<p><strong>ಮೈಸೂರು</strong>: ‘ಡ್ರಗ್ಸ್ ಮುಕ್ತ ಮೈಸೂರು’ ಆಗು ಮಾಡಲು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಎದುರು ಆಯೋಜಿಸಿದ್ದ ಬೈಕ್ ರ್ಯಾಲಿಗೆ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸ್ಥಾಪಕ ವಿನಯ್ ಗುರೂಜಿ ಭಾನುವಾರ ಚಾಲನೆ ನೀಡಿದರು. </p>.<p>ಬಿಜೆಪಿ ಮುಖಂಡ ಹಾಗೂ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಡಾ.ಶುಶ್ರುತ್ ಗೌಡ ಆಯೋಜಿಸಿದ್ದ ರ್ಯಾಲಿಯು ರಾಮಸ್ವಾಮಿ ವೃತ್ತದ ವರೆಗೂ ಕ್ರಮಿಸಿತು. ಪ್ಲೆಕಾರ್ಡ್, ಭಿತ್ತಿಪತ್ರಗಳನ್ನು ಹಿಡಿದಿದ್ದ ಯುವಕರು ಜಾಗೃತಿ ಮೂಡಿಸಿದರು. </p>.<p>ವಿನಯ್ ಗುರೂಜಿ ಮಾತನಾಡಿ, ‘ಯುವಕರೇ ದೇಶದ ಆಸ್ತಿ. ಅವರು ಮಾದಕ ವಸ್ತುಗಳ ವ್ಯಸನಿಗಳು ಆಗಬಾರದು. ಮೈಸೂರಿನಲ್ಲಿ ರಾಜ್ಯವೇ ಬೆಚ್ಚಿ ಬೀಳುವಂತ ಡ್ರಗ್ಸ್ ಸಿಕ್ಕಿರುವುದು ಆತಂಕ ಮೂಡಿಸುತ್ತದೆ. ಡ್ರಗ್ಸ್ ಮುಕ್ತ ಮೈಸೂರು ನಿರ್ಮಾಣಕ್ಕೆ ರ್ಯಾಲಿಯು ಮುನ್ನಡಿ ಬರೆದಿದೆ’ ಎಂದರು. </p>.<p>ಶಿಲ್ಪಿ ಅರುಣ್ ಯೋಗಿರಾಜ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ, ಯೋಗಪಟು ಶ್ರೀಹರಿ, ಡಾ.ಎಚ್.ಕೆ.ಚೇತನ್, ಸಮಾಜ ಸೇವಕರಾದ ದಿನೇಶ್ಗೌಡ, ರವಿಶಂಕರ್, ಸೋಮಣ್ಣ, ಲೋಕೇಶ್ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೈಸೂರು</strong>: ‘ಡ್ರಗ್ಸ್ ಮುಕ್ತ ಮೈಸೂರು’ ಆಗು ಮಾಡಲು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ನಗರದ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇಗುಲದ ಎದುರು ಆಯೋಜಿಸಿದ್ದ ಬೈಕ್ ರ್ಯಾಲಿಗೆ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ಸ್ಥಾಪಕ ವಿನಯ್ ಗುರೂಜಿ ಭಾನುವಾರ ಚಾಲನೆ ನೀಡಿದರು. </p>.<p>ಬಿಜೆಪಿ ಮುಖಂಡ ಹಾಗೂ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಮುಖ್ಯಸ್ಥ ಡಾ.ಶುಶ್ರುತ್ ಗೌಡ ಆಯೋಜಿಸಿದ್ದ ರ್ಯಾಲಿಯು ರಾಮಸ್ವಾಮಿ ವೃತ್ತದ ವರೆಗೂ ಕ್ರಮಿಸಿತು. ಪ್ಲೆಕಾರ್ಡ್, ಭಿತ್ತಿಪತ್ರಗಳನ್ನು ಹಿಡಿದಿದ್ದ ಯುವಕರು ಜಾಗೃತಿ ಮೂಡಿಸಿದರು. </p>.<p>ವಿನಯ್ ಗುರೂಜಿ ಮಾತನಾಡಿ, ‘ಯುವಕರೇ ದೇಶದ ಆಸ್ತಿ. ಅವರು ಮಾದಕ ವಸ್ತುಗಳ ವ್ಯಸನಿಗಳು ಆಗಬಾರದು. ಮೈಸೂರಿನಲ್ಲಿ ರಾಜ್ಯವೇ ಬೆಚ್ಚಿ ಬೀಳುವಂತ ಡ್ರಗ್ಸ್ ಸಿಕ್ಕಿರುವುದು ಆತಂಕ ಮೂಡಿಸುತ್ತದೆ. ಡ್ರಗ್ಸ್ ಮುಕ್ತ ಮೈಸೂರು ನಿರ್ಮಾಣಕ್ಕೆ ರ್ಯಾಲಿಯು ಮುನ್ನಡಿ ಬರೆದಿದೆ’ ಎಂದರು. </p>.<p>ಶಿಲ್ಪಿ ಅರುಣ್ ಯೋಗಿರಾಜ್, ಬಿಜೆಪಿ ಮುಖಂಡ ಸಂದೇಶ್ ಸ್ವಾಮಿ, ಯೋಗಪಟು ಶ್ರೀಹರಿ, ಡಾ.ಎಚ್.ಕೆ.ಚೇತನ್, ಸಮಾಜ ಸೇವಕರಾದ ದಿನೇಶ್ಗೌಡ, ರವಿಶಂಕರ್, ಸೋಮಣ್ಣ, ಲೋಕೇಶ್ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>