ: ₹393.41 ಕೋಟಿ ವೆಚ್ಚದಲ್ಲಿ ಜೆಎಲ್ಬಿ, ಹುಣಸೂರು– ಬೋಗಾದಿ, ಇರ್ವಿನ್, ಹಾರ್ಡಿಂಜ್ ವೃತ್ತದಿಂದ ಕೊಲಂಬಿಯಾ ಏಷ್ಯಾ, ಮಹದೇವಪುರ, ಮಾನಂದವಾಡಿ, ಕುಕ್ಕರಹಳ್ಳಿ ಜಂಕ್ಷನ್, ವಾಣಿವಿಲಾಸ ರಸ್ತೆಗಳ ಕಾಂಕ್ರೀಟ್ ಕಾಮಗಾರಿ, ₹ 380.84 ಕೋಟಿಯ ಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನಡೆಯಲಿದೆ.</p>.<p>ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ₹ 55.5 ಕೋಟಿ, ಕೆಪಿಟಿಸಿಎಲ್ನ ₹ 38.73 ಕೋಟಿ, ಸಮಾಜ ಕಲ್ಯಾಣ ಇಲಾಖೆಯ ₹ 29.35, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ₹ 14.63 ಕೋಟಿ, ಸಣ್ಣ ನೀರಾವರಿ ಇಲಾಖೆಯ ₹ 13 ಕೋಟಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ₹ 10.8 ಕೋಟಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ₹ 163.78 ವೆಚ್ಚದ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನಡೆಯಲಿವೆ. </p>.<p>ಕಾರ್ಯಕ್ರಮದ ವೇದಿಕೆಯ ಸಿದ್ಧತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ವೀಕ್ಷಿಸಿದರು.</p>.<p><strong>ನೀರಾವರಿ:</strong> ₹ 419.86 ಕೋಟಿ ಜಲಸಂಪನ್ಮೂಲ ಇಲಾಖೆಯ ₹ 419.86 ಕೋಟಿ ವೆಚ್ಚದ ಕಾಮಗಾರಿಗಳು ಅನುಷ್ಠಾನಗೊಳ್ಳಲಿದ್ದು ನಂಜನಗೂಡು ತಾಲ್ಲೂಕಿನ ಕೆರೆಗಳಿಗೆ ನೀರು ಪೂರೈಸಲು ಹೆಗ್ಗಡಹಳ್ಳಿಯಲ್ಲಿ ಕಬಿನಿ ನದಿಯಲ್ಲಿ ಸ್ಥಾಪಿಸಲಾದ ₹ 58.8 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪಂಪ್ಹೌಸ್ ಉದ್ಘಾಟನೆಗೊಳ್ಳಲಿದೆ. ಪಿರಿಯಾಪಟ್ಟಣ ಎಚ್.ಡಿ.ಕೋಟೆಯಲ್ಲಿ ನಾಲೆಗಳು ಕೆಆರ್ನಗರ ಪಿರಿಯಾಪಟ್ಟಣ ತಾಲ್ಲೂಕಿನ ಏತನೀರಾವರಿ ಯೋಜನೆಗಳಿಗೆ ಶಂಕುಸ್ಥಾಪನೆ ನಡೆಯಲಿದೆ. </p>.<p><strong>ಕ್ಯಾನ್ಸರ್ ಕೇಂದ್ರ ಗಾಂಧಿ ಭವನ ಉದ್ಘಾಟನೆ</strong> </p><p>ಪಿಕೆಟಿಬಿ ಆಸ್ಪತ್ರೆ ಆವರಣದಲ್ಲಿ ನಿರ್ಮಿಸಲಾದ ತಲಾ ₹ 50 ಕೋಟಿ ವೆಚ್ಚದ ಕ್ಯಾನ್ಸರ್ ಕೇಂದ್ರ ಎಂಡೋಕ್ರೋನಾಲಜಿ ಕೇಂದ್ರ ಹಾಗೂ ₹ 75.5 ಕೋಟಿ ವೆಚ್ಚದ ಕಿಡ್ನಿ ಕೇಂದ್ರ ಕಟ್ಟಡಗಳು ಲೋಕಾರ್ಪಣೆ ಆಗಲಿವೆ. ಕಾರ್ಮಿಕ ಇಲಾಖೆಯಿಂದ ಚಾಮುಂಡಿಪುರಂನಲ್ಲಿ ₹ 19.76 ಕೋಟಿ ಅನುದಾನದಲ್ಲಿ ನಿರ್ಮಾಣಗೊಂಡ ಕಾರ್ಮಿಕ ಭವನ ಕ್ರೀಡಾ ಇಲಾಖೆಯಿಂದ ನಿರ್ಮಾಣವಾದ ₹ 3.5 ಕೋಟಿಯ ಕ್ರೀಡಾ ವಿಜ್ಞಾನ ಕೇಂದ್ರ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಸಮೀಪದಲ್ಲಿ ವಾರ್ತಾ ಇಲಾಖೆಯಿಂದ ನಿರ್ಮಿಸಿರುವ ₹ 3 ಕೋಟಿಯ ಗಾಂಧಿ ಭವನ ಉದ್ಘಾಟನೆಯಾಗಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>